ಕೋವಿಡ್ ಕೈಮೀರಿದರೆ ಆಡಳಿತ ಸಿದ್ಧವಿರಲಿ
ತುರ್ತುಸ್ಥಿತಿ ನಿಭಾಯಿಸಲು ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಿ | ಬಡವರಿಗೆ ಆಹಾರ ಧಾನ್ಯ ವಿತರಿಸಲು ಮನವಿ
Team Udayavani, Apr 10, 2020, 12:55 PM IST
ಬೀದರ: ಸಚಿವ ಪ್ರಭು ಚವ್ಹಾಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಶಾಸಕರು.
ಬೀದರ: ವಿವಿಧ ದೇಶಗಳಲ್ಲಿ ಕೋವಿಡ್ ಸೋಂಕು ತೀವ್ರವಾಗಿ ವ್ಯಾಪಿಸುವುದನ್ನು ನೋಡುತ್ತಿದ್ದೇವೆ. ಹೀಗಾಗಿ ಮೂರರಿಂದ ಆರು ತಿಂಗಳ ಅವಧಿವರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಕೋವಿಡ್ ಸೋಂಕು ವ್ಯಾಪಿಸಿ ಪರಿಸ್ಥಿತಿ ಕೈ ಮೀರಿದರೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ಸಿದ್ಧವಾಗಿರಬೇಕು ಎಂದು ಶಾಸಕ ಈಶ್ವರ ಖಂಡ್ರೆ ಸಲಹೆ ನೀಡಿದರು.
ಕೋವಿಡ್ ಮುಂಜಾಗ್ರತೆ ಕುರಿತಂತೆ ನಗರದಲ್ಲಿ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಇದ್ದರಷ್ಟೇ ಆಗದು. ವೆಂಟಿಲೇಟರ್ ಬಳಿಕೆ ಬಗ್ಗೆ, ವೈದ್ಯರು ಮತ್ತು ಸಿಬ್ಬಂದಿಗೆ ತುರ್ತು ಪರಿಸ್ಥಿತಿಯಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು ಎನ್ನುವುದರ ಬಗ್ಗೆ ತರಬೇತಿ ನೀಡಬೇಕು. ಕನಿಷ್ಠ 20000 ಪಿಪಿಇ ಕಿಟ್ಗಳು, ಅವಶ್ಯಕ ವೆಂಟಿಲೇಟರ್ಗಳು ಮತ್ತು ಆರೋಗ್ಯ ಸಿಬ್ಬಂದಿಗೆ ಎರಡು ಲಕ್ಷ ತ್ರಿಬಲ್ ಲೇಯರ್ ಮಾಸ್ಕ್ಗಳನ್ನು ಸ್ಟಾಕ್ ಮಾಡಿಟ್ಟುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಜಿಲ್ಲೆಯಲ್ಲಿನ ಕಡುಬಡವರಿಗೆ ಸಾಕಾಗುವಷ್ಟು ಆಹಾರ ಧಾನ್ಯ ನೀಡಿ ಅವರು ಹೊರಹೋಗದಂತೆ ನೋಡಿಕೊಳ್ಳಿ. ನಿರಾಶ್ರಿತರು, ಭಿಕ್ಷುಕರನ್ನು ಗುರುತಿಸಿ ಊಟ ಕೊಡಿ. ಜನ್ಧನ್ ಯೋಜನೆಯಡಿ 500 ರೂ. ಗಳನ್ನು ಎಲ್ಲರ ಖಾತೆಗೂ ಹಾಕುವಂತಾಗಬೇಕು. ಗ್ಯಾಸ್ ಸಿಲಿಂಡರ್ ಎಲ್ಲರಿಗೂ ಸರಿಯಾದ ಅವಧಿಗೆ ತಲುಪಬೇಕು. ಹಿರಿಯ ನಾಗರಿಕರಿಗೆ 1000 ರೂ. ಮಾಸಾಶನ ತುರ್ತಾಗಿ ಹಾಕಬೇಕು. ಕಲ್ಲಂಗಡಿ, ದ್ರಾಕ್ಷಿ ಮತ್ತು ತೊಗರಿ ಖರೀದಿ ಮಾಡಿ ರೈತರಿಗೆ ಹಣ ಕೊಡಬೇಕು ಎಂದು ಶಾಸಕರು ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.
ಕಾರ್ಡ್ ಇರದವರಿಗೂ ಪಡಿತರ: ಜಿಲ್ಲೆಯಲ್ಲಿ ತೊಂದರೆಗೊಳಗಾದ ಬಡ, ಕಾರ್ಮಿಕರಿಗೆ ಪ್ರಾಮಾಣಿಕವಾಗಿ ಆಹಾರ ಧಾನ್ಯ ತಲುಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ ಹೇಳಿದರು. ಸ್ಲಂನಲ್ಲಿರುವ ಬಡವರು ಮತ್ತು ಲಾಕ್ಡೌನ್ ಕಾರಣ ಕೆಲಸ ಕಳೆದುಕೊಂಡು ಜಿಲ್ಲೆಗೆ ಬಂದು ತಾಂಡಾ ಮತ್ತು ಮತ್ತಿತರ ಕಡೆ ನೆಲೆಯೂರಿದವರಿಗೆ ಕಾರ್ಡ್ ಕೇಳದೇ ಅಂತವರಿಗೆ ರೇಷನ್ ವಿತರಿಸಿ ಎಂದು ಶಾಸಕ ನಾರಾಯಣ ರಾವ್ ಧ್ವನಿಗೂಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ