ಕಾಯಕ-ದಾಸೋಹ ಶರಣರ ಕೊಡುಗೆ: ಶ್ರೀ ಪ್ರಭುದೇವರು
ಸಶಕ್ತ ಸಮಾಜಕ್ಕೆ ಸತ್ಯ-ಶುದ್ಧ ಕಾಯಕ ಅವಶ್ಯ
Team Udayavani, Feb 15, 2020, 11:56 AM IST
ಭಾಲ್ಕಿ: ನಡೆ-ನುಡಿ ಒಂದಾಗಿಸಿಕೊಂಡ ಬಸವಾದಿ ಶರಣರು 12ನೇ ಶತಮಾನದಲ್ಲಿ ಪ್ರತಿಪಾದಿಸಿದ ಕಾಯಕ ಮತ್ತು ದಾಸೋಹ ಮೌಲ್ಯ ಜಗತ್ತಿಗೆ ನೀಡಿದ ದೊಡ್ಡ ಕೊಡುಗೆಯಾಗಿದೆ ಎಂದು ಶ್ರೀ ಪ್ರಭುದೇವರು ಹೇಳಿದರು.
ಬಸವಕಲ್ಯಾಣ ತಾಲೂಕಿನ ಗೋರ್ಟಾ (ಬಿ) ಗ್ರಾಮದ ಲಿಂಗಾಯತ ಮಹಾಮಠದಲ್ಲಿ ಆಯೋಜಿಸಿದ್ದ ಶರಣ ಸಂಗಮ ಮತ್ತು ಯೋಗ ಶಿವಯೋಗ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಸಶಕ್ತ ಸಮಾಜವನ್ನು ಸತ್ಯ-ಶುದ್ಧ ಕಾಯಕದಿಂದ ಮಾತ್ರ ಕಟ್ಟಬಹುದಾಗಿದೆ ಎನ್ನುವ ವಾಸ್ತವ ಅರಿತ ಶರಣರು ಲಿಂಗ ಪೂಜೆಗಿಂತ ಕಾಯಕಕ್ಕೆ ಮಹತ್ವ ನೀಡಿದ್ದರು ಎಂದರು.
ಬಸವಕಲ್ಯಾಣದ ನಗರಸಭೆ ಮಾಜಿ ಸದಸ್ಯ ರವಿಂದ್ರ ಕೊಳಕೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಬೇರು ಬಿಟ್ಟಿದ್ದ ಮೂಢನಂಬಿಕೆ, ಅಂಧಶ್ರದ್ಧೆಗಳನ್ನು ಬೇರು ಸಮೇತ ಕಿತ್ತೂಗೆದರು. ಜಗತ್ತಿನಲ್ಲಿಯೇ ಸ್ತ್ರೀಯರಿಗೆ ಸಮಾನತೆ ತಂದು ಕೊಟ್ಟ ಶ್ರೇಯಸ್ಸು ಬಸವಣ್ಣಗೆ ಸಲ್ಲುತ್ತದೆ ಎಂದರು.
ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯದ ಪ್ರೊ| ಗೀತಾ ಪಾಟೀಲ್ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಕಲಿಸುವ ಜೊತೆಗೆ ಸಂಸ್ಕಾರ ಕಲಿಸುವುದು ಅಗತ್ಯ. ಇಂದಿನ ಸಮಾಜದಲ್ಲಿ ಅಕ್ಷರಸ್ಥರಿಂದಲೇ ಅನ್ಯಾಯ, ಮೋಸ ವಂಚನೆ ನಡೆಯುತ್ತಿವೆ. ಸುಂದರ ಸಮಾಜ ನಿರ್ಮಾಣಕ್ಕೆ ಇಂಥ ಶರಣ ಸಂಗಮದಂಥ ಧಾರ್ಮಿಕ ಕಾರ್ಯಕ್ರಮಗಳು ಅಗತ್ಯವಾಗಿವೆ ಎಂದರು.
ಭಾಲ್ಕಿಯ ಮಹಿಳಾ ಕದಳಿ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ ಶಿವಯೋಗ ಕುರಿತು ಮಾತನಾಡಿ, ಮನುಷ್ಯ ಒತ್ತಡಗಳ ನಡುವೆ ಜೀವನ ಸಾಗಿಸುತ್ತಿದ್ದಾನೆ. ಒತ್ತಡಗಳಿಂದ ಪಾರಾಗಬೇಕಾದರೆ ಶಿವಯೋಗ ಅಗತ್ಯ ಎಂದರು.
ಭಾಲ್ಕಿ ಶಿವಾಜಿ ಕಾಲೇಜಿನ ಪ್ರಾಚಾರ್ಯ ಚಂದ್ರಕಾಂತ ಬಿರಾದಾರ ಮಾತನಾಡಿದರು. ನಾಗರಾಜ ಮಡಿವಾಳಪ್ಪ ಮಾಶೆಟ್ಟೆ ಅಧ್ಯಕ್ಷತೆ ವಹಿಸಿದರು. ಕೌಠಾದ ಸಚ್ಚಿದಾನಂದ ಕೆಸರೊಟ್ಟೆ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.
ಪ್ರಕೃತಿ, ಸಂಗಮೇಶ ಗುರುಪೂಜೆ ನೆರವೇರಿಸಿದರು. ಶಿವಾನಂದ ಗುರಪ್ಪ ಹತ್ತೆ ಭಕ್ತಿ ದಾಸೋಹ ವಹಿಸಿದ್ದರು. ಚನ್ನಬಸಪ್ಪ ಪತಂಗೆ, ಗುರುಣ್ಣ ಹತ್ತೆ, ಬಾಬುರಾವ್ ರಾಜೋಳೆ, ಸೋಮನಾಥ ರಾಜೋಳೆ, ಶಿವಪುತ್ರಪ್ಪ ಕಣಜೆ, ಸುಭಾಷ ಪತಂಗೆ, ಈಶ್ವರ ಕಣಜೆ, ಬಾಬುರಾವ್ ಪಟೆ° ಇದ್ದರು. ಲೋಕೇಶ ವರವಟ್ಟೆ ನಿರೂಪಿಸಿದರು.
ಬಸವಣ್ಣನವರು ಎಲ್ಲ ಕಾಯಕ ಶರಣರನ್ನು ಒಟ್ಟಿಗೆ ಸೇರಿಸಿ ಅವರಲ್ಲಿಯ ಮೇಲು-ಕೀಳು ಭಾವ ಅಳಿಸಿ ಕಾಯಕಕ್ಕೆ ಮಹತ್ತರದ ಸ್ಥಾನ ತಂದುಕೊಟ್ಟರು. ಅಂತಹ ಶರಣರ ಆದರ್ಶ ಮೌಲ್ಯಗಳನ್ನು ಇಂದಿನ ಸಮಾಜ ಮೈಗೂಡಿಸಿಕೊಳ್ಳಬೇಕಾಗಿದೆ.
ಶ್ರೀ ಪ್ರಭುದೇವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Bidar; ಪ್ರೇಯಸಿ ಮದುವೆ ದಿನವೇ ಪ್ರಿಯಕರನ ಶವ ಪತ್ತೆ
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ