ಬಿಸಿಲೂರಿನಲ್ಲಿ ಮಲೆನಾಡ ವಾತಾವರಣ: ಗಾಯಮುಖ ಜಲಪಾತ ವೈಭವ ನೋಡ ಬನ್ನಿ


Team Udayavani, Aug 13, 2022, 5:13 PM IST

8falls

ಬೀದರ: ಎತ್ತರದ ಮರಗಳು, ಹಚ್ಚು ಹಸಿರು ತುಂಬಿದ ವನ. ನಿಶಬ್ದ ಪರಿಸರದಲ್ಲಿ ಪಕ್ಷಿಗಳ ಕಲರವ. ಇದರ ಮಧ್ಯೆ ಬಳ್ಳಿಯಂತೆ ಬಳಕುತ್ತಾ ಇಣುಕುವ ಜಲಪಾತದ ವೈಭವ. ಬೆಟ್ಟದ ಕೆಳ ಭಾಗದ ಗುಪ್ತಲಿಂಗ ಮಂದಿರದಲ್ಲಿ ಶಿವನ ಆರಾಧನೆ. ಹೀಗೆ ಮಲೆನಾಡು ನೆನಪಿಸುವಂಥ ವಾತಾವರಣ ಬಿಸಲೂರು ಬೀದರನಲ್ಲಿಯೂ ಈಗ ಸೃಷ್ಟಿಯಾಗಿದೆ.

ಜಿಲ್ಲಾ ಕೇಂದ್ರ ಬೀದರದಿಂದ ಕೇವಲ 15 ಕಿ.ಮೀ ಅಂತರದಲ್ಲಿರುವ ಗಾಯಮುಖ (ಗುಪ್ತಲಿಂಗ) ದೇವಸ್ಥಾನದ ಪ್ರದೇಶ ಮಲೆನಾಡು ಕಣ್ಮುಂದೆ ತರುತ್ತದೆ. ಇಲ್ಲಿನ ಬೆಟ್ಟಗಳ ಮೇಲಿಂದ ಹರಿದು ಧುಮ್ಮುಕ್ಕುವ ಜಲಪಾಲ ನೋಡುವುದೇ ಚೆಂದ. ಇದು ವರ್ಷವಿಡೀ ಧುಮುಕ್ಕುವ ಜಲಪಾತವಲ್ಲ. ಮಳೆಗಾಲದಲ್ಲಿ ಮಾತ್ರ ನೋಡಿ ಕಣ್ತುಂಬಿಕೊಳ್ಳಬೇಕು ಅಷ್ಟೇ.

ಮಹಾರಾಷ್ಟ್ರ-ತೆಲಂಗಾಣ ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆ ಬೀದರ ಮೇಲೆ ಸೂರ್ಯನಿಗೆ ಹೆಚ್ಚು ಪ್ರೀತಿ. ಹಾಗಾಗಿ ವರ್ಷದ ಎಲ್ಲ ದಿನಗಳಲ್ಲೂ ಬಿಸಿಲಿನ ಪ್ರಖರತೆ ಸಾಮಾನ್ಯ. ಆದಾಗ್ಯೂ ಮುಂಗಾರು ಮಳೆ ಆರ್ಭಟಿಸಿದರೆ ಪ್ರಕೃತಿಯ ಸೊಬಗು ಬದಲಾಗುತ್ತದೆ. ಹಸಿರು ಮೇಳೈಸಿ, ಬಂಡೆಗಳ ಮೇಲೆ ನೀರು ಹರಿಯುವುದು ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಅದರಲ್ಲಿಯೂ ಜಿಲ್ಲೆಯಲ್ಲಿ ಮುಖ್ಯವಾದದ್ದು ಗಾಯಮುಖ ಕ್ಷೇತ್ರ.

ಸುತ್ತಲಿನ ಧಾರ್ಮಿಕ ಕ್ಷೇತ್ರಗಳಿಂದ ಪವಿತ್ರ ತಾಣವಾಗಿರುವ ಈ ಪ್ರದೇಶಕ್ಕೆ ಭಕ್ತರು, ಪ್ರವಾಸಿಗರ ಭೇಟಿ ನೀಡುವುದು ಅಧಿಕ. ಎಲ್ಲ ದೇವಸ್ಥಾನಗಳು ಬೆಟ್ಟ- ಗುಡ್ಡದಿಂದ ಕೂಡಿದ ನೈಸರ್ಗಿಕ ಪ್ರದೇಶಗಳಲ್ಲಿಯೇ ಜೀರ್ಣೋದ್ದಾರಗೊಂಡಿವೆ. ಬೀದರ-ಭಾಲ್ಕಿ ಮುಖ್ಯ ರಸ್ತೆಯ ಬಲ ಭಾಗದಲ್ಲಿ ಮೊದಲಿಗೆ ಇರುವುದೇ ಹೊನ್ನಿಕೇರಿಯ ಶ್ರೀ ಸಿದ್ಧಲಿಂಗೇಶ್ವರ ಮಂದಿರ. ಅಲ್ಲಿಂದ ಎರಡ್ಮೂರು ಕಿ.ಮೀ ಕ್ರಮಿಸಿದರೆ ಶ್ರೀ ಶನೇಶ್ವರ ದೇವಸ್ಥಾನ, ಹಾಗೆಯೇ ಮುಂದೆ ಎರಡು ಕಿ.ಮೀ ಬಳಿಕ ಗಾಯಮುಖ ಕ್ಷೇತ್ರ ನೆಲೆನಿಂತಿದೆ. ಇಲ್ಲಿಂದ ಸ್ವಲ್ಪ ದೂರದಲ್ಲಿಯೇ ದಕ್ಷಿಣ ಕಾಶಿ ಖ್ಯಾತಿಯ ಮೈಲಾರ ಮಲ್ಲಣ್ಣ ಪವಿತ್ರ ದೇವಾಲಯ ಇದೆ. ಹಚ್ಚು ಹಸಿರಿನಿಂದ ಕೂಡಿದ ಗಾಯಮುಖ ಕ್ಷೇತ್ರ ಪ್ರವಾಸಿಗರಿಗೆ ಮನ ತಣಿಸುವ ತಾಣವಾಗಿದೆ.

ಬೆಟ್ಟಗಳ ಕೆಳಗೆ ಶಿವಲಿಂಗದ ದೇವಸ್ಥಾನ ಇದೆ. ಪ್ರತಿ ಅಮಾವಾಸ್ಯೆ ಹಾಗೂ ಶ್ರಾವಣ ಮಾಸದಲ್ಲಿ ಜನ ಕಕ್ಕಿರಿದು ಸೇರಿರುತ್ತಾರೆ. ಮಳೆಗಾಲದಲ್ಲಿ ಮಲೆನಾಡಿನಲ್ಲಿ ಧುಮ್ಮುಕ್ಕುವ ಜಲಪಾತಗಳಂತೆ, ಸುತ್ತಲು ಸುರಿದ ಮಳೆ ಹಳ್ಳವಾಗಿ ನೀರು ಬಂದು ಬೆಟ್ಟದಿಂದ ಕೆಳಗೆ ಹರಿಯುವ ಮೂಲಕ ಜಲಪಾತವನ್ನೇ ಸೃಷ್ಟಿಸುತ್ತದೆ. ಇನ್ನೂ ಈ ದೇವಸ್ಥಾನ ಪ್ರದೇಶದಲ್ಲೇ ನೀರಿನ ಝರಿ ಇದು ಸದಾ ಹರಿಯುತ್ತಿರುತ್ತದೆ.

ಬೀದರ ತಾಲೂಕಿನ 7 ಝರಿಗಳಲ್ಲಿ ಇದು ಸಹ ಒಂದಾಗಿದೆ. ಬೀದರ ಜಿಲ್ಲೆಯಲ್ಲಿ ಏಕೈಕ ಜಲಪಾತ ಇದಾಗಿದ್ದು, ಎಲ್ಲರೂ ಒಮ್ಮೆ ನೋಡಲೆಬೇಕಾದ ಸ್ಥಳ. ಬೀದರನಿಂದ ಭಾಲ್ಕಿಗೆ ತೆರಳುವ ಮಾರ್ಗದಲ್ಲಿ ಈ ಕ್ಷೇತ್ರ ಇದೆ. ಬೀದರನಿಂದ 12 ಕಿ.ಮೀ ಮೈಲಾರ ದೇವಸ್ಥಾನದ ಕ್ರಾಸ್‌ವರೆಗೆ ಸಾಗಿ. ಅಲ್ಲಿಂದ ಗಾಯಮುಖಕ್ಕೆ 3 ಕಿ.ಮೀ. ಹೋದರೆ ಈ ಜಲಪಾತದ ದರ್ಶನವಾಗುತ್ತದೆ. ಕ್ರಾಸ್‌ ವರೆಗೆ ಮಾತ್ರ ವಾಹನಗಳ ವ್ಯವಸ್ಥೆ ಲಭ್ಯ ಇದೆ.

-ಶಶಿಕಾಂತ ಬಂಬುಳಗೆ

ಟಾಪ್ ನ್ಯೂಸ್

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

Bidar; ಪ್ರೇಯಸಿ ಮದುವೆ ದಿನವೇ ಪ್ರಿಯಕರನ ಶವ ಪತ್ತೆ

Bidar; ಪ್ರೇಯಸಿ ಮದುವೆ ದಿನವೇ ಪ್ರಿಯಕರನ ಶವ ಪತ್ತೆ

rape

Bidar; ಯುವಕನಿಂದ ಅಪ್ರಾಪ್ತ ವಯಸ್ಕಳ ರೇಪ್

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.