ತರಕಾರಿಯಲ್ಲಿ ಭರಪೂರ ಲಾಭ ಕಂಡ ರೈತ
7 ಎಕರೆ ಭೂಮಿಯಲ್ಲಿ ಹನಿ ನೀರಾವರಿ ವ್ಯವಸ್ಥೆ ವರ್ಷಕ್ಕೆ 5ರಿಂದ 5.50 ಲಕ್ಷ ಆದಾಯ
Team Udayavani, Feb 23, 2020, 11:32 AM IST
ಬೀದರ: ತರಕಾರಿ ಬೆಳೆಯಿರಿ ಎಂದರೆ ಉಳುಮೆ ಮಾಡಬೇಕು, ನಾಟಿ ಮಾಡಬೇಕು, ಕಾಯಿ ಕಡಿಯಬೇಕು, ಮಾರುಕಟ್ಟೆಗೆ ಕಳಿಸಬೇಕು, ಬಾಗವಾನರಿಗೆ ಅಡ್ಡಾದಿಡ್ಡಿ ದರಕ್ಕೆ ತರಕಾರಿ ಕೊಟ್ಟು ಕೈ ಜಾಡಿಸಿಕೊಂಡು ಬರಬೇಕು. ಗಾಳಿಗಿ ಗುದ್ದಿ ಮೈ ನೋಯಿಸಿಕೊಂಡಂತೆ ಎಂದು ಹೇಳುವ ರೈತರೆ ಈಗಿನ ಕಾಲದಲ್ಲಿ ಹೆಚ್ಚು. ಆದರೆ, ಇವುಗಳನ್ನೆಲ್ಲ ನಿಭಾಯಿಸಿಯೂ ತರಹೇವಾರಿ ತರಕಾರಿ ಬೆಳೆದು ಇನ್ನೊಬ್ಬ ವೃದ್ಧ ರೈತ ಸೈ ಎನ್ನಿಸಿಕೊಂಡಿದ್ದಾರೆ.
ಹುಮನಾಬಾದ ತಾಲೂಕಿನ ಉಡಬಾಳ ಗ್ರಾಮದ ರೈತ ನಾರಾಯಣರಾವ್ ಭಂಗಿ ಐದು ವರ್ಷಗಳಿಂದ ಒಂದು ಎಕರೆಯಿಂದ ತರಕಾರಿ ಬೆಳೆಯಲು ಪ್ರಾರಂಭಿಸಿ ಇಂದು ಏಳು ಎಕರೆ ವರೆಗೆ ಬೆಳೆ ಬೆಳೆಯುತ್ತಿದ್ದಾರೆ. ತರಕಾರಿಗೆ ಹೇಳಿ ಮಾಡಿಸಿದಂಥ ಕಪ್ಪು ಮಣ್ಣಿನ ಜಮೀನು ಇದ್ದು, ಬಾವಿ ಮೂಲಕ ನೀರಾವರಿ ಮಾಡುತ್ತಿದ್ದಾರೆ.
ತರಕಾರಿ ಬೆಳೆಯುವ ಮೊದಲು ಕಬ್ಬು, ಜೋಳ, ಕಡಲೆಯಂಥ ಕೃಷಿ ಬೆಳೆಗಳನ್ನೇ ಬೆಳೆಯುತ್ತಿದ್ದೆ. ಖರ್ಚು ಲಾಭ ಅಷ್ಟಕ್ಕಷ್ಟೇ ಆಗುತ್ತಿತ್ತು. ಹೀಗಾದರೆ ಕುಟುಂಬ ನಿಭಾಯಿಸುವುದು, ಮಕ್ಕಳ ವಿದ್ಯಾಭ್ಯಾಸ, ಮಕ್ಕಳಿಗೆ ನೌಕರಿ ಕೊಡಿಸಲು ಆಗುವುದಿಲ್ಲ. ಇನ್ನೂ ಹೆಚ್ಚಿನ ಹಣ ಸಂಪಾದನೆ ಮಾಡಬೇಕೆಂಬ ಛಲದಿಂದ ಊರೂರು ಸುತ್ತಿ ತರ ತರಹದ ಬೆಳೆಗಳನ್ನು ಬೆಳೆದ ರೈತರ ತೋಟಗಳಿಗೆ ಹೋಗಿ ನೋಡಿ ಚರ್ಚಿಸಿ, ಲೆಕ್ಕ ಹಾಕಿ ನೋಡಿದಾಗ ತರಕಾರಿ ಬೆಳೆಯುವುದೇ ಸೂಕ್ತ ಎಂದು ನಿರ್ಧರಿಸಿದೆ ಎನ್ನುತ್ತಾರೆ ಭಂಗಿ.
ಚಿಟಗುಪ್ಪಾ, ಮನ್ನಾಏಖೆಳ್ಳಿ, ಕಲಬುರಗಿ, ಹೈದ್ರಾಬಾದ್ಗೆ ತರಕಾರಿ ಕಳಿಸಿ ಮಾರಾಟ ಮಾಡಲಾಗುತ್ತಿದೆ. ತೋಟಗಾರಿಕೆ ಇಲಾಖೆಯಿಂದ
7 ಎಕರೆಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ ಹನಿ ನೀರಾವರಿಗೆ ಮತ್ತು ಮಲ್ಚಿಂಗ್ ಗೆ ಸಹಾಯಧನ ಪಡೆದಿದ್ದೇನೆ. ಬೆಳೆಗೆ ಮಲ್ಚಿಂ ಗ್, ಡ್ರಿಪ್ ಮಾಡಿಸಿದ್ದರಿಂದ ಖರ್ಚು ಕಡಿಮೆಯಾಗಿ ಬಹು ಬೆಳೆ ಪದ್ಧತಿಯಿಂದ ಉತ್ಪನ್ನ ಜಾಸ್ತಿಯಾಗುತ್ತಿದೆ ಎನ್ನುತ್ತಾರೆ ಅವರು. ಹೆಚ್ಚಿನ ಮಾಹಿತಿಗೆ ನಾರಾಯಣರಾವ್ ಭಂಗಿ ಮೊ: 9448584932ಗೆ ಸಂಪರ್ಕಿಸಬಹುದು.
5 ವರ್ಷದಿಂದ ಕಲ್ಲಂಗಡಿ, ಗೋಬಿ, ಟೊಮ್ಯಾಟೊ, ಬದನೆ, ಹೀರೆಕಾಯಿ, ಹಾಗಲ ತರಕಾರಿ ಬೆಳೆಯುತ್ತಿದ್ದೇನೆ. ಇದರಲ್ಲೇ ನನಗೆ ಲಾಭ ಎನಿಸಿದೆ. ದಿನಕ್ಕೆ 1500ರಿಂದ 2000 ರೂ. ವರ್ಷಕ್ಕೆ 5 ರಿಂದ 5.50 ಲಕ್ಷಗಳ ವರೆಗೆ ಆದಾಯ ಬರುತ್ತಿದೆ. ಖರ್ಚು ವರ್ಷಕ್ಕೆ 2-3 ಲಕ್ಷ ರೂಪಾಯಿ ಬರುತ್ತಿದೆ. ನೌಕರದಾರರಿಗೆ ವೇತನ ಬಂದಂತೆ ನನಗೂ ಕೃಷಿಯಿಂದ ವೇತನ ಬರುತ್ತಿದೆ. ಇದಕ್ಕೆಲ್ಲ ಅಧಿಕಾರಿಗಳು ಮತ್ತು ಪ್ರಗತಿಪರ ರೈತರರೇ ನನಗೆ ಪ್ರೇರಣೆ. “ಆಕಳು, ಎಮ್ಮೆಗಳಿಂದ ಹೊಲಕ್ಕೆ ಗೊಬ್ಬರ, ಮನೆಗೆ ಹಾಲು ಆಗುತ್ತದೆ.
ನಾರಾಯಣರಾವ್ ಭಂಗಿ, ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ
Bidar: 9 ಲಕ್ಷ ರೂ. ಮೌಲ್ಯದ ಕಚ್ಚಾ ಪಾನ್ ಮಸಾಲಾ, 3 ಲಕ್ಷ ರೂ. ಮೌಲ್ಯ ಸೀರೆ ಜಪ್ತಿ
ಹಾಲ್ ಟಿಕೆಟನ್ನೇ ತಿಂದು ಹಾಕಿದ ಕುರಿ… ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
Bidar; ಖೂಬಾ ಪರ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ
Loksabha: ಬೀದರ್ ಕ್ಷೇತ್ರಕ್ಕೆ ಸಾಗರ ಖಂಡ್ರೆ ಹೆಸರು ಅಂತಿಮ; ಸಿಎಂ ಭೇಟಿಯಾದ ಈಶ್ವರ್
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು