ಓಂ ಶಾಂತಿ ನೂತನ ವಿಶ್ವ ಕಲ್ಯಾಣ ಭವನ ಉದ್ಘಾಟನೆ
Team Udayavani, Nov 15, 2021, 3:45 PM IST
ಹುಮನಾಬಾದ: ಪಟ್ಟಣದ ಹೊರವಲಯದಲ್ಲಿ ನಿರ್ಮಾಣಗೊಂಡ ಓಂ ಶಾಂತಿ ನೂತನ ವಿಶ್ವ ಕಲ್ಯಾಣ ಭವನದ ಉದ್ಘಾಟನೆ ನಡೆಯಿತು.
ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಸಂತೋಷಿ ದಿದಿ ಉದ್ಘಾಟನೆ ನೆರವೇರಿಸಿ ಮಾತನಾಡಿ, ದೇಶದಲ್ಲಿ ಭವನಗಳು ಅನೇಕ ನಿರ್ಮಾಣಗೊಳ್ಳುತ್ತವೆ. ಆದರೆ ಆ ಭವನಗಳಲ್ಲಿ ಯಾವ ಕಾರ್ಯಗಳು ನಡೆಯುತ್ತಿವೆ ಎಂಬುವುದು ಮುಖ್ಯ. ಓಂ ಶಾಂತಿ ಮೂಲಕ ಅನೇಕರು ನೆಮ್ಮದಿ ಪಡೆದುಕೊಳ್ಳುತ್ತಿದ್ದಾರೆ. ನೂತನ ವಿಶ್ವಕಲ್ಯಾಣ ಭವನ ಕೂಡ ಅನೇಕರ ಜೀವದಲ್ಲಿ ಬದಲಾವಣೆ ತರುವ ಕಾರ್ಯ ಮಾಡಲಿದೆ ಎಂದ ಅವರು, ಚಿಟಗುಪ್ಪದಲ್ಲಿ ನಿರ್ಮಾಣಗೊಳ್ಳುವ ಭವನಕ್ಕೆ ಶಾಂತಿ ಭವನ ಎಂದು ಹೆಸರು ಘೋಷಣೆ ಮಾಡಿದರು.
ಶಾಸಕ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಪಾಟೀಲ ಮಾತನಾಡಿ, ಹಣ ಗಳಿಸುವ ಹಂಬಲ ಜನರಲ್ಲಿ ಹೆಚ್ಚುತ್ತಿದ್ದು, ಜೀವನಕ್ಕೆ ಬೇಕಿರುವುದು ಮೊದಲು ನೆಮ್ಮದಿ ಎಂಬುವುದು ಮರೆಯುತ್ತಿದ್ದಾರೆ ಎಂದರು. ಪ್ರತಿಮಾ ಬಹೇನ್, ಪ್ರಭಾಕರ ಭಾಯಿ, ಪ್ರೇಮಾ ಪಾಟೀಲ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ