ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ-ಇಬ್ಬರ ಸೆರೆ
Team Udayavani, Mar 4, 2022, 11:39 AM IST
ಬೀದರ: ಹುಮನಾಬಾದ ತಾಲೂಕಿನ ಮಂಗಲಗಿ ಟೋಲ್ ಗೇಟ್ ಹತ್ತಿರ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಅಕ್ರಮವಾಗಿ ಸಾಗಿಸುತ್ತಿದ್ದ ಒಂದು ಲಕ್ಷ ರೂ. ಮೌಲ್ಯದ 10 ಕೆ.ಜಿ ಒಣ ಗಾಂಜಾ ಜಪ್ತಿ ಮಾಡಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಅಧಿಕಾರಿಗಳು ವಾಹನಗಳ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಅಕ್ರಮ ಗಾಂಜಾ ಸಾಗಾಟ ಪತ್ತೆಯಾಗಿದೆ. ಮಹಾರಾಷ್ಟ್ರದ ನಂದುರ್ಗಾ ತಾಂಡಾದ ಶಾಮರಾವ್ ದಗಡು ಪವಾರ ಮತ್ತು ಗೂಬಾಳ್ ಗ್ರಾಮದ ರವಿ ಉತ್ತಮ ಜಾಧವ್ ಎಂಬುವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ವೇಳೆ ಆರೋಪಿಗಳಿಂದ ಬೈಕ್ನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧಿಧೀಕ್ಷಕ ಆನಂದ ಉಕ್ಕಲಿ, ಅಬಕಾರಿ ನಿರೀಕ್ಷಕ ರವೀಂದ್ರ ಪಾಟೀಲ, ದಿಲೀಪಸಿಂಗ್ ಠಾಕೂರ್ ಹಾಗೂ ಸಿಬ್ಬಂದಿಗಳಾದ ಶಿವರಾಮ್, ಮಧುಕರ, ಉಮೇಶ ಮತ್ತು ವಿಷ್ಣುವರ್ಧನ ಇದ್ದರು.