62 ಸಾವಿರ ರೈತರಿಗಿಲ್ಲ “ಕಿಸಾನ್‌ ಸಮ್ಮಾನ್‌”


Team Udayavani, Jan 7, 2022, 12:06 PM IST

9kisan

ಬೀದರ: ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಹೊಸ ವರ್ಷದ ಉಡುಗರೆಯಾಗಿ ಪ್ರಧಾನಿ ಮೋದಿ “ಕಿಸಾನ್‌ ಸಮ್ಮಾನ್‌’ ಯೋಜನೆಯಡಿ 10ನೇ ಕಂತಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಿದ್ದಾರೆ. ಆದರೆ ಮಹತ್ವಕಾಂಕ್ಷಿ ಯೋಜನೆಯಡಿ ಜಿಲ್ಲೆಯ 62 ಸಾವಿರ ರೈತರು ಈ ಕಂತಿನದಿಂದ ವಂಚಿತರಾಗಿದ್ದು, ಸರ್ಕಾರದ ನೆರವಿನ ಹಣಕ್ಕೆ ಎದುರು ನೋಡುತ್ತಿದ್ದಾರೆ.

ರೈತರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ವರ್ಷಕ್ಕೆ 6,000 ಹಣವನ್ನು ಮೂರು ಸಮಾನ ಕಂತುಗಳಲ್ಲಿ ನೀಡುತ್ತಿದೆ. ಇದಕ್ಕೆ ಜತೆಯಾಗಿ ರಾಜ್ಯ ಸರ್ಕಾರ 4,000 ರೂ. ಎರಡು ಕಂತುಗಳಲ್ಲಿ ಜಮೆ ಮಾಡುತ್ತಿವೆ. ಅದರಂತೆ ಕೇಂದ್ರದಿಂದ ವಾರ್ಷಿಕವಾಗಿ 3ನೇ ಕಂತಾಗಿ 2 ಸಾವಿರ ರೂ.ಗಳಂತೆ ಜ.1ರಂದು ನಿಧಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಈ ಬಾರಿ ರೈತರ ದಾಖಲಾತಿಗಳ ಪರಿಶೀಲನೆ ಹೆಸರಲ್ಲಿ ಸುಮಾರು 62,214 ಕೃಷಿಕರ ಹಣವನ್ನು ಸಿಲುಕಿಕೊಂಡಿದ್ದು, ಯೋಜನೆಯಿಂದ ವಂಚಿತರನ್ನಾಗಿ ಮಾಡಲಾಗಿದೆ.

ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಜಿಲ್ಲೆ 1,76,625 ರೈತರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದು, ಈ ಹಿಂದಿನ ಕಂತುಗಳ ಲಾಭವನ್ನು ಪಡೆದುಕೊಂಡಿದ್ದಾರೆ. 2 ಹೆಕ್ಟೇರ್‌ ನೊಳಗೆ ಕೃಷಿ ಭೂಮಿ ಹೊಂದಿರುವ ಸಣ್ಣ-ಅತಿ ಸಣ್ಣ ರೈತರ ಖಾತೆಗೆ ಡಿಜಿಟಲ್‌ ಬ್ಯಾಂಕಿಂಗ್‌ ಮೂಲಕ ನೇರವಾಗಿ ಜಮೆ ಮಾಡಲಾಗಿದೆ. 10ನೇ ಕಂತಿನಲ್ಲಿ ಮಾತ್ರ ಜಿಲ್ಲೆಯ 1,14,411 ಕೃಷಿಕರಿಗೆ ಮಾತ್ರ ಈವರೆಗೆ ಹಣ ಜಮೆ ಆಗಿದೆ.

ಇನ್ನೂ ಬರೋಬ್ಬರಿ 62,214 ರೈತರ ಕೈಗೆ ಹಣ ಸಿಕ್ಕಿಲ್ಲ. ಭೂಮಿ ರೆಕಾರ್ಡ್ ನಲ್ಲಿ ರೈತರ ಕೃಷಿ ಭೂಮಿ ಮತ್ತು ಆಧಾರ್‌ ಸಂಖ್ಯೆ ಇತರೆ ದಾಖಲೆಗಳಲ್ಲಿ ತಪ್ಪು ಕಂಡು ಬಂದಿದ್ದರಿಂದ ಕಡಿತ ಮಾಡಲಾಗಿದ್ದು, ಜನವರಿ ಅಂತ್ಯದೊಳಗೆ ಮರು ಪರಿಶೀಲನೆ ಕಾರ್ಯ ನಡೆಸಲಾಗುತ್ತಿದೆ. ಈ ಕಾರಣಕ್ಕೆ ವಿಳಂಬವಾಗಿದೆ ಎಂಬುದು ಕೃಷಿ ಅಧಿಕಾರಿಗಳ ಸಬೂಬು. ಆದರೆ, ಹಿಂದಿನ ಕಂತುಗಳಲ್ಲಿ ಪ್ರೋತ್ಸಾಹ ಧನ ಪಡೆದಿರುವ ರೈತರ ದಾಖಲೆಗಳು ಮುಂದಿನ ಕಂತುಗಳಲ್ಲಿ ಹೇಗೆ ತಪ್ಪು ಆಗುತ್ತವೆ ಎಂದು ಆತಂಕ.

ಕೋವಿಡ್‌-19 ಜತೆಗೆ ಅತಿವೃಷ್ಟಿಯಿಂದಾಗಿ ಕೃಷಿಕರು ಆರ್ಥಿಕವಾಗಿ ಕುಸಿತ ಕಂಡಿದ್ದಾರೆ. ಈಗ ಸಾಲ ಸೂಲ ಮಾಡಿ ಹಿಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ. ಆದರೆ, ಈಗ ದಾಖಲೆಗಳ ಪರಿಶೀಲನೆ ನೆಪದಲ್ಲಿ ಕಡಿತ ಮಾಡಿರುವುದು ಪ್ರಧಾನಿಗಳು ಘೋಷಿಸಿದ್ದ ಸಿಹಿ ಸುದ್ದಿ ರೈತರಿಗೆ ಇನ್ನೂ ಕಹಿಯಾಗಿಯೇ ಪರಿಣಮಿಸಿದೆ.

ಇದನ್ನೂ ಓದಿ:ಕೇಂದ್ರದಿಂದಲೇ ಭದ್ರತಾ ಲೋಪವಾಗಿದೆ, ಪ್ರಧಾನಿಗಳೇ ಮಾರ್ಗಸೂಚಿಗಳನ್ನು ಪಾಲಿಸಿಲ್ಲ: ಖರ್ಗೆ

“ಕಿಸಾನ್‌ ಸಮ್ಮಾನ್‌’ ಅಡಿ ಜಿಲ್ಲೆಗೆ 10ನೇ ಕಂತಿನಲ್ಲಿ 22.88 ಕೋಟಿ ರೂ. ಸೇರಿ ಈವರೆಗಿನ ಎಲ್ಲ ಕಂತುಗಳಲ್ಲಿ 358.52 ಕೋಟಿ ರೂ. ಹಣ ಬಿಡುಗಡೆ ಆಗಿದೆ. ಅದರಲ್ಲಿ ಕೇಂದ್ರ ಸರ್ಕಾರದಿಂದ 1.91 ಲಕ್ಷ ರೈತರಿಗೆ 264 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದಿಂದ 1,62,991 ರೈತರಿಗೆ 94.52 ಕೋಟಿ ರೂ. ಬಂದಿದೆ. ಜಿಲ್ಲೆಗೆ ಬಿಡುಗಡೆಯಾದ ಒಟ್ಟಾರೆ ನಿಧಿಯಲ್ಲಿ ಅತಿ ಹೆಚ್ಚು ಭಾಲ್ಕಿ ತಾಲೂಕು 84.49 ಕೋಟಿ ರೂ. ಮತ್ತು ಅತಿ ಕಡಿಮೆ ಬೀದರ ತಾಲೂಕು 56.63 ಕೋಟಿ ರೂ. ಸೇರಿದಂತೆ. ಇನ್ನುಳಿದಂತೆ ಔರಾದ ತಾಲೂಕು 77.49 ಕೋಟಿ, ಬಸವಕಲ್ಯಾಣ 75.03 ಕೋಟಿ ಮತ್ತು ಹುಮನಾಬಾದ್‌ 64.88 ಕೋಟಿ ರೂ. ಜಮೆ ಆಗಿದೆ.

“ಕಿಸಾನ್‌ ಸಮ್ಮಾನ್‌’ ಅಡಿ ಜಿಲ್ಲೆಯ ನೋಂದಾಯಿತ ರೈತರ ಪೈಕಿ 1,14,411 ಮಂದಿಗೆ ಹಣ ಜಮೆ ಆಗಿದೆ. ಇನ್ನುಳಿದ 62,214 ಕೃಷಿಕರಿಗೆ ಹಣ ಬಂದಿಲ್ಲ. ಅವರ ಕೃಷಿ ಭೂಮಿ ದಾಖಲೆ ಮತ್ತು ಆಧಾರ್‌ ಸಂಖ್ಯೆ ಮರು ಪರಿಶೀಲನೆ ನಡೆಯುತ್ತಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಈವರೆಗೆ ಯೋಜನೆಯಡಿ ಜಿಲ್ಲೆಗೆ ಒಟ್ಟಾರೆ 358.52 ಕೋಟಿ ಹಣ ಬಂದಿದೆ. -ತಾರಾಮಣಿ ಜಿ.ಎಚ್‌, ಜಂಟಿ ಕೃಷಿ ನಿರ್ದೇಶಕರು, ಬೀದರ

ಕಿಸಾನ್‌ ಸಮ್ಮಾನ್‌ ಯೋಜನೆಯ ಲಾಭದಿಂದ ಜಿಲ್ಲೆಯ ಸಾವಿರಾರು ರೈತರು ವಂಚಿತರಾಗಿದ್ದಾರೆ. 9ನೇ ಕಂತು ಪಡೆದಿರುವ ಸಾಕಷ್ಟು ರೈತರಿಗೆ ಹೊಸ ಕಂತಿನಿಂದ ಕಡಿತ ಮಾಡಲಾಗಿದೆ. ಈ ಹಿಂದೆ ಸರಿಯಾಗಿದ್ದ ದಾಖಲೆಗಳು ಈಗ ತಪ್ಪು ಎಂದು ಹೇಳಿ ಮರು ಪರಿಶೀಲನೆ ಹೆಸರಿನಲ್ಲಿ ಅನ್ಯಾಯ ಮಾಡಲಾಗುತ್ತಿದೆ. ಕೂಡಲೇ ಈ ಸಮಸ್ಯೆ ಪರಿಹರಿಸಿ ಹಣ ಕೃಷಿಕರ ಕೈಸೇರುವಂತೆ ಕ್ರಮ ವಹಿಸಬೇಕು. -ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾಧ್ಯಕ್ಷ, ರೈತ ಸಂಘ, ಬೀದರ

-ಶಶಿಕಾಂತ ಬಂಬುಳಗೆ

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.