ಲಕ್ಷ್ಮೀ ವೆಂಕಟೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ
Team Udayavani, Jan 23, 2018, 1:27 PM IST
ಬಸವಕಲ್ಯಾಣ: ನಗರದ ಲಕ್ಷ್ಮೀ ವೆಂಕಟೇಶ ಸಂಸ್ಥಾನದ ವಾರ್ಷಿಕೋತ್ಸವ ನಿಮಿತ್ತ ಸಂಸ್ಥಾನದಲ್ಲಿ ವೆಂಕಟೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ತಿರುಮಲಾದ ಶ್ರೀ ಮಹಂತ ಅರ್ಜುನದಾಸಜಿ ಮಹಾರಾಜ, ನಾಸಿಕನ ಶ್ರೀ ಅನಿಕೇತಾನಂದ ಶಾಸ್ತ್ರೀ ಮಹಾರಾಜ, ತಿರುಪತಿ ದೇವಸ್ಥಾನದ ಮುಖ್ಯ ಅರ್ಚಕ ಶ್ರೀ ರಂಗನಾಥ ಸ್ವಾಮಿ ನೇತೃತ್ವದಲ್ಲಿ ವೇದ ಮಂತ್ರ ಘೋಷಣೆಗಳ ಮಧ್ಯೆ ಮೂರ್ತಿ ಪ್ರಾಣ ಪ್ರತಿಷ್ಠಾನ ನೆರವೇರಿಸಲಾಯಿತು. ಉಸ್ಮಾನಾಬಾದ ಜಿಲ್ಲೆಯ ಶ್ರೀ ಅಪ್ಪ ಮಹಾರಾಜ
ಹಾಗೂ ಶ್ರೀಗಳು ಭಾಗವಹಿಸಿದ್ದರು.
ನಗರ ಸೇರಿದಂತೆ ವಿವಿಧೆಡೆಯ ಭಕ್ತರು ಭಾಗವಹಿಸಿ ದರ್ಶನ ಪಡೆದರು. ಇದಕ್ಕೂ ಮುನ್ನ ನಗರದ ಶ್ರೀ ಸದಾನಂದ ಸ್ವಾಮಿ ಮಠದಿಂದ ಸಂಸ್ಥಾನದ ವರೆಗೆ ಅಲಂಕೃತ ವಾಹನದಲ್ಲಿ ವೆಂಕಟೇಶ್ವ ಮೂರ್ತಿ ಮೆರವಣಿಗೆ ಜರುಗಿತು.
ಉಸ್ಮಾನಾಬಾದನ ಪಾಂಡುರಂಗ ಭಜನಾ ಮಂಡಳ, ಹೈದರಾಬಾದನ ಮಹೇಶ್ವರಿ ಮಹಿಳಾ ಮಂಡಳ, ಸೋಲಾಪುರ ಕಲಾ ತಂಡ ಸೇರಿ ವಿವಿಧ ತಂಡಗಳಿಂದ ಮೆರವಣಿಗೆಯಲ್ಲಿ ಭಜನೆ, ಲೇಜಿಮ್, ಕೋಲಾಟ, ನೃತ್ಯ ಪ್ರದರ್ಶನ ನಡೆಯಿತು.
ಸಂಸ್ಥಾನದ ಶ್ರೀ ಅನಂತ ಬುವಾ ಕಾಟೇಕರ್ ಮಹಾರಾಜ, ಸೇವಾಧಿಕಾರಿಗಳಾದ ಶ್ರೀ ಮುರುಳೀಧರ ಕಾಟೇಕರ್
ಮಹಾರಾಜ, ಶ್ರೀ ಪುರುಷೋತ್ತಮ ಕಾಟೇಕರ್ ಮಹಾರಾಜ ನೇತೃತ್ವದಲ್ಲಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ
ಮತ್ತು ಶೋಭಾ ಯಾತ್ರೆ ಜರುಗಿತು.
ಬ್ರಾಹ್ಮಣ ಸಮಾಜದ ಅಧ್ಯಕ್ಷ ಕಮಲಾಕರ್ ದೀಕ್ಷಿತ, ಬಿಕೆಡಿಬಿ ಸದಸ್ಯ ಶಿವರಾಜ ನರಶೆಟ್ಟಿ, ಪ್ರಮುಖರಾದ ಎ.ಎನ್
.ದೇಶಪಾಂಡೆ, ರಾಜಶೇಖರ ಪಾಟೀಲ್ ಸಸ್ತಾಪುರ, ಬಂಡು ಕರಾಡೆ, ರಾಜು ಕುಲ್ಕರ್ಣಿ, ಪೃಥ್ವಿಗೀರ ಗೋಸ್ವಾಮಿ, ರಾಜು ಪಾಟೀಲ ಹಳ್ಳಿ, ನಾಗಭೂಷಣ ಗರ್ಜೆ, ಕೃಷ್ಣಾ ಕುಲ್ಕರ್ಣಿ, ವಿಜಯಕುಮಾರ ದೇಶಪಾಂಡೆ ಹಾಗೂ ಇನ್ನಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ
Bidar: 9 ಲಕ್ಷ ರೂ. ಮೌಲ್ಯದ ಕಚ್ಚಾ ಪಾನ್ ಮಸಾಲಾ, 3 ಲಕ್ಷ ರೂ. ಮೌಲ್ಯ ಸೀರೆ ಜಪ್ತಿ
ಹಾಲ್ ಟಿಕೆಟನ್ನೇ ತಿಂದು ಹಾಕಿದ ಕುರಿ… ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
Bidar; ಖೂಬಾ ಪರ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ
Loksabha: ಬೀದರ್ ಕ್ಷೇತ್ರಕ್ಕೆ ಸಾಗರ ಖಂಡ್ರೆ ಹೆಸರು ಅಂತಿಮ; ಸಿಎಂ ಭೇಟಿಯಾದ ಈಶ್ವರ್
MUST WATCH
ಹೊಸ ಸೇರ್ಪಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ