ಕ್ಷೇತ್ರ ಪುನರ್‌ ವಿಂಗಡಣೆ; ಜಿಪಂಗೆ ಸಿಹಿ, ತಾಪಂಗೆ ಕಹಿ

ನೆಲೆ ಕಂಡುಕೊಳ್ಳಲು ಕನಸು ಹೊತ್ತಿದ್ದ ಗ್ರಾಮೀಣ ಯುವ ರಾಜಕಾರಣಿಗಳು ತೀವ್ರ ಬೇಸರಗೊಂಡಿದ್ದರು.

Team Udayavani, Feb 13, 2021, 5:12 PM IST

ಕ್ಷೇತ್ರ ಪುನರ್‌ ವಿಂಗಡಣೆ; ಜಿಪಂಗೆ ಸಿಹಿ, ತಾಪಂಗೆ ಕಹಿ

ಬೀದರ: ಗ್ರಾಪಂ ಚುನಾವಣೆ ಬೆನ್ನಲ್ಲೇ ಜಿಪಂ ಮತ್ತು ತಾಪಂ ಚುನಾವಣೆ ನಡೆಸಲು ಸಜ್ಜಾಗಿರುವ ರಾಜ್ಯ ಚುನಾವಣೆ ಆಯೋಗ ಕ್ಷೇತ್ರ ಮರು ವಿಂಗಡಣೆಗೆ ಮುಂದಾಗಿದೆ. ಇದರಿಂದ ಜಿಪಂ ಕ್ಷೇತ್ರಗಳ ಸಂಖ್ಯೆಯಲ್ಲಿ ಹೆಚ್ಚಲಿರುವ ಹಿನ್ನೆಲೆಯಲ್ಲಿ ಸ್ಪರ್ಧೆಗೆ ಆಕಾಂಕ್ಷಿಗಳ ಕನಸು ಚಿಗುರುವಂತೆ ಮಾಡಿವೆ. ಜಿಪಂ-ತಾಪಂ ಕ್ಷೇತ್ರಗಳಿಗೆ ಶೀಘ್ರ ಚುನಾವಣೆಗೆ ಮುಹೂರ್ತ ನಿಗದಿಯಾಗುವ ಸಾಧ್ಯತೆ ಇದ್ದು, ಚುನಾವಣಾ ಆಯೋಗ ಎಲ್ಲ ರೀತಿಯಿಂದಲೂ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಮೊದಲ ಹಂತವಾಗಿ ಕ್ಷೇತ್ರ ಮರು ವಿಂಗಡಣೆಗೆ ಆದೇಶ ನೀಡಿದ್ದು, ಇದರಿಂದ ಗಡಿ ಜಿಲ್ಲೆ ಬೀದರನಲ್ಲಿ 7 ಜಿಪಂ ಕ್ಷೇತ್ರಗಳ ಸಂಖ್ಯೆ ಹೆಚ್ಚಲಿದ್ದು, ಕ್ಷೇತ್ರಗಳ ಸಂಖ್ಯೆ 34 ರಿಂದ 41ಕ್ಕೆ ಏರಿಕೆಯಾಗಲಿದೆ. ಆದರೆ, ತಾಪಂ ಕ್ಷೇತ್ರಗಳ ಸಂಖ್ಯೆ 131ರಿಂದ 112ಕ್ಕೆ ಕುಸಿಯಲಿದೆ. ಜಿಪಂ ಕ್ಷೇತ್ರಗಳ ಸ್ಥಾನಗಳು ಹೆಚ್ಚುವುದರಿಂದ ಆಡಳಿತ
ಇನ್ನಷ್ಟು ವಿಕೇಂದ್ರೀಕರಣಗೊಂಡು, ಅಭಿವೃದ್ಧಿಗೆ ಒತ್ತು ಸಿಗಲಿದೆ.

ಗ್ರಾಮೀಣ ಪ್ರದೇಶದ ಜನಸಂಖ್ಯೆ ಆಧಾರದ ಮೇಲೆ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿ ನಿಯಮ 1993ರ ಪ್ರಕರಣ 121 ಮತ್ತು 16ಗಳಿಗೆ ಉಲ್ಲೇಖ (2) ಮತ್ತು (3) ಗಳಂತೆ ಮಾಡಲಾಗಿರುವ ತಿದ್ದುಪಡಿ ಅನ್ವಯ ತಾಲೂಕುವಾರು ತಾಪಂ-ಜಿಪಂ ಸದಸ್ಯ ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ನೂತನ ಕ್ಷೇತ್ರಗಳ ರಚನೆ ವೇಳೆ ಗ್ರಾಮೀಣ ಪ್ರದೇಶಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಬೇಕು. ತಾಲೂಕಿನಲ್ಲಿರುವ ಗ್ರಾಪಂಗಳನ್ನು ಒಡೆಯದೇ, ಪೂರ್ಣ ಗ್ರಾಪಂಗಳನ್ನು ಒಟ್ಟುಗೂಡಿಸಿ ಜಿಪಂ ಕ್ಷೇತ್ರ ರಚನೆಯಾಗುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ. ಜಿಲ್ಲೆಯಲ್ಲಿ ಈ ಹಿಂದೆ 5 ಇದ್ದ ತಾಲೂಕುಗಳ ಸಂಖ್ಯೆ ಇದೀಗ 8ಕ್ಕೆ ಏರಿಕೆಯಾಗಿದೆ.

ತಾಪಂ ಆಡಳಿತ ವ್ಯವಸ್ಥೆ ರದ್ದುಪಡಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದ್ದರಿಂದ ರಾಜಕೀಯವಾಗಿ ನೆಲೆ ಕಂಡುಕೊಳ್ಳಲು ಕನಸು ಹೊತ್ತಿದ್ದ
ಗ್ರಾಮೀಣ ಯುವ ರಾಜಕಾರಣಿಗಳು ತೀವ್ರ ಬೇಸರಗೊಂಡಿದ್ದರು. ಆದರೆ, ಈಗ ಹೊಸ ಜಿಪಂ ಕ್ಷೇತ್ರಗಳು ಉದಯವಾಗುವ ಸಾಧ್ಯತೆ ದಟ್ಟವಾಗಿರುವುದರಿಂದ ಆಕಾಂಕ್ಷಿಗಳ ಖುಷಿಗೆ ಕಾರಣವಾಗಿದೆ.

ಕ್ಷೇತ್ರ ಪುನರ್‌ ವಿಂಗಡಣೆಯಿಂದ ಕಮಲನಗರ ತಾಲೂಕಿಗೆ 4 ಜಿಪಂ ಕ್ಷೇತ್ರಗಳು, 9 ತಾಪಂ ಕ್ಷೇತ್ರಗಳು, ಔರಾದ ತಾಲೂಕಿಗೆ 5 ಜಿಪಂ ಕ್ಷೇತ್ರಗಳು, 13 ತಾಪಂ ಕ್ಷೇತ್ರಗಳು, ಭಾಲ್ಕಿ ತಾಲೂಕಿಗೆ 7 ಜಿಪಂ ಕ್ಷೇತ್ರಗಳು, 19 ತಾಪಂ ಕ್ಷೇತ್ರಗಳು, ಹುಮನಾಬಾದ ತಾಲೂಕಿಗೆ 4 ಜಿಪಂ ಕ್ಷೇತ್ರಗಳು, 11 ತಾಪಂ ಕ್ಷೇತ್ರಗಳು, ಚಿಟಗುಪ್ಪ ತಾಲೂಕಿಗೆ 4 ಜಿಪಂ ಕ್ಷೇತ್ರಗಳು, 9 ತಾಪಂ ಕ್ಷೇತ್ರಗಳು, ಬಸವಕಲ್ಯಾಣ ತಾಲೂಕಿಗೆ 7 ಜಿಪಂ ಕ್ಷೇತ್ರಗಳು, 19 ತಾಪಂ ಕ್ಷೇತ್ರಗಳು, ಹುಲಸೂರು ತಾಲೂಕಿಗೆ 2 ಜಿಪಂ ಕ್ಷೇತ್ರಗಳು, 11 ತಾಪಂ ಕ್ಷೇತ್ರಗಳು, ಬೀದರ ತಾಲೂಕಿಗೆ 8 ಜಿಪಂ ಕ್ಷೇತ್ರಗಳು ಮತ್ತು 21 ತಾಪಂ ಕ್ಷೇತ್ರಗಳು ಸೇರಿ ಜಿಲ್ಲೆಯಾದ್ಯಂತ ಜಿಪಂ ಕ್ಷೇತ್ರಗಳ ಸಂಖ್ಯೆ 41ಕ್ಕೆ ಏರಿಕೆಯಾಗಿದ್ದರೆ, ತಾಪಂ ಕ್ಷೇತ್ರಗಳ ಸಂಖ್ಯೆ 113ಕ್ಕೆ ಇಳಿಕೆಯಾಗಿದೆ.

ಟಾಪ್ ನ್ಯೂಸ್

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.