ಪ್ರತ್ಯೇಕ ಧರ್ಮ: ಶೀಘ್ರ ತಜ್ಞರ ಸಮಿತಿ ರಚನೆ
Team Udayavani, Sep 18, 2017, 7:40 AM IST
ಬೀದರ: “ಲಿಂಗಾಯತ ಪ್ರತ್ಯೇಕ ಧರ್ಮ ಕುರಿತಂತೆ ಸಣ್ಣ ವಿವಾದ ಇದ್ದು, ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ, ಹಿರಿಯ ವಿದ್ವಾಂಸ ಗೋ.ರು.ಚನ್ನಬಸಪ್ಪ ಅವರನ್ನೊಳಗೊಂಡಂತೆ ಶೀಘ್ರದಲ್ಲೇ ತಜ್ಞರ ಸಮಿತಿ ರಚಿಸಿ ಸೂಕ್ತ ಪರಿಹಾರ ಕೈಗೊಳ್ಳಲಾಗುವುದು’ ಎಂದು ಅಖೀಲ ಭಾರತ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಲಿಂಗಾಯತ ಸ್ವತಂತ್ರ ಧರ್ಮ ಹೇಳಿಕೆಗೆ ಸಂಬಂ ಧಿಸಿದಂತೆ ಸಿದ್ಧಗಂಗಾ ಶ್ರೀಗಳು ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದ್ದಾರೆ. ಒಬ್ಬ ಶತಾಯುಷಿ ಸ್ವಾಮಿಗಳ ಪತ್ರವನ್ನು ಇನ್ನೊಬ್ಬರು ಬರೆಯಲು ಸಾಧ್ಯವಿಲ್ಲ. ಹಾಗಾಗಿ ಈ ವಿಷಯವನ್ನು ವಿವಾದಕ್ಕೆ ಎಳೆಯುವುದು ಬೇಡ’ ಎಂದರು. “ವೀರಶೈವ-ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಬೇಡಿಕೆ ಸಂಬಂಧ ಮಹಾಸಭಾದಿಂದ ಈ ಹಿಂದೆ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಧಿ ಕೃತವಾಗಿ ಪ್ರಸ್ತಾವನೆಯನ್ನು ತಿರಸ್ಕಾರ ಮಾಡಿಲ್ಲ. ಶಿಫಾರಸು ಪತ್ರಕ್ಕೆ ಸಚಿವ ಎಂ.ಬಿ.ಪಾಟೀಲ ಸೇರಿದಂತೆ 56 ಜನ ಶಾಸಕರು, ಸಂಸದರು ಅಂದು ಸಹಿ ಹಾಕಿದ್ದಾರೆ ‘ ಎಂದು ಸ್ಪಷ್ಟಪಡಿಸಿದರು.