ಹಸಿರು ಸೇನೆ ಗ್ರಾಮ ಘಟಕಕ್ಕೆ ಚಾಲನೆ
Team Udayavani, Feb 27, 2022, 5:54 PM IST
ಹುಣಸಗಿ: ಗ್ರಾಮೀಣ ಭಾಗದ ಸಮಸ್ಯೆಗಳನ್ನು ಪರಿಹರಿಸು ವುದರೊಂದಿಗೆ ಸದಾ ರೈತಪರ ಕಾಳಜಿ ವಹಿಸಿ ಸಂಘ ಬಲವರ್ಧನೆಗೆ ಶ್ರಮಿಸಬೇಕು ಎಂದು ರಾಜ್ಯ ರೈತ ಸಂಘದ ತಾಲೂಕು ಘಟಕ ಅಧ್ಯಕ್ಷ ಮಲ್ಲನಗೌಡ ನಗನೂರ ಹೇಳಿದರು.
ತಾಲೂಕಿನ ಹೊಂಬಳಕಲ್ಲ ಗ್ರಾಮದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕಕ್ಕೆ ಚಾಲನೆ ನೀಡಿ ಮಾತನಾಡಿ, ರೈತರ ಪ್ರತಿಯೊಂದು ಸಮಸ್ಯೆ ಉದ್ಬವಿಸಿದ್ದಲ್ಲಿ ತಕ್ಷಣ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸಂಘಟನೆ ಕೆಲಸ ಮಾಡಬೇಕು ಎಂದರು.
ತಾಲೂಕು ಘಟಕದ ಕಾರ್ಯಾಧ್ಯಕ್ಷ ರುದ್ರೇಶ ಪಡಶೆಟ್ಟಿ ಮಾತನಾಡಿದರು. ಮಲಕರೆಡ್ಡಿ ಬಳವಾಟ, ಅಮರೇಶ ಬಿರಾದಾರ, ಚಂದ್ರಶೇಖರ, ಹಣಮಂತ್ರಾಯ ವಂದಲ ಹಾಗೂ ಗ್ರಾಮ ಘಟಕದ ಅಧ್ಯಕ್ಷ ಮಲ್ಲನಗೌಡ ಕೆಂಭಾವಿ, ಪದಾಧಿಕಾರಿಗಳಾದ ಮಾಳಪ್ಪ ಮೂಲಿಮನಿ, ಜಟ್ಟೆಪ್ಪ ಪೂಜಾರಿ, ರೇವಣಸಿದ್ದಪ್ಪ, ನಿಂಗಪ್ಪ ಮೂಲಿಮನಿ, ಶರಣಗೌಡ ಪೊಲೀಸ್ ಪಾಟೀಲ, ಜಟ್ಟೆಪ್ಪ ಸೋಮನಾಳ ಸೇರಿದಂತೆ ಇತರರಿದ್ದರು.