ಬಿಜೆಪಿ ಸಮಾಲೋಚನಾ ಸಭೆ
Team Udayavani, May 15, 2018, 12:30 PM IST
ಬಸವಕಲ್ಯಾಣ: ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷದ ಪರವಾಗಿ ಶ್ರಮ ವಹಿಸಿ ಕೆಲಸ ಮಾಡಿರುವ ಪಕ್ಷದ ಎಲ್ಲಾ ಕಾರ್ಯರ್ತರು, ಅಭಿಮಾನಿಗಳಿಗೆ ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು.
ತ್ರಿಪುರಾಂತದ ತಮ್ಮ ನಿವಾಸದಲ್ಲಿ ಪಕ್ಷದ ಕಾರ್ಯಕರ್ತರ ಮತ್ತು ಆಭಿಮಾನಿಗಳ ಜತೆ ನಡೆಸಿದ ಸಮಾಲೋಚನೆ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಚುನಾವಣೆ ನಡೆಯಲ್ಲಿ ಸೋಲು ಗೆಲವು ಸಹಜ. ಆದರೆ ನಮಲ್ಲಿ ಆತ್ಮಬಲ, ಇಚ್ಛಾಶಕ್ತಿ ಇದ್ದರೆ ಸಾಕು ನಾವು ಪಟ್ಟ ಪರಿಶ್ರಮಕ್ಕೆ ಫಲಸಿಗುವ ಸಂಪೂರ್ಣ ವಿಶ್ವಾಸ ನಮಗಿದೆ ಎಂದರು.
ಚುನಾವಣೆ ಮುಗಿದ ನಂತರ ನಾವು ಎಲ್ಲಿಗೂ ಹೋಗುವುದಿಲ್ಲ. ಕೆಲವರು ದೇವರ ದರ್ಶನಕ್ಕೆ ಹೋಗುತ್ತಾರೆ. ಆದರೆ ನಾವು ಈ ಪುಣ್ಯ ಭೂಮಿಯಲ್ಲಿ ಇದ್ದೇವೆ. ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇವೆ. ಬಂದಂತ ಕಾರ್ಯಕರ್ತರ ಜತೆ ಮಾತನಾಡುತ್ತಿದ್ದೇನೆ. ನನ್ನ ಪರಿಶ್ರಮವನ್ನು ನಿರಂತರ ಜನರಿಗಾಗಿ ಇಡುತ್ತೇನೆ ಎಂದರು.
ಪಕ್ಷದ ಪ್ರಮುಖರಾದ ಅರವಿಂದ ಮುತ್ತೆ, ಶಿವಪುತ್ರಪ್ಪ ಗೌರ, ಶೋಭಾ ತೆಲಂಗ, ಮಹಾದೇವಿ ಬ್ಯಾಡಗೆ, ಕಾಳಿದಾಸ
ಜಾಧವ, ರಮೇಶ ಕಾಂಬಳೆ, ಸೂರ್ಯಕಾಂತ ಚಿಲ್ಲಾಬಟ್ಟೆ, ಡಾ| ಭಂಡಾರಿ, ದಿಗಂಬರ ಜಲೆ, ರವಿ ಸ್ವಾಮಿ, ತುಕರಾಮ
ಲಾಡೆ, ರಾಜಕುಮಾರ ಜಾಧವ, ಸಂಜು ಗಾಯಕವಾಡ, ಧನರಾಜ ಫಡೆ, ಶಿವಕುಮಾರ ಬಿರಾದಾರ, ದಿಲೀಪ ಮಡ್ಡೆ,
ಮಂಜು ಹೊಳಕುಂದೆ, ಲಿಂಗರಾಜ ಶಾಶೆಟ್ಟೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ