ಕೆಎಂಎಫ್‌ ಆಯುರ್ವೇದಿಕ್‌ ಹಾಲಿಗೆ ಬೇಡಿಕೆ


Team Udayavani, Jun 2, 2021, 5:43 PM IST

cವಬನಬವಚಷಱ

ಬೀದರ: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮನೆ ಮದ್ದು, ಆಯುರ್ವೇದ ಔಷಧ ಹೆಚ್ಚು ಪರಿಣಾಮಕಾರಿ ಎಂಬುದು ವೈದ್ಯ ಲೋಕವೇ ಪ್ರಚಾರಪಡಿಸಿದೆ. ಇದೀಗ ಜೀವಕ್ಕೆ ಕಂಟಕವಾಗುತ್ತಿರುವ ಕೊರೊನಾ ವಿರುದ್ಧ ಸುರಕ್ಷತೆಗಾಗಿ ಕೆಎಂಎಫ್‌ ಬಿಡುಗಡೆ ಮಾಡಿರುವ “ಆಯುರ್ವೇದಿಕ್‌ ಗುಣ ಮತ್ತು ಪೌಷ್ಟಿಕಾಂಶವುಳ್ಳ’ ಹಾಲು ಉತ್ಪನ್ನಗಳಿಗೆ ರಾಜ್ಯಾದ್ಯಂತ ಉತ್ತಮ ಬೇಡಿಕೆ ವ್ಯಕ್ತವಾಗುತ್ತಿದೆ.

ಕೋವಿಡ್‌ ಸೋಂಕಿನ ಎರಡನೇ ಅಲೆ ಆರ್ಭಟದ ಈ ಸಂದರ್ಭದಲ್ಲಿ ಜೀವ ರಕ್ಷಣೆಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ತೀವ್ರ ಅಗತ್ಯವಿದ್ದು, ಸದ್ಯ ಆಯುರ್ವೇದಿಕ್‌ ಔಷಧವೊಂದೇ ಸುಲಭ ಮಾರ್ಗವಾಗಿದೆ. ಹಾಗಾಗಿ ಜನರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಬಲ್ಲ ಔಷಧಿಧೀಯ ಉತ್ಪನ್ನ ಬಳಸಿ ಕೆಎಂಎಫ್‌ 5 ಫ್ಲೆàವರ್‌ಗಳಲ್ಲಿ ಆಯುರ್ವೇದಿಕ್‌ ಹಾಲು ತಯಾರಿಸಿದೆ. ಆರಂಭಿಕ ದಿನಗಳಲ್ಲಿ ಈ ಉತ್ಪನಕ್ಕೆ ಹೆಚ್ಚು ಬೇಡಿಕೆ ಇರಲಿಲ್ಲ.

ಆದರೆ, ಸೋಂಕು ಗಂಭೀರ ಸ್ವರೂಪಕ್ಕೆ ತಿರುಗಿದ ಬಳಿಕ ಬೀದರ ಜಿಲ್ಲೆ ಸೇರಿ ರಾಜ್ಯದೆಲ್ಲೆಡೆ ಹೆಚ್ಚು ಬೇಡಿಕೆ ಬರುತ್ತಿದೆ. ಆಕಳ ಹಾಲಿನಲ್ಲಿ ಕಷಾಯ, ಶುಂಠಿ, ತುಳಸಿ, ಅಶ್ವಗಂಧ, ಕಾಳಮೆಣಸು, ಲವಂಗ ಮತ್ತು ಅರಿಶಿಣ ಅಂಶ ಹೊಂದಿರುವ ವಿವಿಧ ಫ್ಲೆàವರ್‌ಗಳ ಪ್ರೋಟೀನ್‌ ಮಿಲ್ಕ್ನ್ನು ಕೆಎಂಎಫ್‌ ಹೊರ ತಂದಿದೆ. ಆರೋಗ್ಯಕರವಾದ ಈ ಉತ್ಪನ್ನ ಜನರಿಗೆ ಸುಲಭವಾಗಿ ಕೈಗೆಟಬೇಕೆಂಬ ಉದ್ದೇಶದಿಂದ 20 ರೂ.ಗಳಲ್ಲಿ 200 ಮಿ.ಲೀನ ಮಿಲ್ಕ್ ಬಾಟಲ್‌ ತಯಾರಿಸಲಾಗುತ್ತಿದ್ದು, ರಾಜ್ಯದ ಪ್ರತಿ ನಂದಿನಿ ಬೂತ್‌ಗಳಲ್ಲಿ ಈ ಆಯುರ್ವೇದಿಕ್‌ ಹಾಲು ಲಭ್ಯವಿದೆ. ಬೆಂಗಳೂರಿನ ಮದರ್‌ ಡೇರಿಯಲ್ಲಿ ಉತ್ಪಾದನೆ ಆಗುವ ಆಯುರ್ವೇದಿಕ್‌ ಹಾಲಿನ ಬಾಟಲ್‌ ಗಳನ್ನು ಡಿಪೋಗಳ ಮೂಲಕ ನಂದಿನಿ ಬೂತ್‌ಗಳಿಗೆ ಪೂರೈಸಲಾಗುತ್ತಿದೆ.

ಈ ಮಿಲ್ಕ್ ತುಂಬ ಹೈಜನಿಕ್‌ ಆಗಿದ್ದು, 6 ತಿಂಗಳ ತನಕ ಬಳಕೆಗೆ ಯೋಗ್ಯವಾಗಿರಲಿದೆ. ಸಿಂಗಲ್‌ ಬಾಟಲ್‌ ಅಥವಾ 6 ಬಾಟಲ್‌ನ ಪ್ಯಾಕ್‌ ಗಳು ಸಹ ಲಭ್ಯ ಇವೆ. ಸದ್ಯ ಬೀದರ ಜಿಲ್ಲೆಯಲ್ಲಿ ನಿತ್ಯ 300 ಪ್ಯಾಕ್‌ಗಳು ಮಾರಾಟವಾಗುತ್ತಿದ್ದರೆ, ರಾಜ್ಯದಲ್ಲಿ 15 ರಿಂದ 18 ಸಾವಿರ ಬಾಟಲ್‌ಗ‌ಳ ಬೇಡಿಕೆ ಇದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್‌ ರೋಗಿಗಳು ಮತ್ತು ಹೋಂ ಐಸೋಲೇಶನ್‌ನಲ್ಲಿರುವ ಸೋಂಕಿತರು ಹೆಚ್ಚಾಗಿ ಈ ಆಯುರ್ವೇದಿಕ್‌ ಹಾಲು ಸೇವಿಸುತ್ತಿದ್ದರೆ, ಸಾಮಾನ್ಯ ಜನರಿಂದಲೂ ಅ ಧಿಕ ಬೇಡಿಕೆ ಇದೆ.

ಸದ್ಯ ರಾಜ್ಯದಲ್ಲಿ ನಿತ್ಯ 25ರಿಂದ 30 ಸಾವಿರವರೆಗೆ ಪ್ರೋಟೀನ್‌ ಮಿಲ್ಕ್ನ ಅಗತ್ಯವಿದೆ. ಆದರೆ, ಲಾಕ್‌ಡೌನ್‌ ಹಿನ್ನೆಲೆ ಮಿಶ್ರಣಾಂಶಗಳ ಅಲಭ್ಯತೆ ಮತ್ತು ಪ್ಯಾಕಿಂಗ್‌ಗೆ ಸಮಸ್ಯೆಯಿಂದಾಗಿ ಬೇಡಿಕೆಯಷ್ಟು ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಬರುವ ದಿನಗಳಲ್ಲಿ ಜನರಿಗೆ ಬೇಕಾದ ಪ್ರಮಾಣದಲ್ಲಿ ಉತ್ಪಾದನೆ ಗುರಿ ಕೆಎಂಎಫ್‌ ಹೊಂದಿದೆ. ದೇಶದಲ್ಲೇ ಗುಣಮಟ್ಟದ ನಂದಿನಿ ಹಾಲಿಗೆ ಹೆಸರುವಾಸಿಯಾಗಿರುವ ಕೆಎಂಎಫ್‌ ಈಗ ಜನರ ಆರೋಗ್ಯದ ದೃಷ್ಟಿಯಿಂದ ಆಯುರ್ವೇದಿಕ್‌ ಗುಣವುಳ್ಳ ಮಿಲ್ಕ್ ಹೊರ ತಂದು ಗಮನ ಸೆಳೆದಿದೆ. ಅರಿಶಿಣ ಅಂಶವುಳ್ಳ ಮಿಲ್ಕ್ ಮಾತ್ರ ತಂದಿದ್ದ ಗುಜರಾತ್‌ನಲ್ಲಿಯೂ ಕೆಎಂಎಫ್‌ ಮಾದರಿಯಲ್ಲಿ ಎಲ್ಲ ಫ್ಲೆವರ್‌ವುಳ್ಳ ಹಾಲು ಬಿಡುಗಡೆ ಮಾಡಲಾಗಿದೆ.

 

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.