ಅರ್ಹರಿಗೆ ಮಾಸಾಶನ ಮಂಜೂರಾತಿಗೆ ಸೂಚನೆ
Team Udayavani, Aug 11, 2022, 8:59 PM IST
ಭಾಲ್ಕಿ: ಎಂಟು ವರ್ಷಗಳಿಂದ ಮಾಸಾಶನ ಇಲ್ಲದೇ ಅಲೆದಾಡುತ್ತಿದ್ದ ವಿಕಲಚೇತನ ಯುವಕನೊಬ್ಬನಿಗೆ ಶಾಸಕ ಈಶ್ವರ ಖಂಡ್ರೆ ಮಾಸಾಶನ ಮಂಜೂರಾತಿ ಪತ್ರ ವಿತರಿಸಿದರು.
ಪಟ್ಟಣದಲ್ಲಿ ಈಚೆಗೆ ತಾಲೂಕಿನ ಮೋರಂಬಿ ಗ್ರಾಮದ ವಿಕಲಚೇತನ ಯುವಕ ಸಂತೋಷ ಗುರುನಾಥ ಕೊಟರಗೆ ಎಂಬುವರಿಗೆ ಮಾಸಾಶನ ಮಂಜೂರು ಪತ್ರ ನೀಡಿದ ಅವರು, ಪೂರ್ವ ನಿಯೋಜಿತ ಕಾರ್ಯಕ್ರಮ ಹಿನ್ನೆಲೆಯಲ್ಲಿ ಈ ಹಿಂದೆ ಮೋರಂಬಿ ಗ್ರಾಮಕ್ಕೆ ಭೇಟಿ ಕೊಟ್ಟಿದ್ದೆ. ಆ ಸಂದರ್ಭದಲ್ಲಿ ಯುವಕ ವಿಕಲಚೇತನ ಸಂತೋಷ ಅವರನ್ನು ಭೇಟಿಯಾಗಿ ಸರಕಾರದ ಸೌಲಭ್ಯಗಳ ಬಗ್ಗೆ ವಿಚಾರಿಸಿದೆ. ಸಂತೋಷ ಅವರದ್ದು ಬಡ ಕುಟುಂಬವಾಗಿದ್ದು, ಸುಮಾರು ವರ್ಷಗಳಿಂದ ಮಾಸಾಶನ ಮಂಜೂರು ಆಗಿಲ್ಲ ಎನ್ನುವ ವಿಷಯ ಗಮನಕ್ಕೆ ತಂದಿದ್ದರು. ತಕ್ಷಣಕ್ಕೆ ತಹಶೀಲ್ದಾರ್ ಅವರನ್ನು ಕರೆಮಾಡಿ ಎರಡ್ಮೂರು ದಿನಗಳಲ್ಲಿ ವಿಕಲಚೇತನ ಸಂತೋಷ ಅವರಿಗೆ ಮಾಸಾಶನ ಮಂಜೂರು ಮಾಡುವಂತೆ ಸೂಚನೆ ನೀಡಿದ್ದೇನೆ. ಅದರಂತೆ ಮಾಸಾಶನ ಮಂಜೂರು ಆಗಿದ್ದು, ಪತ್ರವನ್ನು ಸಂತೋಷಗೆ ನೀಡಿದ್ದೇನೆ. ತಾಲೂಕಿನಲ್ಲಿ ಇನ್ನು ಹಲವರು ಮಾಸಾಶನದಿಂದ ವಂಚಿತರಾಗಿದ್ದಾರೆ. ಅರ್ಹರನ್ನು ಗುರುತಿಸಿ ಮಾಸಾಶನ ಸೇರಿ ಸರಕಾರದ ವಿವಿಧ ಸೌಲಭ್ಯಗಳನ್ನು ದೊರಕಿಸಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ಮಾಸಾಶನ ಮಂಜೂರಾತಿ ಪತ್ರ ಸ್ವೀಕರಿಸಿದ ಸಂತೋಷ ಕೊಟರಗೆ ಪ್ರತಿಕ್ರಿಯಿಸಿ, ಸುಮಾರು ಎಂಟು ವರ್ಷಗಳಿಂಗೆ ಮಾಸಾಶನಕ್ಕಾಗಿ ಅಲೆದಾಟ ನಡೆಸಿದ್ದೆ. ಆದರೆ ಪ್ರಯೋಜನ ಆಗಿರಲಿಲ್ಲ. ನನ್ನನ್ನು ಗುರುತಿಸಿ ಮಾಸಾಶನ ಮಂಜೂರು ಮಾಡಿಸಿ ಮಂಜೂರಾತಿ ಪತ್ರ ನೀಡಿರುವ ಶಾಸಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಪ್ರಮುಖರಾದ ಶಶಿಧರ ಕೋಸಂಬೆ, ಸಂಗಮೇಶ ಹುಣಜೆ ಮದಕಟ್ಟಿ, ರವೀಂದ್ರ ಚಿಡಗುಪ್ಪೆ ಸೇರಿದಂತೆ ಹಲವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ