ಬೀದರನಲ್ಲಿ ಬಟ್ಟೆ ಅಂಗಡಿ ಮಾಲೀಕ ಚಂದ್ರಶೇಖರ ಪಸರ್ಗೆ ಕಸರತ್ತು
Team Udayavani, Jan 18, 2018, 7:56 AM IST
ಬೀದರ: ಪ್ರಧಾನಿ ಮೋದಿ ಘೋಷಿಸಿದ ನೋಟ್ ಬ್ಯಾನ್, ಜಿಎಸ್ಟಿ ಜಾರಿ ನಿರ್ಧಾರ ಬೆಂಬಲಿಸಿ ಹಳೆಯ ಒಂದು ಮತ್ತು 2 ಪಾಯಿಗೆ ಸೀರೆಗಳನ್ನು ನೀಡಿದ್ದ ನಗರದ ಸೃಷ್ಟಿ- ದೃಷ್ಟಿ ಅಂಗಡಿಯಲ್ಲಿ ಈಗ ಮತ್ತೂಮ್ಮೆ ಸೀರೆ ಉಡುಗೊರೆಯಾಗಿ ಕೊಡಲಾಗುತ್ತಿದೆ. ಈ ಬಾರಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕೆಂಬ ಆಶಯ ಹೊಂದಲಾಗಿದೆ.
ಇಂದಿನ ದುಬಾರಿ ದುನಿಯಾದಲ್ಲಿ ಒಂದು- ಎರಡು ರೂಪಾಯಿಗೆ ಒಂದು ಸೀರೆ ಸಿಗುತ್ತದೆ ಎಂಬುದು ಆಶ್ಚರ್ಯ ಎನಿಸಿದರೂ ಸತ್ಯ. ಸೃಷ್ಟಿ-ದೃಷ್ಟಿ ಅಂಗಡಿ ವ್ಯಾಪಾರಿ ಚಂದ್ರಕಾಂತ ಪಸರ್ಗೆ ಇಂಥದೊಂದು ಆಶಯದೊಂದಿಗೆ ಹಳೆಯ 1 ಅಥವಾ 2 ರೂಪಾಯಿ “ನೋಟು’ ಪಡೆದು ಹೊಸ ಸೀರೆ ನೀಡುತ್ತಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಉಡುಗೊರೆಯಾಗಿ ಆರಂಭಿಸಿರುವ ಬಂಪರ್ ಆಫರ್ ಜ.30ರವರೆಗೆ ಇರಲಿದ್ದು, ಸೀರೆ ಪಡೆಯಲು ನಾರಿಯರು ಬೆಳಗ್ಗೆಯಿಂದಲೇ ಬಟ್ಟೆ ಅಂಗಡಿ ಎದುರು ಸರದಿಯಲ್ಲಿ ನಿಲ್ಲುತ್ತಿದ್ದಾರೆ.
ಪ್ರಧಾನಿ ಮೋದಿ ಅವರು 500, 1000ರೂ. ಮುಖ ಬೆಲೆಯ ನೋಟುಗಳನ್ನು ರದ್ದುಗೊಳಿಸಿರುವ ನಿರ್ಧಾರ ಬೆಂಬಲಿಸಿದ ವ್ಯಾಪಾರಿ, ಹೊಸ ವರ್ಷ ಮತ್ತು ಕ್ರಿಸ್ಮಸ್ ಹಬ್ಬದ ಉಡುಗೊರೆಯಾಗಿ ಸೀರೆ ನೀಡಿದ್ದರು. ನಂತರ ಜಿಎಸ್ಟಿ ಜಾರಿಯಾದ ಬಳಿಕ ಕೇವಲ 10, 25 ಮತ್ತು 50 ಪೈಸೆಗೆ ಸೀರೆಯನ್ನು ವಿತರಿಸಿದ್ದರು. ಈಗ ಮತ್ತೆ 1 ಅಥವಾ 2 ರೂ.ಗೆ ಸೀರೆ ಕೊಡಲು ಮುಂದಾಗಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಆಡಳಿ ತಕ್ಕೆ ಬಂದು ಅವರೇ ಸಿಎಂ ಆಗಬೇಕೆಂದು ಆಶಿಸುತ್ತ ಸೀರೆಗಳನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲ ಕುಮಾರಸ್ವಾಮಿ ಸಿಎಂ ಆಗಬೇಕೆಂದು ವೆಂಕಟೇಶ್ವರನಲ್ಲಿ ಹರಕೆಯನ್ನೂ ಹೊತ್ತಿದ್ದಾರೆ. ಕಳೆದ ಬಾರಿ 14 ಲಕ್ಷ ಸೀರೆಗಳನ್ನು ನೀಡಿದ್ದು, ಈ ಬಾರಿ 5 ಲಕ್ಷ ಸೀರೆಗಳನ್ನು ಜನರಿಗೆ ಕೊಡಲು ನಿರ್ಧರಿಸಿದ್ದೇನೆ.
ಈಗಾಗಲೇ ಸೂರತ್ನಿಂದ ಸೀರೆಗಳನ್ನು ತರಲಾಗಿದ್ದು, 100 ರಿಂದ 200 ರೂ. ದರದವರೆಗಿನ ಸೀರೆಗಳನ್ನು ಕೊಡುತ್ತಿದ್ದೇನೆ. ಸೀರೆ ಮಾರಾಟದಿಂದ ಬರುತ್ತಿರುವ ಹಣವನ್ನು ನಗರದ ಹೊರವಲಯದ ಅನಂತಶಯನ ಮಂದಿರದ ಲಕ್ಷ್ಮೀ ವೆಂಕಟೇಶ್ವರ ದೇವರ ಹುಂಡಿಗೆ ಹಾಕುವೆ ಎನ್ನುತ್ತಾರೆ ಪಸರ್ಗೆ.
ಟಿಕೆಟ್ ಆಕಾಂಕ್ಷಿ!
ಹಿಂದೆ ಜನ ಸೇವೆಗಾಗಿ ಸೀರೆಗಳನ್ನು ಉಡುಗೊರೆಯಾಗಿ ನೀಡಿದ್ದ ಪಸರ್ಗೆ ಈ ಬಾರಿ ಬೀದರ ಉತ್ತರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿ ಸುವ ಆಸೆ ಹೊಂದಿದ್ದಾರೆ. ಜೆಡಿಎಸ್ನಿಂದ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ರಾಜಕೀಯದಲ್ಲಿ ಯಶಸ್ಸು ಕಾಣಲು ಸೀರೆ ಉಡುಗೊರೆ ಎಷ್ಟರ ಮಟ್ಟಿಗೆ ಸಹಕಾರಿ ಆಗುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.
ಪ್ರಧಾನಿ ಮೋದಿ ಅವರ ನೋಟ್ ಬ್ಯಾನ್ ನಿರ್ಧಾರ ಬೆಂಬಲಿಸಿ ಕ್ರಿಸ್ಮಸ್ ಹಬ್ಬಕ್ಕೆ ಸೀರೆಗಳನ್ನು ಉಡುಗೊರೆ ನೀಡಿದ್ದೆ. ಈಗ ಕುಮಾರಸ್ವಾಮಿ ಸಿಎಂ ಆಗಬೇಕೆಂಬುದು ನನ್ನ ಆಶಯ. ದೇಶ, ಸಮಾಜಕ್ಕಾಗಿ ಒಳ್ಳೆಯ ಆಡಳಿತ ನೀಡುವವರಿಗೆ ಬೆಂಬಲಿಸುತ್ತ
ಬರುತ್ತಿದ್ದೇನೆ.
ಚಂದ್ರಶೇಖರ ಪಸರ್ಗೆ, ಬಟ್ಟೆ ಅಂಗಡಿ ಮಾಲೀಕ
ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Election Commission: ಪ್ರಿಯಾಂಕ್ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು
Congress party: ಮಾಲೀಕಯ್ಯ ಗುತ್ತೇದಾರ್ ಇಂದು ಕಾಂಗ್ರೆಸ್ ಸೇರ್ಪಡೆ
Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು ಅಂಟಿಕೊಂಡೀತು ಹುಷಾರು!