ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯ: ವರ್ಮಾ
Team Udayavani, Apr 30, 2020, 5:32 PM IST
ಶಹಾಬಾದ: ಜಿಇ ಕಾಲೋನಿಯಲ್ಲಿ ಅಧಿಸೂಚಿತ ಕ್ಷೇತ್ರ ಸಮಿತಿ ಪೌರಕಾರ್ಮಿಕರಿಗೆ ತಹಶೀಲ್ದಾರ್ ಸುರೇಶ ವರ್ಮಾ ಆಹಾರದ ಕಿಟ್ ವಿತರಿಸಿದರು.
ಶಹಾಬಾದ: ನಗರ ಸ್ವಚ್ಛಗೊಳಿಸಿ ಉತ್ತಮ ಪರಿಸರ ನಿರ್ಮಿಸುವ ಮೂಲಕ ನಮ್ಮೆಲ್ಲರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಶ್ರಮ ಶ್ರೇಷ್ಠವಾದದ್ದು ಎಂದು ತಹಶೀಲ್ದಾರ್ ಸುರೇಶ ವರ್ಮಾ ಹೇಳಿದರು.
ನಗರದ ಜಿಇ ಕಾಲೋನಿಯಲ್ಲಿ ಅಧಿಸೂಚಿತ ಕ್ಷೇತ್ರ ಸಮಿತಿ ಪೌರಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಿ ಮಾತನಾಡಿದ ಅವರು, ಲಾಕ್ಡೌನ್ ಸಂದರ್ಭದಲ್ಲಿ ಬಹುತೇಕ ಜನರು ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಆದರೆ ಪೌರಕಾರ್ಮಿಕರು ಕಾಲೋನಿಯ ಕಸ ತೆಗೆದು ಸ್ವತ್ಛಗೊಳಿಸುವುದರ ಜತೆಗೆ ಅಂದವಾಗಿ ಕಾಣುವಂತೆ ಮಾಡುತ್ತಿದ್ದಾರೆ. ಅವರ ಶ್ರಮಕ್ಕೆ ಬೆಲೆ ಕಟ್ಟಲಾಗದು ಎಂದರು.
ಇಲ್ಲಿನ ಯುವಕರ ತಂಡ ಸ್ವಯಂಪ್ರೇರಿತರಾಗಿ ಕಡುಬಡವರಿಗೆ, ನಿರ್ಗತಿಕರಿಗೆ ಹಾಗೂ ಪೌರಕಾರ್ಮಿಕರನ್ನು ಗುರುತಿಸಿ ಆಹಾರ ಹಂಚುತ್ತಿದ್ದಾರೆ. ಈ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು. ಅಧಿ ಸೂಚಿತ ಕ್ಷೇತ್ರ ಸಮಿತಿ ಅಧಿ ಕಾರಿ ಪೀರಶೆಟ್ಟಿ 30 ಜನರಿಗೆ ಆಹಾರದ ಕಿಟ್ ವಿತರಿಸಿದರು.ನಗರಸಭೆ ಸದಸ್ಯ ರವಿ ರಾಠೊಡ, ಭಾಗಿರಥಿ ಗುನ್ನಾಪುರ, ಗಿರಿರಾಜ ಮೇಲಗಿರಿ, ದತ್ತಾ ಫಂಡ್, ಅರ್ಜುನ ತಳವಾರ, ಭೋಜುಕುಮಾರ ಜಾಪೂರ, ಜಿಇ ಕಾಲೋನಿ ಸೂಪರ್ವೈಸರ್ ಸೆಕ್ಯೂರಿಟಿ ಮೆಹಬೂಬ ಇದ್ದರು.