ಸಿಎಂ ಇಬ್ರಾಹಿಂ ಅವರ ಮಗ ಹುಮನಾಬಾದ ಕ್ಷೇತ್ರದಿಂದ ಸ್ಪರ್ಧೆ?
Team Udayavani, Sep 26, 2022, 11:18 AM IST
ಹುಮನಾಬಾದ್: ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ಮಗ ಸಿಎಂ ಫೈಜ್ ಮೊಹಮ್ಮದ್ ಇಂದು ಸೋಮವಾರ, ಮಂಗಳವಾರ ಹುಮನಾಬಾದ ವಿಧಾನ ಸಭಾ ಕ್ಷೇತ್ರದ ವಿವಿಧಡೆ ಸಂಚಾರ ನಡೆಸಲ್ಲಿದ್ದು, ರಾಜಕೀಯವಾಗಿ ವಿವಿಧ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನಿಂದ ರಸ್ತೆ ಮೂಲಕ ನೇರವಾಗಿ ಸೋಮವಾರ ಬೆಳಿಗ್ಗೆ 11:30ಕ್ಕೆ ಹುಮನಾಬಾದ ಪಟ್ಟಣಕ್ಕೆ ಆಗಮಿಸುತ್ತಿದ್ದು, ಮೊದಲಿಗೆ ಹೊಚ್ಚಕನಳ್ಳಿ ಗ್ರಾಮದಲ್ಲಿನ ದಿವಂಗತ ಮಾಜಿ ಸಚಿವ ಮೆರಾಜೊದ್ದೀನ್ ಪಟೇಲ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ನಂತರ ಹುಡಗಿ ಗ್ರಾಮದ ವಿರಕ್ತಮಠದ ಚನ್ನಮಲ್ಲ ಸ್ವಾಮಿಜಿ ಭೇಟಿ, ಪಟ್ಟಣದ ಕುಲ ದೇವ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ, ಮಾಣಿಕನಗರದ ಮಾಣಿಕ ಪ್ರಭುಗಳ ದರ್ಶನ, ಮಧ್ಯಾಹ್ನ ಜೆಡಿಎಸ್ ಪಕ್ಷದ ಮುಖಂಡ ಶೌಕತ್ ಅವರ ಮನೆಯಲ್ಲಿ ಊಟ ಮಾಡಿ ನಂತರಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಲ್ಲಿದ್ದಾರೆ.
ನಂತರ ಪಕ್ಷದ ಕಚೇರಿಗೆ ತೆರಳಿ ಕಾರ್ಯಕರ್ತರೊಂದಿಗೆ ಸಭೆ ನಡೆಸಲ್ಲಿದ್ದಾರೆ. ಸಂಜೆ 5:15ಕ್ಕೆ ರಾಜೇಶ್ವರದ ರುದ್ರಮುನಿ ಶಿವಾಚಾರ್ಯರ ಭೇಟಿ, ಹಿರೇನಾಗಂವ ಶಾಂತಲಿಗ ಸ್ವಾಮಿಗಳ ಭೇಟಿ ಮಾಡಲಿದ್ದಾರೆ. ಮಂಗಳವಾರ ಸೆ. 27ರಂದು ಬೆಳಿಗ್ಗೆ ಜೆಡಿಎಸ್ ಮುಖಂಡ ಸುರೇಶ ಸೀಗಿ ಅವರ ಮನೆಯಲ್ಲಿ ಉಪಹಾರ, ಬ್ಯಾಂಕ್ ರೆಡ್ಡಿ ಅವರ ಮನೆಗೆ ಭೇಟಿ, ಹಳ್ಳಿಖೇಡ (ಬಿ) ಚಿಕ್ಕಮಠಕ್ಕೆ ಭೇಟಿ, ಚಿಟಗುಪ್ಪದ ಬುಖಾರಿ ಸಾಹೇಬ್ ಅವರ ಮನೆಗೆ ಬೇಟಿ, ನಾನಾ ಹಜರತ್ ದರ್ಗಾಕ್ಕೆ ಭೇಟಿ ನೀಡಿ ರಾತ್ರೆ ಮರಳಿ ಬೆಂಗಳೂರು ಪ್ರಯಾಣ ನಡೆಸಲ್ಲಿದ್ದಾರೆ.
ಚುನಾವಣೆ ಸ್ಪರ್ಧೆಗೆ ಸಜ್ಜು:
ಸಿಎಂ ಇಬ್ರಾಹಿಂ ಅವರು ಈ ಹಿಂದೆ ಹುಮನಾಬಾದ ಪಟ್ಟಣಕ್ಕೆ ಬೇಟಿನೀಡಿದ ಸಂದರ್ಭದಲ್ಲಿ ಅನೇಕರು ಅವರನ್ನು ಹುಮನಾಬಾದ ಕ್ಷೇತ್ರದಿಂದ ಸ್ಪರ್ಧೆ ನಡೆಸುವಂತೆ ಒತ್ತಾಯಿಸಿದರು. ಕೆಲ ಮುಖಂಡರು ಬೆಂಗಳೂರಿಗೆ ತೆರಳಿ ಹುಮನಾಬಾದ ವಿಧಾನ ಸಭಾ ಕ್ಷೇತ್ರದ ಕುರಿತು ವಿವರಣೆ ನೀಡಿದ್ದಾರೆ. ವಿವಿಧ ಚುನಾವಣೆಗಳ ಲೆಕ್ಕಾಚಾರಗಳು ವಿವರಿಸಿದ್ದಾರೆ. ಕಾರಣ ಸಿಎಂ ಇಬ್ರಾಹಿಂ ಅವರು ತಮ್ಮ ಮಗನಿಗೆ ಹುಮನಾಬಾದ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸುವುದಾಗಿ ತಿಳಿಸಿದ್ದಾರೆ. ಕಾರಣ ಮತ ಕ್ಷೇತ್ರದ ಎಲ್ಲಾ ಕಡೆಗಳಲ್ಲಿ ಎರಡು ದಿನಗಳಕಾಲ ಸಂಚಾರ ನಡೆಸಲ್ಲಿದ್ದಾರೆ ಎಂದು ಮುಖಂಡರು ತಿಳಿಸಿದ್ದಾರೆ.
– ದುರ್ಯೋಧನ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್
ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
MUST WATCH
ಹೊಸ ಸೇರ್ಪಡೆ
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ
CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್