ತೊಗರಿ ಕಡ್ಡಿಯಿಂದ ಕಾಂಪೋಸ್ಟ್‌ ಗೊಬ್ಬರ ತಯಾರಿಕೆ


Team Udayavani, Feb 17, 2020, 1:26 PM IST

17-February-13

ಬೀದರ: ತೊಗರಿ ಕಡ್ಡಿಯನ್ನು ಸಮಗ್ರವಾಗಿ ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡಿದಲ್ಲಿ ಕಾಂಪೋಸ್ಟ್‌ ರೀತಿಯಲ್ಲಿ ಮಾರ್ಪಾಡು ಮಾಡಬಹುದೆಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ರೈತರಿಗೆ ಸಲಹೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಪ್ರಮುಖ ಬೆಳೆಯಾದ ತೊಗರಿಯನ್ನು ಹೆಚ್ಚಾಗಿ ಒಣ ಪ್ರದೇಶದಲ್ಲಿ ಬೆಳೆಯುತ್ತಿದ್ದು, ಕೆಲ ರೈತರು ನೀರಿನ ಲಭ್ಯತೆ ಇದ್ದಲ್ಲಿ ನೀರಾವರಿ ತೊಗರಿ ಹಾಗೂ ಕೆಲವು ಪ್ರಗತಿಪರ ರೈತರು ನಾಟಿ ತೊಗರಿ ಕೂಡ ಬೆಳೆಯುವುದುಂಟು. ಒಣ ಪ್ರದೇಶದಲ್ಲಿ ಬೆಳೆದ ತೊಗರಿ ಹೆಚ್ಚಾಗಿ ಕಡ್ಡಿಯಿಂದ ಕೂಡಿರುತ್ತದೆ. ನೀರಾವರಿ ತೊಗರಿ ಹೆಚ್ಚಾಗಿ ಕೆಳಭಾಗದಿಂದ ದಪ್ಪವಾಗಿರುವುದರಿಂದ ಇಂತಹ ತೊಗರಿ ಕಟ್ಟಿಗೆಯನ್ನು ಹೆಚ್ಚಾಗಿ ಉರುವಲಿಗೆ ಉಪಯೋಗಿಸುತ್ತಾರೆ.

ತೊಗರಿ ಗಿಡದ ಮೇಲ್ಭಾಗ ಹೆಚ್ಚಾಗಿ ಸಣ್ಣದಾದ ಕಡ್ಡಿ ಇರುವುದರಿಂದ ಭಾಗಶಃ ರೈತರು ಜಮೀನಿನಲ್ಲಿಯೇ ಬಿಟ್ಟು ಹೋಗುತ್ತಾರೆ. ಇದಕ್ಕೆ ಗೊಳ್ಳಿ (ಗೊನ್ನೆ ಹುಳು) ಮಣ್ಣೇರಿಸಿ ಬಿಡುತ್ತದೆ. ಹೀಗೆ ಅದು ಮಣ್ಣಾಗಿ ಬಿಡುತ್ತದೆ. ಇದನ್ನು ಈ ಕೆಳಕಂಡಂತೆ ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡಿದಲ್ಲಿ ಒಳ್ಳೆಯ ಕಾಂಪೋಸ್ಟ್‌ ರೀತಿಯಲ್ಲಿ ಮಾರ್ಪಾಡು ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದ್ದರಿಂದ ಜಿಲ್ಲೆಯ ಎಲ್ಲ ರೈತರು ಈ ವೈಜ್ಞಾನಿಕ ಮಾಹಿತಿ ಅಳವಡಿಸಿಕೊಂಡು ಫೆಬ್ರವರಿಯಲ್ಲಿ ಅಳವಡಿಸಿಕೊಂಡಲ್ಲಿ ಜೂನ್‌ (ಬಿತ್ತುವ ಸಮಯಕ್ಕೆ ಸರಿಯಾಗಿ) ತಿಂಗಳಿಗೆ ಒಳ್ಳೆಯ ಕಾಂಪೋಸ್ಟ್‌ ಗೊಬ್ಬರ ಜಮೀನಿಗೆ ಉಪಯೋಗಿಸಲು ಉಪಕಾರಿಯಾಗುವುದೆಂದು ತಿಳಿಸಿದ್ದಾರೆ.

ಗೊಬ್ಬರ ತಯಾರಿಸುವ ವಿಧಾನ ಹೇಗೆ?
10 ಅಡಿ ಉದ್ದ, 6 ಅಡಿ ಅಗಲ, 4 ಅಡಿ ಅಳತೆಯ ಆಳದ ಕಾಂಪೋಸ್ಟ್‌ ಗುಂಡಿ ತಯಾರಿಸಬೇಕು. ಗುಂಡಿಯಲ್ಲಿ ಮೊದಲ 1 ಅಡಿ ಎತ್ತರದವರೆಗೆ ತೊಗರಿ ಕಟ್ಟಿಗೆ ಹಾಕಬೇಕು. ಸಗಣಿ ರಾಡಿ ತಯಾರಿಸಿ ಕಾಂಪೋಸ್ಟ್‌ ಕಲ್ಚರನ್ನು (1 ಟನ್‌ ತೊಗರಿ ಕಟ್ಟಿಗೆಗೆ 1 ಕಿ.ಗ್ರಾಂ. ಕಾಂಪೋಸ್ಟ್‌ ಕಲ್ಚರ್‌ ಬೇಕಾಗುತ್ತದೆ) ಬೆರೆಸಿ ಕಟ್ಟಿಗೆ ಮೇಲೆ ಸಿಂಪರಣೆ ಮಾಡಬೇಕು. ಹೀಗೆ 2-3 ಸ್ಥಿರದಲ್ಲಿ ಲೇಯರ್‌ ತುಂಬಿರಿ. ಗುಂಡಿ ತುಂಬಿದ ನಂತರ ಕಟ್ಟಿಗೆಯು 1 ಅಡಿ ಮೇಲೆ ಬರುವವರೆಗೂ ತುಂಬಿಸಬೇಕು.

ನಂತರ 4-5 ಕೊಡ ನೀರು ಸುರಿಯಬೇಕು. ತೊಗರಿ ಕಟ್ಟಿಗೆ ಮೇಲೆ 2-3 ಇಂಚು ಮಣ್ಣನ್ನು ಕಟ್ಟಿಗೆ ಮುಚ್ಚುವಂತೆ ಮಾಡಿ ಅಥವಾ ಕೆಸರಿನಿಂದ ಸವರಬೇಕು. (ಅವಶ್ಯವೆನಿಸಿದಲ್ಲಿ 15 ದಿನಕ್ಕೆ ನೀರಿನಿಂದ ಸಿಂಪಡಿಸುವುದು) 4 ತಿಂಗಳಲ್ಲಿ ಸಂಪದ್ಭರಿತ ಕಾಂಪೋಸ್ಟ್‌ ಗೊಬ್ಬರ ತಯಾರಾಗಿರುತ್ತದೆ.

ಟಾಪ್ ನ್ಯೂಸ್

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ರಮೇಶ ಕುಮಾರ್ ಪಾಂಡೆ ನಿಧನ

Bidar ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ರಮೇಶ ಕುಮಾರ್ ಪಾಂಡೆ ನಿಧನ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

1-eqwewqeqwe

Bidar; ಬಿಜೆಪಿಗೆ ನಾಗಮಾರಪಳ್ಳಿ ಕುಟುಂಬದ ಬೆಂಬಲ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.