ಕೈದಿಗಳಲ್ಲಿ ಒಳ್ಳೆಯ ಭಾವನೆ ಬೆಳೆಸಿ: ಯಾಳಗಿ
Team Udayavani, Apr 19, 2020, 3:26 PM IST
ದೇವದುರ್ಗ: ನೂತನ ಕಾರಾಗೃಹವನ್ನು ತಹಶೀಲ್ದಾರ್ ಮಧುರಾಜ್ ಯಾಳಗಿ ಉದ್ಘಾಟಿಸಿದರು.
ದೇವದುರ್ಗ: ವಿವಿಧ ಆಪರಾಧ ಕೃತ್ಯಗಳ ಮೇಲೆ ಬಂಧಿಯಾಗಿರುವ ಕೈದಿಗಳಲ್ಲಿ ಅಧಿಕಾರಿಗಳು ಒಳ್ಳೆಯ ಭಾವನೆಗಳು ಬೆಳೆಸುವ ಜತೆ ಸಾಮಾನ್ಯ ಜನರಂತೆ ಬದುಕಲು ಸಮಾಜದಲ್ಲಿ ಅವಕಾಶ ಕಲ್ಪಿಸಬೇಕು ಎಂದು ತಹಶೀಲ್ದಾರ್ ಮಧುರಾಜ್ ಯಾಳಗಿ ಹೇಳಿದರು.
ಪಟ್ಟಣದಲ್ಲಿರುವ ಕಾರಾಗೃಹ ಮತ್ತು ಸುಧಾರಣಾ ಸೇವಾ ತಾಲೂಕು ಉಪಕಾರಾಗೃಹ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಕೆಟ್ಟ ಘಳಿಗೆಯಲ್ಲಿ ಅಪರಾಧ ಕೃತ್ಯ ಮಾಡಿ ಜೈಲು ಶಿಕ್ಷೆಗೆ ಗುರಿಯಾಗಿರುವ ಕೈದಿಗಳಲ್ಲಿ ಶಿಸ್ತು, ಪುಸ್ತಕ ಓದುವ ಹವ್ಯಾಸ ಬೆಳೆಸುವ ಕಡೆ ಹೆಚ್ಚಿನ ಗಮನಹರಿಸಬೇಕು. ಸಮಾಜದಲ್ಲಿ ಒಳ್ಳೆಯವರಂತೆ ಬದುಕಲು ತಿದ್ದುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಕಾರಾಗೃಹ ಅಧೀಕ್ಷಕರ ಡಿ.ಆರ್. ಅಂದಾನಿ, ಸಿಪಿಐ ಆರ್.ಎಂ. ನದಾಫ್, ಪಿಎಸ್ಐ ಎಲ್.ಬಿ. ಅಗ್ನಿ, ಡಾ| ಎಸ್. ಪ್ರಿಯಾಂಕ, ಎಚ್. ಶಿವರಾಜ ಇದ್ದರು.