ಪತಿಯ ಆತ್ಮಹತ್ಯೆ ಪರಿಹಾರಕ್ಕಾಗಿ ಅಧಿಕಾರಿಯ ಮುಂದೆ ಸೆರಗೊಡ್ಡಿದ ಮಹಿಳೆ
Team Udayavani, Dec 11, 2019, 2:08 PM IST
ಬೀದರ್: ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಪತಿಯ ಪರಿಹಾರಕ್ಕಾಗಿ ರೈತ ಮಹಿಳೆ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಮುಂದೆ ಸೆರಗು ಒಡ್ಡಿ, ಕಣ್ಣೀರು ಹಾಕಿದ ಹೃದಯಸ್ಪರ್ಶಿ ಘಟನೆ ಬುಧವಾರ ನಗರದಲ್ಲಿ ನಡೆದಿದೆ.
ಕರವೇ ಕಾರ್ಯಕರ್ತರು ಹಾಗೂ ಮೊಮ್ಮಗಳ ಜೊತೆ ಜಂಟಿ ಕೃಷಿ ಇಲಾಖೆಯ ಮುಂಭಾಗ ರೈತ ಮಹಿಳೆ ಸಿದ್ದಮ್ಮ ಪ್ರತಿಭಟನೆ ಮಾಡುವಾಗ ಸ್ಥಳಕ್ಕೆ ಬಂದ ಜಂಟಿ ಕೃಷಿ ನಿರ್ದೇಶಕ ಸಿ. ವಿದ್ಯಾನಂದ್ ಮುಂದೆ ಪತಿಗೆ ಪರಿಹಾರ ನೀಡಿ ಎಂದು ಸೀರೆ ಸೆರಗೊಡ್ಡಿ ಕಣ್ಣೀರು ಹಾಕಿದರು.
ಎರಡು ವರ್ಷಗಳ ಹಿಂದೆ ಔರಾದ ತಾಲೂಕಿನ ಮುದೋಳ ಗ್ರಾಮದ ಬಾಬುರಾವ್ (60) ಎಂಬ ರೈತ ಸಾಲಬಾಧೆ ಹಿನ್ನಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಪರಿಹಾರ ಕೋರಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪರಿಹಾರ ಸಿಕ್ಕಿರಲಿಲ್ಲ. ಇದರಿಂದ ನೊಂದಿರುವ ರೈತ ಮಹಿಳೆ ಸಿದ್ದಮ್ಮ ಇಂದು ಸೆರಗು ಒಡ್ಡುವ ಮೂಲಕ ಅಧಿಕಾರಿಗಳಿಗೆ ಛೀಮಾರಿ ಹಾಕಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ