ದೇವರ ಸಾನ್ನಿಧ್ಯದ ಅನುಭಾವ ಪಡೆಯಿರಿ
Team Udayavani, Dec 15, 2021, 11:40 AM IST
ಭಾಲ್ಕಿ: ಎಲ್ಲರೂ ದೇವರ ಸಾನ್ನಿಧ್ಯದಲ್ಲಿರುವ ಅನುಭಾವ ಪಡೆಯುಂತಾಗಬೇಕು ಎಂದು ತೆಲಂಗಾಣ ರಾಜ್ಯದ ಜಹಿರಾಬಾದ ತಾಲೂಕಿನ ಮಲ್ಲಯ್ಯಗಿರಿಯ ಡಾ| ಬಸವಲಿಂಗ ಅವಧೂತರು ಹೇಳಿದರು.
ನಾವದಗಿ ಗ್ರಾಮದ ಸದ್ಗುರು ರೇವಪ್ಪಯ್ನಾ ಮಹಾಶಿವಶರಣರ ದೇವಸ್ಥಾನದಲ್ಲಿ ಸದ್ಗುರು ರೇವಪ್ಪಯ್ನಾ ಸ್ವಾಮಿಗಳ ಜಾತ್ರೋತ್ಸವ ನಿಮಿತ್ತ ನಡೆದ ಧರ್ಮಸಭೆಯಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಎಲ್ಲರೂ ಸುಖವಾಗಿರಬೇಕು ಎನ್ನುವ ಭಾವ ನಮ್ಮಲ್ಲಿರಬೇಕು. ಸರ್ವೇ ಜನ ಸುಖೀನೋ ಭವಂತು ಎನ್ನುವ ನಾಣ್ನುಡಿಯಂತೆ ಎಲ್ಲರೂ ಸುಖವಾಗಿದ್ದರೆ ಸುಂದರ ಜೀವನ ನಡೆಸಲು ಸಾಧ್ಯ. ಮನೆಯಲ್ಲಿರುವ ಎಲ್ಲರೂ ಸುಖವಾಗಿರುವಂತೆ ನಾವು ನೋಡಿಕೊಳ್ಳಬೇಕು. ಸದಾ ದೇವರ ಧ್ಯಾನ ಮಾಡುತ್ತ ಕಾಲ ಕಳೆಯಬೇಕು. ಧ್ಯಾನದಲ್ಲಿ ನಾವು ಬೇಡಿಕೊಂಡ ಎಲ್ಲವನ್ನೂ ದೇವನು ನಮಗೆ ಕೊಡುವನು. ಶುದ್ಧ ಮನಸ್ಸಿನಿಂದ, ಸ್ವತ್ಛವಾದ ದೇಹದೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ದೇವರ ದಯೆ, ಕರುಣೆಗೆ ಪಾತ್ರರಾಗಬೇಕು ಎಂದರು.
ಧರ್ಮಸಭೆ ಪ್ರವಚನದ ನಂತರ ಶ್ರೀಕಾಂತ ದಾಬಶೆಟ್ಟಿ ದಂಪತಿಯಿಂದ ಪಾದಪೂಜೆ ನಡೆಸಲಾಯಿತು. ಈ ವೇಳೆ ಪ್ರಮುಖರಾದ ಪೊಲೀಸ್ ಪೇದೆ ಭಾಗವತ, ದೇವಸ್ಥಾನದ ರೇವಣಯ್ನಾಸ್ವಾಮಿ, ಗ್ರಾಪಂ ಸದಸ್ಯ ರಾಜಶೇಖರ ಬಿರಾದಾರ, ರಾಜಕುಮಾರ ಗುಂಡಯ್ನಾ ಸ್ವಾಮಿ, ಭಾಗಮ್ಮಾ ವೀರಪ್ಪ ಬಿರಾದಾರ, ಮಲ್ಲಿಕಾರ್ಜುನ ಶೇರಿಕಾರ, ಪ್ರದೀಪ ನಾಗಶೆಟ್ಟಿ ಪಾಟೀಲ, ಮಲ್ಲಿಕಾರ್ಜುನ ಕನಕಟ್ಟೆ, ಚಂದ್ರಕಾಂತ ಗೌಡಪ್ಪ ಬಿರಾದಾರ ಇದ್ದರು. ಹಾವಯ್ನಾಸ್ವಾಮಿ ಸ್ವಾಗತಿಸಿದರು. ಶಾಂತವೀರಸ್ವಾಮಿ ನಿರೂಪಿಸಿದರು. ಪ್ರಭುಲಿಂಗಸ್ವಾಮಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ
Bidar: 9 ಲಕ್ಷ ರೂ. ಮೌಲ್ಯದ ಕಚ್ಚಾ ಪಾನ್ ಮಸಾಲಾ, 3 ಲಕ್ಷ ರೂ. ಮೌಲ್ಯ ಸೀರೆ ಜಪ್ತಿ
ಹಾಲ್ ಟಿಕೆಟನ್ನೇ ತಿಂದು ಹಾಕಿದ ಕುರಿ… ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
Bidar; ಖೂಬಾ ಪರ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ
Loksabha: ಬೀದರ್ ಕ್ಷೇತ್ರಕ್ಕೆ ಸಾಗರ ಖಂಡ್ರೆ ಹೆಸರು ಅಂತಿಮ; ಸಿಎಂ ಭೇಟಿಯಾದ ಈಶ್ವರ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ