ಅರಳಿದ ಕಮಲ-ವಿಜಯೋತ್ಸವ
Team Udayavani, Nov 11, 2020, 8:50 PM IST
ಬಸವಕಲ್ಯಾಣ: ಶಿರಾ ಹಾಗೂ ಬೆಂಗಳೂರಿನ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮುಖಂಡ ಶರಣು ಸಲಗರ ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಮಂಗಳವಾರ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದಂತೆ ನಗರದ ಹೊರ ವಲಯದಲ್ಲಿರುವ ಶರಣು ಸಲಗರ ಜನಸಂಪರ್ಕ ಕಾರ್ಯಾಲಯ ಎದುರುಸಹಸ್ರಾರು ಸಂಖ್ಯೆಯ ಅಭಿಮಾನಿ ಬಳಗ, ಬಿಜೆಪಿ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಜಿಪಂ ಮಾಜಿ ಸದಸ್ಯಜಗನ್ನಾಥ್ ಪಾಟೀಲ್, ಮೇಘರಾಜ
ನಾಗರಾಳೆ, ಶಹಾಜಿ ಭೋಸ್ಲೆ, ಸಿದ್ದಪ್ಪಗೌಡ ಪಾಟೀಲ್, ಸಂಜೀವಕುಮಾರ ಸುಗುರೆ, ರೋಹಿದಾಸ್, ಶಿವರಾಜ ತಾಟೆ, ಮಹಾಂತಯ್ಯ ಮಠಪತಿ, ಚಂದ್ರಕಾಂತ್ ದೇಟೆ, ಜ್ಞಾನದೇವ ಜಾಧವ, ಪ್ರಕಾಶ್ ಸುಂಠಾಣೆ, ಸಿದ್ದು ಬಿರಾದಾರ, ಬಸವರಾಜ ಹಿರೇಮಠ, ತುಕಾರಾಮ ಜಾಧವ, ಭೂಷಣಜಾಧವ, ಜ್ಞಾನೋಬಾ ನಿಟ್ಟೂರೆ, ಶರದ್ ಶಿಂಧೆ, ನಾಗೇಶ್ ಮೇತ್ರೆ, ಸುನೀಲ್ ರಾಠೊಡ್, ಸತೀಶ್ ರಾಠೊಡ್ ಇದ್ದರು.
ಶಿರಾ ಹಾಗೂ ಆರ್.ಆರ್. ನಗರದ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವುಸಾಧಿಸಿದ್ದು ಹರ್ಷ ತಂದಿದೆ. ಕೇಂದ್ರದಲ್ಲಿ ಪ್ರಧಾನಿ ಮೋದಿ ಮತ್ತು ರಾಜ್ಯದಲ್ಲಿ ಸಿಎಂ ಬಿಎಸ್ವೈ ಯಡಿಯೂರಪ್ಪನವರು ಜನಪರ ಯೋಜನೆ ಕಲ್ಪಿಸಿರುವುದೇ ಬಿಜೆಪಿ ಗೆಲುವಿಗೆ ಶ್ರೀರಕ್ಷೆಯಾಗಿದೆ. –ಮಲ್ಲಿಕಾರ್ಜುನ ಖೂಬಾ, ಮಾಜಿ ಶಾಸಕ, ಬಸವಕಲ್ಯಾಣ