ಮಾಂಜ್ರಾಕ್ಕೆ ನೀರು ಹರಿಸಲು ಆಗ್ರಹ
Team Udayavani, Mar 19, 2019, 11:20 AM IST
ಬೀದರ: ಕಾರಂಜಾ ಜಲಾಶಯದ ನೀರು ಮಾಂಜ್ರಾ ನದಿಗೆ ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ
ಘಟಕದಿಂದ ಜನವಾಡ ಗ್ರಾಮದಿಂದ ಬೀದರ್ ನಗರದ ವರೆಗೆ ಪಾದಯಾತ್ರೆ ನಡೆಸಲಾಯಿತು.
ಬೇಸಿಗೆ ಕಾವು ಹೆಚ್ಚಾಗಿದ್ದು, ಔರಾದ ಮತ್ತು ಬೀದರ್ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಪ್ರಾಣಿ ಪಕ್ಷಿಗಳು ನೀರಿಗಾಗಿ ಹೈರಾಣ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಮಾಂಜ್ರಾ ನದಿಗೆ ಕಾರಂಜಾ ಜಲಾಶಯದ ನೀರು ಹರಿಸಿದರೆ ಎರಡೂ ತಾಲೂಕಿನ ಜನರ ನೀರಿನ ಸಮಸ್ಯೆಗೆ ಪರಿಹಾರ ನೀಡಿದಂತಾಗುತ್ತದೆ. ಸರ್ಕಾರ ಕೂಡಲೆ ಜಲಾಶಯದ ನೀರು ಹರಿಸಲು ಮುಂದಾಗಬೇಕು.
ಇಲ್ಲವಾದರೆ ಮುಂದಿನ ದಿನಗಳಲ್ಲಿ ಧರಣಿ, ಸತ್ಯಾಗ್ರಹ ನಡೆಸುವುದಾಗಿ ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ. ಸೋಮನಾಥ ಮುಧೋಳ, ಸುಭಾಷ ಕೆನಡೆ, ನಾಗಪ್ಪ ಜಾನಕನೂರ್, ಗೋಪಾಲ್ ಕುಲಕರ್ಣಿ, ಲೋಕೇಶ ಬಿರಾದಾರ, ದತ್ತು ಅಲ್ಲಮಕೇರೆ, ಖಂಡಪ್ಪಾ ಪಾತರಪಳ್ಳಿ, ಮಲ್ಲಿಕಾರ್ಜುನ ಸಿಕೇನಪುರೆ, ಮಳಸಾಕಾಂತ ವಾಘೆ, ಶಿವರುದ್ರ ತೀರ್ಥ, ಸಂಗಮೇಶ ಗುಮ್ಮೆ, ರಮೇಶ ಬಿರಾದರ, ಸಂತೋಷ ಚೆಟ್ಟಿ, ಉದಯಕುಮಾರ ಅಷ್ಟೂರೆ, ಸಿದ್ದು ಜಮಾದಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ