ತ್ರಿವಳಿ ತಲಾಖ್‌ ಕಾನೂನು ಜಾರಿ ಬೇಡ


Team Udayavani, Feb 25, 2018, 2:39 PM IST

bid-3.jpg

ಬೀದರ: ದೇಶದಲ್ಲಿರುವ ಜ್ವಲಂತ ಸಮಸ್ಯೆಗಳತ್ತ ಇರುವ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಮುಸ್ಲಿಂ ಸಮಾಜದಲ್ಲಿರುವ ತ್ರಿವಳಿ ತಲಾಖ್‌ ಬಿಲ್‌ ಮಂಡನೆಗೆ ಸರ್ಕಾರ ಮುಂದಾಗಿದೆ ಎಂದು ಆಲ್‌ ಇಂಡಿಯಾ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಮೌಲಾನಾ ಅಬು ತಾಲೀಬ್‌ ರಹಮಾನಿ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತ್ರಿವಳಿ ತಲಾಖ್‌ ಜಾರಿಗೆ ತರುವ ಮೂಲಕ ಹಿಟ್ಲರಿಜ್‌ಂ ಪಾಲಿಸಿ ತರುವ ಪ್ರಯತ್ನ ನಡೆಯುತ್ತಿದೆ. ಇದರಿಂದ ನೂರಾರು ವರ್ಷಗಳಿಂದ ಭಾತೃತ್ವದಿಂದ ಜೀವಿಸುತ್ತಿರುವ ಹಿಂದು ಮುಸ್ಲಿಂರ ಮಧ್ಯೆ ವೈರತ್ವ ತರುವ ಷಡ್ಯಯಂತ್ರ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸ್ವತಂತ್ರ ಭಾರತದಲ್ಲಿ ವಿವಿಧ ಸಮಾಜದ ಸುಮಾರು 200 ವೈಯಕ್ತಿಕ ಕಾನೂನುಗಳಿವೆ. ಇದರಲ್ಲಿ ಆದಿವಾಸಿ, ನಾಗಾಲ್ಯಾಂಡ್‌, ಪಾಂಡಿಚೇರಿ, ಗೋವಾ, ಉತ್ತರ ಭಾರತ ಹಾಗೂ ದಕ್ಷಿಣ ಭಾರತಕ್ಕೆ ಬೇರೆ ಬೇರೆ ವೈಯಕ್ತಿಕ ಕಾನೂನುಗಳಿವೆ. ಅದರಲ್ಲಿಯೇ ಮುಸ್ಲಿಂ ಪರ್ಸನಲ್‌ ಲಾ ಬೋರ್ಡ್‌ ಕೂಡ ಒಂದಾಗಿದೆ ಎಂದರು.

ದೇಶದಲ್ಲಿ ಎರಡು ಲಕ್ಷ ಮುಸ್ಲಿಂ ಮಹಿಳೆಯರ ತಲಾಖ್‌ ಪ್ರಕರಣಗಳಿವೆ. ಉಳಿದವರು ಯಾರೆ ಇರಲಿ ಇಲ್ಲಿ ಯಾವುದೇ ಭೇದ ಇಲ್ಲದೆ ಮಹಿಳೆಯರ ಮಾತು ಏಕೆ ಆಡುತ್ತಿಲ್ಲ. ಸಹೋದರತೆಯಿಂದ ಜೀವಿಸುತ್ತಿರುವವರ ಮಧ್ಯೆ ಜಾತಿವಾದಿ ವಾತಾವರಣ ನಿರ್ಮಿಸುತಿದ್ದಾರೆ. ದೇಶದಲ್ಲಿ ತ್ರಿವಳಿ ತಲಾಖ್‌ ಎಷ್ಟು ಎಂದು ಯಾರು ಹೇಳುತ್ತಿಲ್ಲ, ವಾಟ್ಸ್‌ ಆ್ಯಪ್‌, ಇ-ಮೇಲ್‌ ಮೂಲಕ ಎಷ್ಟು ಎಂಬುವುದನ್ನು ಯಾರು ಹೇಳಿತ್ತಿಲ್ಲ. ಆದರೆ 2017ರ ಒಂದು ಅಂಕಿ ಅಂಶಗಳ ಪ್ರಕಾರ ತ್ರಿವಳಿ ತಲಾಖ್‌ನ 2900 ಮಹಿಳೆಯರಿದ್ದಾರೆ. ಆದರೆ ಕೆಲ ಸುದ್ದಿವಾಹಿನಿಗಳು ನಮ್ಮ ಸಮಾಜಕ್ಕೆ ಕಳಂಕ ತರುವ ಕೆಲಸ ಮಾಡುತಿದ್ದಾರೆ. ಇದರಿಂದ ದೇಶದ ಶಕ್ತಿ ಕುಂದುತ್ತಿದೆ ಎಂದರು.

ತ್ರಿವಳಿ ತಲಾಖ್‌ ಬಿಲ್‌ ಯಾವುದೇ ಕಾರಣಕ್ಕೂ ರಾಜ್ಯಸಭೆಯಲ್ಲಿ ಮಂಡನೆ ಮಾಡಬಾರದು. ಇದು ಕಾನೂನು ವಿರೋಧಿಯಾಗಿದೆ. ಈ ಕಾನೂನಿನಡಿ ಯಾರೇ ದೂರು ಸಲ್ಲಿಸಿದರು ಪತಿಗೆ ಮೂರು ವರ್ಷ ಜೈಲು ಹಾಗೂ ಅವಳ ಖರ್ಚು ನೀಡಬೇಕು. ಒಳ್ಳೆಯ ಬಿಲ್‌ ತಂದರೆ ಅದಕ್ಕೆ ನಾವು ಸ್ವಾಗತಿಸುತ್ತೇವೆ ಎಂದರು. 

ಪ್ರಧಾನಿ ಯಾವುದೇ ಪಕ್ಷದವರಾಗಿರಲಿ, ದೇಶದ ಚುನಾಯಿತ ಪ್ರಧಾನಿಗಳಾಗಿರುತ್ತಾರೆ. ಅವರು ದೇಶ ಅಭಿವೃದ್ಧಿಪಡಿಸಬೇಕು. ಯುವಕರಿಗೆ ಉದ್ಯೋಗ, ಜನರ ರಕ್ಷಣೆಯ ಕಡೆಗೆ ಗಮನ ಹರಿಸಬೇಕು. ಆದರೆ, ಯಾವುದೇ ಒಂದು ಧರ್ಮವನ್ನು ಹತೋಟಿಯಲ್ಲಿಡಲು ಮುಂದಾಗಿರುವುದು ಸಂವಿಧಾನದ ಪ್ರಕಾರ ಕಾನೂನು ಬಾಹೀರವಾಗಿದೆ ಎಂದು ಹೇಳಿದರು.

ಪ್ರಮುಖರಾದ ಮೌಲಾನಾ ಮುಫ್ತೀ ಗುಲಾಮ್‌ ಯಝದಾನಿ, ಸೈಯದ್‌ ಸುಜಾವೋದ್ದಿನ್‌, ಮಹ್ಮದ್‌ ಖಾಲೀದ್‌ ಇಕ್ಬಾಲ್‌, ಜಯವಂತ ಅಂಬಣ್ಣ, ವಿಕಾರೋದ್ದಿನ್‌ ಬಹಮನಿ, ಮೌಲಾನಾ ತಸದ್ದುಕ್‌ ಇದ್ದರು. 

ಅಯೋಧ್ಯೆ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ನಿರ್ಣಯಕ್ಕೆ ನಾವು ಬದ್ಧರಾಗಿದ್ದು, ನಿರ್ಣಯ ನಮ್ಮ ಪರವಾಗಿರಲಿ ಅಥವಾ ಬರದೆ ಇರಲಿ ಅದಕ್ಕೆ ಮಂಡಳಿ ಸ್ವಾಗತಿಸುತ್ತದೆ. ಇದನ್ನು ಮೂರನೇ ಅವರ ಮಧ್ಯಸ್ಥಿಕೆಯಿಂದ ಬಗೆಹರಿಯುವುದಿಲ್ಲ. ಹಿಂದು-ಮುಸ್ಲಿಂ ಜಾತಿಗಳ ಮಧ್ಯೆ ಒಡಕು ಹಾಕಿ ದೇಶದ ಸಂಪತ್ತು ನಾಶ ಮಾಡಲು ಬಿಡುವುದಿಲ್ಲ. ಶಾಂತಿ ಹಾಗೂ ಕಾನೂನು ಮೂಲಕ ಬಗೆಹರಿಸಬೇಕು. ಯಾವುದೇ ಕಾರಣಕ್ಕೂ ಅಶಾಂತಿಗೆ ಆಸ್ಪದ ನೀಡುವವರು ನಾವಲ್ಲ.
 ಮೌಲಾನಾ ಅಬು ತಾಲೀಬ್‌ ರಹಮಾನಿ

ಟಾಪ್ ನ್ಯೂಸ್

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

Bidar; ಪ್ರೇಯಸಿ ಮದುವೆ ದಿನವೇ ಪ್ರಿಯಕರನ ಶವ ಪತ್ತೆ

Bidar; ಪ್ರೇಯಸಿ ಮದುವೆ ದಿನವೇ ಪ್ರಿಯಕರನ ಶವ ಪತ್ತೆ

rape

Bidar; ಯುವಕನಿಂದ ಅಪ್ರಾಪ್ತ ವಯಸ್ಕಳ ರೇಪ್

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Jamyang Tsering Namgyal missed bjp ticket in ladakh

Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್‌ ಹಾಲಿ ಸಂಸದ ನಮ್‌ಗ್ಯಾಲ್‌ ಗೆ ಕೊಕ್‌

8-

Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.