ಕಾಂಗ್ರೆಸ್ನಿಂದ ಮೌನ ಪ್ರತಿಭಟನೆ
Team Udayavani, Jul 28, 2022, 2:48 PM IST
ಬೀದರ: ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕೇಂದ್ರದ ಬಿಜೆಪಿ ಸರ್ಕಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಿರುಕುಳ ಕೊಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಬುಧವಾರ ಮೌನ ಪ್ರತಿಭಟನೆ ನಡೆಸಿದರು.
ವಿಚಾರಣೆ ನೆಪದಲ್ಲಿ ಜಾರಿ ನಿರ್ದೇಶನಾಲಯದಿಂದ ಸೋನಿಯಾ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿರುವುದನ್ನು ನಿಲ್ಲಿಸಬೇಕು ಎಂಬ ಬೇಡಿಕೆಯೊಂದಿಗೆ ಡಾ| ಅಂಬೇಡ್ಕರ್ ವೃತ್ತದ ಬಳಿ ಶಾಮಿಯಾನ ಹಾಕಿ ಧರಣಿ ನಡೆಸಿದರು.
ಬಸವರಾಜ ಜಾಬಶೆಟ್ಟಿ ನೇತೃತ್ವ ವಹಿಸಿದ್ದರು. ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಕೆ. ಪುಂಡಲೀಕರಾವ್, ಎಂ.ಎ. ಸಮಿ, ಅಹಸನ್ ಕಮಲ್ ಪರ್ವೆಜ್, ನಯೀಮ್ ಕಿರ್ಮಾನಿ, ಮಿಸ್ಬಾ, ಚಂದ್ರಕಾಂತ ಹಿಪ್ಪಳಗಾಂವ್, ಡಿ.ಕೆ. ಸಂಜುಕುಮಾರ, ಮುಖೇಶ, ದಶರಥ ದೊಡ್ಡಿ, ಸುಲ್ತಾನ್ ಖುರೇಶಿ, ಶಾಮರಾವ್ ಬಂಬಳಗಿ, ಗೌತಮ ಭೋಸ್ಲೆ, ಸತೀಶ್ ವಗ್ಗೆ ಇದ್ದರು.