ಶರಣ ಪರಂಪರೆ ಮುಂದುವರಿಯಲಿ
Team Udayavani, Jan 29, 2018, 1:30 PM IST
ಬಸವಕಲ್ಯಾಣ: 12ನೇ ಶತಮಾನದಲ್ಲಿ ಗುರು ಬಸವಣ್ಣನವರು ಜಾತಿ, ವರ್ಣ, ವರ್ಗ ಮತ್ತು ಲಿಂಗ ಭೇದವನ್ನು ಅಳಿಸಿ, ಸರ್ವ ಸಮಾನತೆ ಧರ್ಮ ಸ್ಥಾಪಿಸಿದ್ದಾರೆ. ಶರಣರ ಆದರ್ಶ ಪರಂಪರೆ ಮುಂದುವರಿಸಿಕೊಂಡು ಹೋಗುವುದು ಇಂದಿನ ಅಗತ್ಯವಾಗಿದೆ ಎಂದು ಬಸವ ಮಹಾಮನೆಯ ಶ್ರೀ ಬಸವಪ್ರಭು ಸ್ವಾಮಿ ಹೇಳಿದರು.
ತ್ರಿಪುರಾಂತದ ಶರಣ ಮಾದಾರ ಚನ್ನಯ್ಯ ಅರಿವು ಪೀಠದಿಂದ ಆಯೋಜಿಸಲಾಗಿದ್ದ ಮಾದರ ಚನ್ನಯ್ಯ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು, ಶೈವ ಪರಂಪರೆ ಪುರಾತನವಾದ್ದು. ಈ ಪರಂಪರೆಯಲ್ಲಿ ಸಮಾನತೆಯಿತ್ತು. ಆದರೆ ಮುಂದೆ ವೈದಿಕರ ಶ್ರೇಣಿಕೃತ ಸಮಾಜ ವರ್ಗೀಕರಣದಿಂದ ಅಸಮಾನತೆ ಹುಟ್ಟಿಕೊಂಡಿದೆ ಎಂದರು. ಶರಣ ಮಾದಾರ ಚನ್ನಯ್ಯನವರು ಭಕ್ತಿಯ ಸಾಕಾರ ಮೂರ್ತಿಯಾಗಿದ್ದರು. ಅವರ ಭಕ್ತಿಗೆ ಶಿವನೂ ತಲೆ ಬಾಗಿಸಿದ್ದಾನೆ.
ಅವರ ವಚನಗಳು ಸಮಾಜಕ್ಕೆ ಮಾರ್ಗದರ್ಶಿಯಾಗಿದ್ದು, ಇವುಗಳ ಬಗ್ಗೆ ಅಧ್ಯಯನ ನಡೆಸುವುದು ಅವಶ್ಯಕವಾಗಿದೆ.
ಮಕ್ಕಳಿಗೂ ತಿಳಿಸಿಕೊಡುವ ಅಗತ್ಯವಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ಶರಣೆ ಚಿತ್ರಮ್ಮ ತಾಯಿ ಮಾತನಾಡಿ, ಶರಣ ಚನ್ನಯ್ಯನವರ ಭಕ್ತಿಯನ್ನು ಅಖಂಡವಾಗಿ ಗುರುತಿಸಿದವರು ಗುರು ಬಸವಣ್ಣವರು. ಶರಣ ಮಾದಾರ ಚನ್ನಯ್ಯನವರ ವಚನಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸಬೇಕಿದೆ ಎಂದರು.
ಜೆಡಿಎಸ್ ಮುಖಂಡ ಸಂಜು ಗಾಯಕವಾಡ ಮಾತನಾಡಿ, ಶರಣ ನೂಲಿಯ ಚಂದಯ್ಯ, ಶರಣ ಮಾದಾರ
ಚನ್ನಯ್ಯನವರ ವಚನಗಳ ಪ್ರಚಾರ, ಪ್ರಸಾರ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯಬೇಕು. ಶರಣರಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಅಗತ್ಯವಿರುವ ಸಹಾಯ, ಸಹಕಾರ ನೀಡುವುದಾಗಿ ಭರವಸೆ ನೀಡಿದರು. ನೂಲಿಯ ಚಂದಯ್ಯ ಪಂಚಕಮಿಟಿ ಅಧ್ಯಕ್ಷ ಘಾಳೆಪ್ಪ ಮುಜನಾಯಕ, ಗಿರಿಜಾ ಸಿದ್ದಣ್ಣ, ಸರಸ್ವತಿ ಹೊದಲೂರೆ, ಹರಿಹರ ಗೋಖಲೆ, ದತ್ತು ಡಾಂಗೆ, ಸಿದ್ರಾಮಪ್ಪ ಹಂಗ್ರಿಕರ್, ಶಂಕರ ಐನಾಪೂರ ಇದ್ದರು. ಪೂಜಾ ಸ್ವಾಗತಿಸಿದರು. ಚೇತನಾ ನಿರೂಪಿಸಿದರು. ಶೃತಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Bidar; ಪ್ರೇಯಸಿ ಮದುವೆ ದಿನವೇ ಪ್ರಿಯಕರನ ಶವ ಪತ್ತೆ
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ