ಗೋ ಸಾಕಣೆಗೆ ಯುವಕರು ಮುಂದೆ ಬರಲಿ; ಸ್ವಾಮಿ ಜ್ಯೋತಿರ್ಮಯಾನಂದ

ವ್ಯವಹಾರದ ದೃಷ್ಟಿಯಿಂದ ಗೋ ಶಾಲೆ ಆರಂಭಿಸಿಲ್ಲ. ದೇಶಿ ತಳಿಗಳ ಸಂರಕ್ಷಣೆಗಾಗಿ ಮಾಡಲಾಗಿದೆ.

Team Udayavani, Jan 25, 2021, 4:09 PM IST

ಗೋ ಸಾಕಣೆಗೆ ಯುವಕರು ಮುಂದೆ ಬರಲಿ; ಸ್ವಾಮಿ ಜ್ಯೋತಿರ್ಮಯಾನಂದ

ಬೀದರ: ವಿವೇಕಾನಂದರ ಆಶಯದಂತೆ ಕಳೆದೊಂದು ವರ್ಷದಿಂದ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಗೋ ಸೇವೆ ಆರಂಭಿಸಲಾಗಿದೆ. 2 ಹಸುಗಳಿಂದ ಆರಂಭವಾದ ಗೋ ಶಾಲೆಯಲ್ಲಿ ಇದೀಗ 100 ಹಸುಗಳಿವೆ. ಗೋ ಸಾಕಣೆ ವಿಷಯದಲ್ಲಿ ಆಶ್ರಮ ಮಾದರಿಯಾಗಿ, ಸ್ಥಳೀಯ ನೂರಾರು ಯುವಕರನ್ನೂ ಈ ಕಾರ್ಯದಲ್ಲಿ ಜೋಡಿಸಿಕೊಳ್ಳಬೇಕು ಎನ್ನುವುದೇ ನಮ್ಮ ಸದುದ್ದೇಶ ಎಂದು ಆಶ್ರಮದ ಸ್ವಾಮಿ ಜ್ಯೋತಿರ್ಮಯಾನಂದ ಹೇಳಿದರು.

ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಗೋ ತಳಿ ಸಂತತಿ ಕುಸಿಯುತ್ತಿವೆ. ಈ ಹಿಂದೆ 108 ತಳಿಗಳು ಇದ್ದವು. ಆದರೆ, ಇಂದು 15 ರಿಂದ 20 ತಳಿಗಳು ಮಾತ್ರ ಉಳಿದಿರುವುದು ಬೇಸರದ ಸಂಗತಿ. ಆಶ್ರಮದಲ್ಲಿ ದೇಶೀಯ, ಭಾರತೀಯ ತಳಿಗಳ ಹಸು ಸಾಕಲಾಗುತ್ತಿದೆ.

ಗುಜರಾತ್‌ನ ಗೀರ್‌, ಕಾಂಕ್ರಿಜ್‌, ದೇವಣಿ ತಳಿ ಹಸು ಸಾಕಲಾಗಿದೆ. 100 ಶಾಲೆ, ಆಸ್ಪತ್ರೆ ನಡೆಸಬಹುದು. ಆದರೆ, ಗೋ ಶಾಲೆ ನಡೆಸುವುದು ಕಷ್ಟಕರ. ಹಸುಗಳನ್ನು ನಾವು ನೋಡಿಕೊಳ್ಳಬೇಕಿಲ್ಲ. ಎಲ್ಲವೂ ಚೆನ್ನಾಗಿದ್ದರೆ, ಹಸುಗಳೇ ನಮ್ಮನ್ನು ನೋಡಿಕೊಳ್ಳುತ್ತವೆ ಎಂದರು.

ಗೋ ಸೇವೆಯಿಂದ ಥೈರಾಯಿಡ್‌, ಬಿಪಿ ಕಾಯಿಲೆಗಳು ಗುಣಮುಖವಾದ ಉದಾಹರಣೆಗಳು ನಮ್ಮಲ್ಲಿವೆ. ಗೋ ಸಾಕಣೆ ಮಹತ್ವ ಅರಿಯಲಾದರೂ ಯುವಕರು ಗೋ ಸಾಕಣೆಗೆ ಮುಂದೆ ಬರಬೇಕು.

ಮುಂದಿನ ದಿನಗಳಲ್ಲಿ ಆಶ್ರಮದಲ್ಲೇ ಯುವಕರಿಗೆ ದೇಶೀಯ ಗೋ ಸಾಕಣೆ ಕುರಿತು ವಸತಿಯುತ ತರಬೇತಿ ನೀಡಲು ನಿರ್ಧರಿಸಲಾಗಿದೆ. ಜತೆಗೆ ಸರ್ಕಾರ 50 ಎಕರೆ ಜಾಗ ನೀಡಿದರೆ ಮಾದರಿ ಗೋ ಶಾಲೆ ನಿರ್ಮಿಸಲಾಗುವುದು. ಈ ಕುರಿತು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

26ಕ್ಕೆ ಗೋ ಶಾಲೆ ವಾರ್ಷಿಕೋತ್ಸವ:
ವ್ಯವಹಾರದ ದೃಷ್ಟಿಯಿಂದ ಗೋ ಶಾಲೆ ಆರಂಭಿಸಿಲ್ಲ. ದೇಶಿ ತಳಿಗಳ ಸಂರಕ್ಷಣೆಗಾಗಿ ಮಾಡಲಾಗಿದೆ. ಲಕ್ಷಾಂತರ ರೂ. ಬ್ಯಾಂಕ್‌ ನಿಂದ ಸಾಲ ಪಡೆದು, ದಾನಿಗಳಿಂದ ಗೋ ಸಾಕಣೆ ಮಾಡಲಾಗುತ್ತಿದೆ. ಜ.26ರಂದು ಬೆಳಗ್ಗ 11ಕ್ಕೆ ಗೋ ಶಾಲೆ ವಾರ್ಷಿಕೋತ್ಸವ ಆಚರಣೆ ಮತ್ತು ಗೋವುಗಳಿಗೆ ಮೇವು ಸಾಗಣೆ ಇತರ ಕಾರ್ಯಗಳಿಗಾಗಿ ಗೋ ರಥವನ್ನು ಸಮರ್ಪಣೆ ಮಾಡಲಾಗುತ್ತಿದೆ.

ನೂತನ ಶೆಡ್‌ನ‌ ಉದ್ಘಾಟನೆಯೂ ಜರುಗಲಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳಲಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು
ಎಂದು ಮನವಿ ಮಾಡಿದರು.

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ರಮೇಶ ಕುಮಾರ್ ಪಾಂಡೆ ನಿಧನ

Bidar ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ರಮೇಶ ಕುಮಾರ್ ಪಾಂಡೆ ನಿಧನ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

1-eqwewqeqwe

Bidar; ಬಿಜೆಪಿಗೆ ನಾಗಮಾರಪಳ್ಳಿ ಕುಟುಂಬದ ಬೆಂಬಲ

Bidar; ಬಿರುಗಾಳಿ ಸಹಿತ ಭಾರಿ ಮಳೆಗೆ ಅಪಾರ ಹಾನಿ; ಮಾವು ಬೆಳೆಗಾರರಿಗೆ ನಷ್ಟ

Bidar; ಬಿರುಗಾಳಿ ಸಹಿತ ಭಾರಿ ಮಳೆಗೆ ಅಪಾರ ಹಾನಿ; ಮಾವು ಬೆಳೆಗಾರರಿಗೆ ನಷ್ಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.