ವಿಶ್ವಕ್ಕೆ ಸತ್ವಯುತವಾದ ಸಾಹಿತ್ಯ ಕೊಡುಗೆ


Team Udayavani, Sep 11, 2017, 11:50 AM IST

bid-3.jpg

ಬೀದರ: ಜಿಲ್ಲೆಯ ಹತ್ತಾರು ಕವಿಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದ್ದು, ವಿಶ್ವಕ್ಕೆ ಸತ್ವಯುತವಾದ ಸಾಹಿತ್ಯ ಕೊಡುಗೆಯಾಗಿ ನೀಡಿದ್ದಾರೆ ಎಂದು ಜಿಪಂ ಸದಸ್ಯ ಅನೀಲ ಬಿರಾದಾರ ಹೇಳಿದರು.

ನಗರದ ಲಕ್ಷ್ಮೀಬಾಯಿ ಕಮಠಾಣೆ ಶಾಲೆ ಸಭಾಂಗಣದಲ್ಲಿ ಧರಿನಾಡು ಕನ್ನಡ ಸಂಘ ಕೇಂದ್ರ ಸಮಿತಿ ಹಮ್ಮಿಕೊಂಡಿದ್ದ
ಪಾಂಡುರಂಗ ಕೋರೆ ವಿರಚಿತ ಶ್ರೀ ಮೈಲಾರ ಮಲ್ಲಣ್ಣ- ಶಿವ ಮಲ್ಹಾರ ಹಾಗೂ ಹನ್ನೆರಡು ಜ್ಯೋತಿರ್ಲಿಂಗಗಳ ಚರಿತ್ರೆ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಬೀದರ ಹಿಂದುಳಿದ ಜಿಲ್ಲೆಯಲ್ಲ. ಅನೇಕ ಪ್ರತಿಭೆ ನೀಡಿದೆ ಎಂದು ಹೇಳಿದರು. ಕೃತಿ ಪರಿಚಯ ಮಾಡಿ ಮಾತನಾಡಿದ ಸಾಹಿತಿ ಶಿವಕುಮಾರ ಕಟ್ಟೆ, ಭಾರತ ಸಂಸ್ಕೃತಿಗೆ ಜಗತ್ತಿನಲ್ಲಿ ವಿಶೇಷ ಮನ್ನಣೆ ಇದೆ. ಮೈಲಾರ ಮಲ್ಲಣ್ಣ ಅವರ ಕುರಿತು ರಚಿಸಿದ ಈ ಕೃತಿ ಅಧ್ಯಾತ್ಮದ ಮೇಲೆ ಬೆಳಕು ಚೆಲ್ಲುತ್ತದೆ. ಮಣಿಚೂಲ ಪ್ರದೇಶದಲ್ಲಿ ಇರುವ ಮೈಲಾರ ಭಕ್ತಿಯ ಬೀಡಾಗಿದೆ. ರಾಕ್ಷಸರನ್ನು ವಧೆ ಮಾಡಿ ಸತ್ಯ ಎತ್ತಿ ಹಿಡಿದ ಕೀರ್ತಿ ಮೈಲಾರ ಮಲ್ಲಣ್ಣ ಅವರಿಗೆ ಸಲ್ಲುತ್ತದೆ. ಪೌರಾಣಿಕತೆ ಹಿನ್ನೆಲೆಯಲ್ಲಿ ರಚನೆಯಾದ ಈ ಕೃತಿ ಕಣ್ಣಿಗೆ ಕಟ್ಟುವಂತಿದೆ. 12 ಜ್ಯೋತಿರ್ಲಿಂಗಗಳ ಕುರಿತು ಮಾರ್ಮಿಕವಾಗಿ ವಿವರಣೆ ನೀಡುತ್ತಾರೆ. ಓದುತ್ತ ಹೋದಾಗ ದರ್ಶನ ಮಾಡಿಕೊಂಡು ಬಂದಷ್ಟೇ ಅನುಭವ ಆಗುತ್ತದೆ ಎಂದು ಹೇಳಿದರು.

ಹಿರಿಯ ಸಾಹಿತಿ ದೇಶಾಂಶ ಹುಡಗಿ ಮಾತನಾಡಿ, ಮೈಲಾರ ಮಲ್ಲಣ್ಣ ಅವರ ಇನ್ನೂ ಅನೇಕ ಹಾಡುಗಳು, ಕೃತಿಗಳು,
ನುಡಿಗಳು ಲಭ್ಯ ಇವೆ. ಅವುಗಳನ್ನು ಸರಿಯಾಗಿ ಸಂಪಾದನೆ ಮಾಡಿ ಬೆಳಕಿಗೆ ತರಬೇಕಾಗಿದೆ. ಈ ನಿಟ್ಟಿನಲ್ಲಿ ಕೋರೆ ಅವರು ಇನ್ನೂ ಹೆಚ್ಚಿನ ಪರಿಶ್ರಮಪಡಬೇಕು. ನಾವು ಸ್ವಾರ್ಥದ ಬೆನ್ನು ಹತ್ತಿ ಸಾಹಿತ್ಯ ರಚನೆ ಮಾಡಬಾರದು. ಬದಲಾಗಿ ನೀತಿಗೆ ಬೆನ್ನು ಹತ್ತಿ ಸಾಹಿತ್ಯ ರಚಿಸಬೇಕು. ಅಂದಾಗ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದು ಹೇಳಿದರು. ಜಾನಪದ ಸಾಹಿತಿ ಚಂದ್ರಪ್ಪ ಹೆಬ್ಟಾಳಕರ್‌ ಅಧ್ಯಕ್ಷತೆ ವಹಿಸಿದ್ದರು.

ನರಸಪ್ಪ ಕವಿ, ಉದಯ ಕಮಠಾಣೆ, ಸಂಗೀತಾ ಚಿಮಕೋಡೆ, ದೇವೇಂದ್ರ ವಲ್ಲೇಪುರೆ, ನಾಗಶೆಟ್ಟಿ ಧರಂಪುರ, ರಮೇಶ ಬಿರಾದಾರ, ಗುರುಸಿದ್ದಪ್ಪ ಬಿರಾದಾರ ಇದ್ದರು. 

ಟಾಪ್ ನ್ಯೂಸ್

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

Bidar; ಪ್ರೇಯಸಿ ಮದುವೆ ದಿನವೇ ಪ್ರಿಯಕರನ ಶವ ಪತ್ತೆ

Bidar; ಪ್ರೇಯಸಿ ಮದುವೆ ದಿನವೇ ಪ್ರಿಯಕರನ ಶವ ಪತ್ತೆ

rape

Bidar; ಯುವಕನಿಂದ ಅಪ್ರಾಪ್ತ ವಯಸ್ಕಳ ರೇಪ್

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.