ಮುಖ್ಯಾಧಿಕಾರಿ ನಡೆಗೆ ಪುರಸಭೆ “ಆಡಳಿತ’ ಆಕ್ರೋಶ”

ಮುಖ್ಯಾಧಿಕಾರಿಗಳು ತುರ್ತು ಸಭೆ ಕರೆದು ಚರ್ಚಿಸಬೇಕಿತ್ತು.

Team Udayavani, Sep 24, 2021, 6:29 PM IST

ಮುಖ್ಯಾಧಿಕಾರಿ ನಡೆಗೆ ಪುರಸಭೆ “ಆಡಳಿತ’ ಆಕ್ರೋಶ”

ಹುಮನಾಬಾದ: ನಿವಾಸಿಗಳು ನಳಗಳಿಗೆ ಮೋಟಾರ್‌ ಬಳಸದೆ ನೀರು ತುಂಬಿಕೊಳ್ಳಬೇಕು. ಒಂದು ವೇಳೆ ಮೋಟಾರ್‌ ಬಳಸಿ ನೀರು ತುಂಬಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಮೋಟಾರ್‌ ಜಪ್ತಿ ಮಾಡುತ್ತೇವೆಂದು ಪುರಸಭೆ ವತಿಯಿಂದ ಡಂಗುರ ಸಾರಿರುವುದು “ಪುರಸಭೆ ಆಡಳಿತ’ದ ಆಕ್ರೋಶಕ್ಕೆ ಕಾರಣವಾಗಿದೆ.

ಪುರಸಭೆ ಸದಸ್ಯರಾದ ಅಪ್ಸರ್‌ ಮಿಯ್ನಾ, ರಮೇಶ ಕಲ್ಲೂರ್‌, ವೀರೇಶ ಸೀಗಿ, ಎಸ್‌.ಎ ಬಾಸಿದ್‌ ಸೇರಿದಂತೆ ಇತರೆ ಸದಸ್ಯರು ಮುಖ್ಯಾಧಿಕಾರಿ ನಡೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರಿಂದ ಆಯ್ಕೆಗೊಂಡ ಸದಸ್ಯರ ಗಮನಕ್ಕೆ ತರದೆ ಇಂತಹ ಆದೇಶ ಹೊರಡಿಸಿರುವುದು ಸರಿ ಅಲ್ಲ.

ಮುಖ್ಯಾಧಿಕಾರಿಗಳು ತುರ್ತು ಸಭೆ ಕರೆದು ಚರ್ಚಿಸಬೇಕಿತ್ತು. ಬಡಾವಣೆಗಳ ಜನರು ಛೀಮಾರಿ ಹಾಕುತ್ತಿದ್ದು, ನಮ್ಮ ಹಕ್ಕಿಗೆ ಧಕ್ಕೆ ಬರುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ಭಾಗದಲ್ಲಿ ಮೋಟಾರ್‌ ಬಳಸದಿದ್ದರೆ ನೀರು ಪೂರೈಕೆ ಸರಿಯಾಗಿ ಆಗಲ್ಲ. ನೀರಿಗಾಗಿ ಗಂಟೆಗಳ ಕಾಲ ಜನರು ಹೈರಾಣವಾಗಬೇಕಾ? ಜನರು ಮೇಲ್ಮಹಡಿಗೆ ನೀರನ್ನು ಹೇಗೆ ತೆಗೆದುಕೊಂಡು ಹೋಗಬೇಕು. ಎರಡ್ಮೂರು ದಿನಕ್ಕೆ ಒಂದು ಬಾರಿ ನೀರು ಪೂರೈಸಲಾಗುತ್ತಿದ್ದು, ಎರಡು ದಿನಕ್ಕಾಗುವಷ್ಟು ನೀರನ್ನು ಕೊಡಗಳಿಂದ ತುಂಬಿಕೊಳ್ಳಲು ಸಾಧ್ಯವೇ? ಪಟ್ಟಣದ ಹಳೆ ಭಾಗದಲ್ಲಿ ಪುರಸಭೆ ನೀರಿನ ಮೂಲ ಬಿಟ್ಟರೆ ಬೇರೆಯಾವುದೇ ಮೂಲಗಳಿಲ್ಲ. ಇಂತಹ ಸಂದರ್ಭದಲ್ಲಿ ಪುರಸಭೆ ಜನರ ಸಂಕಷ್ಟ ಅರಿತು ಆದೇಶ ಹೊರಡಿಸಬೇಕು ಬಡಾವಣೆಗಳ ಜನರು ಹೇಳುತ್ತಿದ್ದಾರೆ.

ಪಟ್ಟಣದ ಕೆಲವು ಭಾಗದಲ್ಲಿ ನೀರು ಪೂರೈಸುವ ಕುರಿತು ದೂರು ಬಂದಿದ್ದು, ನಳಗಳಿಗೆ ಸಾರ್ವಜನಿಕರು ಮೋಟಾರ್‌ ಅಳವಡಿಸುವುದು ನಿಷೇಧಿಸಿ ಆದೇಶ ಮಾಡಲಾಗಿದೆ. ನಳದ ನೀರು ಸಂಪಿಗೆ ಬಿಟ್ಟುಕೊಂಡು ಬೇಕಾದರೆ ಮೋಟಾರ್‌ ಬಳಸಿಕೊಳ್ಳಲಿ. ಆದರೆ ನೇರವಾಗಿ ನಳಗಳಿಗೆ ಮೋಟಾರ್‌ ಬಳಸುವಂತಿಲ್ಲ. ಬೇಕಾದರೆ ಪರವಾನಗಿ ಪಡೆದು ಬಳಕೆಗೆ ಅವಕಾಶ ಕಲ್ಪಿಸಬಹುದಾಗಿದೆ. ನಾಗಯ್ನಾ ಹಿರೇಮಠ, ತಹಶೀಲ್ದಾರ್‌, ಪ್ರಭಾರಿ ಮುಖ್ಯಾಧಿಕಾರಿ

ಕಳೆದ ಎರಡು ದಿನಗಳಿಂದ ಪಟ್ಟಣದ ವಿವಿಧೆಡೆಯಿಂದ ಕರೆಗಳು ಬರುತ್ತಿವೆ. ಪಟ್ಟಣದಲ್ಲಿ ಪುರಸಭೆಯಿಂದ ಡಂಗುರ ಸಾರುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ಈ ಕುರಿತು ಪುರಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಮುಖ್ಯಾ ಧಿಕಾರಿಗಳು ಅಧ್ಯಕ್ಷರ ಹಾಗೂ ಸದಸ್ಯರ ಗಮನಕ್ಕೆ ತರದೆ ಆದೇಶ ಹೊರಡಿಸಿರುವುದು ಸರಿ ಅಲ್ಲ. ಈ ಕುರಿತು ಎಲ್ಲರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
ಕಸ್ತೂರಬಾಯಿ ಪಸನೂರ್‌, ಪುರಸಭೆ ಅಧ್ಯಕ್ಷ

*ದುರ್ಯೋಧನ ಹೂಗಾರ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.