ಮುಖ್ಯ ಕಾಲುವೆ‌ಗೆ ಹಾಕಿದ್ದ ಪೈಪ್‌ ಕುಸಿತ


Team Udayavani, Oct 27, 2021, 11:42 AM IST

8pipe

ಸಿಂಧನೂರು: ತುಂಗಭದ್ರಾ ಎಡದಂಡೆ ಕಾಲುವೆಯ 36ನೇ ಕಾಲುವೆ ಜಿರೋ ಪಾಯಿಂಟ್‌ನಲ್ಲಿ ಗೇಟ್‌ ಬಳಿಯೇ ಪೈಪ್‌ ಕುಸಿದಿದ್ದು, ಕಾಲುವೆ ಕೊನೆ ಭಾಗದ ರೈತರನ್ನು ಚಿಂತೆಗೆ ದೂಡಿದೆ.

ಇಲ್ಲಿನ 36ನೇ ಉಪ ಕಾಲುವೆಗೆ ಪ್ರತಿ ನಿತ್ಯ ಹರಿಸಬೇಕಾದ 208 ಕ್ಯೂಸೆಕ್‌ ಬದಲು ಸದಸ್ಯ ಎರಡು ಗೇಟ್‌ ಮುಚ್ಚಿ ಕಡಿಮೆ ನೀರು ಪೂರೈಸಲಾಗುತ್ತಿದೆ. ರಾಯಚೂರು ಮಾರ್ಗದಲ್ಲಿ ಸಾಗುವ ಮುಖ್ಯ ಕಾಲುವೆಗೆ ಅಳವಡಿಸಿದ ಪೈಪ್‌ ಗಳೇ ಕುಸಿದಿದ್ದರಿಂದ ದುರಸ್ತಿ ಸವಾಲು ಎದುರಾಗಿದೆ. ಸದ್ಯ ಕಾಲುವೆಗೆ ನೀರು ಹರಿಯುತ್ತಿರುವುದರಿಂದ ಅದನ್ನು ಕೈಗೆತ್ತಿಕೊಳ್ಳಲು ಕಾಯಬೇಕಾದ ಅನಿವಾರ್ಯತೆ ತಲೆದೋರಿದೆ.

ಸ್ಥಿತಿಗತಿ ಏನು?

ತುಂಗಭದ್ರಾ ಎಡದಂಡೆ ಕಾಲುವೆ ಪೈಕಿ ಎರಡನೇ ಅತಿ ದೊಡ್ಡ ಉಪ ಕಾಲುವೆ ಇದು. 36ನೇ ಉಪ ಕಾಲುವೆ ವ್ಯಾಪ್ತಿಯಲ್ಲಿ 44,963 ಎಕರೆ ಜಮೀನು ನೀರಾವರಿ ಒಳಪಟ್ಟಿದೆ. ಈ ಕಾಲುವೆಗೆ 12 ಅಡಿಯಷ್ಟು ನೀರು ನಿತ್ಯ ಪೂರೈಸಬೇಕು. 208 ಕ್ಯೂಸೆಕ್‌ ಪೈಕಿ ಎರಡು ಪೈಪ್‌ ಮುಚ್ಚಿದ್ದರಿಂದ 150 ಕ್ಯೂಸೆಕ್‌ನಷ್ಟು ನೀರು ಬಿಡಲಾಗುತ್ತಿದೆ.

ತಾತ್ಕಾಲಿಕವಾಗಿ ಮುಖ್ಯ ಕಾಲುವೆಗೆ ನಾಲ್ಕು ಪೈಪ್‌ ಇಳಿಬಿಟ್ಟು ಒಡ್ಡು ದಾಟಿಸಿ ಕಾಲುವೆಗೆ ಬಿಡಲಾಗುತ್ತಿದೆ. ಪಂಪ್‌ಸೆಟ್‌ಗೆ ಅಳವಡಿಸಿದ ಪೈಪ್‌ ಮಾದರಿಯ ಈ ಸಾಹಸದಿಂದ ಹೆಚ್ಚಿನ ನೀರು ಕಾಲುವೆಗೆ ಬೀಳದಾಗಿದೆ. 36ನೇ ಕಾಲುವೆಗೆ 4 ಪೈಪ್‌ಗ್ಳಿದ್ದು, ನಾಲ್ಕು ಗೇಟ್‌ಗಳನ್ನು 3 ಅಡಿಯಷ್ಟು ಎತ್ತಿ ನೀರು ಬಿಡಲಾಗುತ್ತಿದೆ. ಎರಡು ಪೈಪ್‌ನ ಗೇಟ್‌ ಮುಕ್ಕಾಲು ಭಾಗ ಮುಚ್ಚಿರುವುದರಿಂದ ಕೊನೆ ಭಾಗಕ್ಕೆ ನೀರು ಕೊರತೆಯಾಗುತ್ತಿದೆ.

ರೈತರಲ್ಲಿ ಆತಂಕ

ನೀರಾವರಿ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ, ಸದ್ಯಕ್ಕೆ ಮುಖ್ಯ ಕಾಲುವೆಯ ಒಡ್ಡು ತೆಗೆದು ಪುನರ್‌ ದುರಸ್ತಿ ಕೈಗೊಳ್ಳುವುದು ಕಷ್ಟವೆಂದು ಹೇಳಲಾಗುತ್ತಿದೆ. ನವೆಂಬರ್‌ ಕೊನೆ ಹೊತ್ತಿಗೆ ಭತ್ತದ ಬೆಳೆ ಕೈಗೆ ಬರಬಹುದು. ಡಿಸೆಂಬರ್‌ನಲ್ಲಿ ಕ್ಲೋಸರ್‌ ಸಮಯ ಬಳಸಿಕೊಂಡು 2ನೇ ಬೆಳೆಗೆ ತೊಂದರೆಯಾಗದ ರೀತಿಯಲ್ಲಿ ಸಮಯ ಹೊಂದಾಣಿಕೆ ಮಾಡಿಕೊಂಡು ದುರಸ್ತಿ ಕೆಲಸ ಮುಗಿಸಬೇಕೆಂಬ ಸಲಹೆ ವ್ಯಕ್ತವಾಗಿವೆ. ಸೋಮಲಾಪುರ, ಸಾಲಗುಂದಾ ಸೇರಿದಂತೆ 15ಕ್ಕೂ ಹೆಚ್ಚು ಹಳ್ಳಿಯ ಕೊನೆ ಭಾಗದ ರೈತರು ಈಗಾಗಲೇ ನೀರಿನ ಕೊರತೆಯಾಗುವ ಆತಂಕಕ್ಕೆ ಸಿಲುಕಿದ್ದಾರೆ. ಪರಿಸ್ಥಿತಿ ಸರಿದೂಗಿಸಲು ತಜ್ಞರ ಸಲಹೆ ಹಾಗೂ ಪರಿಹಾರಾತ್ಮಕ ಕ್ರಮಗಳ ಅಗತ್ಯವಿದೆ. ನೀರಾವರಿ ಇಲಾಖೆ ಇಇ ಆಗಮಿಸಿದ ಬಳಿಕ ಕುಸಿದ ಪೈಪ್‌ ಬಳಿ ಬಂಡ್‌ ಹಾಕಿ, ಹೆಚ್ಚಿನ ಅನಾಹುತ ತಪ್ಪಿಸಲಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಹೇಗೆ? ಎಂಬ ರೈತರ ಪ್ರಶ್ನೆಗೆ ಅಧಿಕಾರಿಗಳೇ ಉತ್ತರ ಕಂಡುಕೊಳ್ಳಬೇಕಿದೆ.

ಇದನ್ನೂ ಓದಿ: ಸಲಗ, ಕೋಟಿಗೊಬ್ಬ-3 ಸಕ್ಸಸ್‌ ಸಂಭ್ರಮ

ಎಚ್ಚೆತ್ತುಕೊಳ್ಳದ್ದೇ ಮುಳುವಾಯಿತೇ?

ಎರಡು ವರ್ಷದ ಹಿಂದೆಯೇ ಮುಖ್ಯ ಕಾಲುವೆಗೆ ಅಳವಡಿಸಿದ ಪೈಪ್‌ ಕುಸಿತದ ಬಗ್ಗೆ ಗಮನ ಸೆಳೆದಿದ್ದರು ಎನ್ನಲಾಗಿದೆ. ಸಂಪೂರ್ಣ ಕುಸಿದು ಅಪಾಯ ಎದುರಾದ ಸನ್ನಿವೇಶದಲ್ಲಿ ಅಧಿಕಾರಿಗಳು ತಾತ್ಕಲಿಕವಾಗಿ ಕಪ್ಪು ಮಣ್ಣು ಹಾಕಿ, ಒಡ್ಡು ಗಟ್ಟಿಗೊಳಿಸಿದ್ದಾರೆ. ಎರಡು ವರ್ಷದ ಹಿಂದೆ ಗೊತ್ತಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮೊದಲೇ ಎಚ್ಚೆತ್ತುಕೊಳ್ಳದ್ದರಿಂದ ಇದೀಗ ಸಂಕಷ್ಟದ ಸಂದರ್ಭ ಎದುರಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

-ಯಮನಪ್ಪ ಪವಾರ

ಟಾಪ್ ನ್ಯೂಸ್

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.