ರುದ್ರಭೂಮಿಗೆ ಜಮೀನು ಕಲ್ಪಿಸಲು ಆಗ್ರಹ
Team Udayavani, Jul 10, 2022, 5:56 PM IST
ಬೀದರ: ನಗರದ ಶಹಾಪುರಗೇಟ್ ಬಳಿಯ ಹಳ್ಳದಕೇರಿ ವ್ಯಾಪ್ತಿಯ ಸರ್ವೇ ನಂ.58, 86/1ರಲ್ಲಿ ಸರ್ಕಾರಿ ಜಮೀನು ಇದ್ದು, ಇದರಲ್ಲಿ 2 ಎಕರೆ ಭೂಮಿಯನ್ನು ಸವಿತಾ ಸಮಾಜದ ಜನಾಂಗದವರಿಗಾಗಿ ರುದ್ರಭೂಮಿಗೆ ಮಂಜೂರು ಮಾಡಬೇಕು ಎಂದು ಆಗ್ರಹಿಸಲಾಗಿದೆ.
ಈ ಕುರಿತು ಬಿಎಸ್ಪಿ ಪಕ್ಷದ ನಗರ ಅಧ್ಯಕ್ಷ ದತ್ತಪ್ಪ ಶ್ರೀಮಂಗಲೆ, ಸವಿತಾ (ನಾವ್ಹಿ) ಸಮಾಜ ನಗರ ಅಧ್ಯಕ್ಷ ರಾಜು ಘೋಡಂಪಳ್ಳಿ, ಪ್ರಧಾನ ಕಾರ್ಯದರ್ಶಿ ಮಾಣಿಕ ಚಿನಿಮಿಶ್ರಿ ಅವರು ತಹಶೀಲ್ದಾರ್ಗೆ ಮನವಿ ಸಲ್ಲಿಸಿದ್ದಾರೆ.
ರುದ್ರಭೂಮಿಗಾಗಿ ಈ ಹಿಂದೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರುದ್ರಭೂಮಿ ಇಲ್ಲದ ಕಾರಣ ಸವಿತಾ ಸಮಾಜದ ಜನರಿಗೆ ತೊಂದರೆಯಾಗುತ್ತಿದೆ. ಸರ್ಕಾರದ ಆದೇಶದಂತೆ ಸವಿತಾ ಸಮಾಜಕ್ಕೆ ರುದ್ರಭೂಮಿಗಾಗಿ 2 ಎಕರೆ ಜಮೀನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸಮಾಜದ ಪ್ರಮುಖರಾದ ಮಾಣಿಕ ವಡ್ಡಿಕರ್, ರಾಜಕುಮಾರ ಘೋಡಂಪಳ್ಳಿ, ಅಂಬಾದಾಸ ಮೋರಗಿಕರ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ
Bidar: 9 ಲಕ್ಷ ರೂ. ಮೌಲ್ಯದ ಕಚ್ಚಾ ಪಾನ್ ಮಸಾಲಾ, 3 ಲಕ್ಷ ರೂ. ಮೌಲ್ಯ ಸೀರೆ ಜಪ್ತಿ
ಹಾಲ್ ಟಿಕೆಟನ್ನೇ ತಿಂದು ಹಾಕಿದ ಕುರಿ… ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
Bidar; ಖೂಬಾ ಪರ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ
Loksabha: ಬೀದರ್ ಕ್ಷೇತ್ರಕ್ಕೆ ಸಾಗರ ಖಂಡ್ರೆ ಹೆಸರು ಅಂತಿಮ; ಸಿಎಂ ಭೇಟಿಯಾದ ಈಶ್ವರ್