ಸಮಾಜ ಹಿತ ಬಯಸುವ ಸಾಧನವೇ ಸಾಹಿತ್ಯ


Team Udayavani, Mar 2, 2020, 6:24 PM IST

2-March-37

ಸೊಲ್ಲಾಪುರ: ತನ್ನ ಒಡಲೊಳಗೆ ಹಿತವನ್ನು ಇರಿಸಿಕೊಂಡು ಸಮಾಜದ ಹಿತವನ್ನು ಬಯಸುವ ಸಾಧನವೇ ಸಾಹಿತ್ಯ. ಸ-ಹಿತವಾದುದೇ ಸಾಹಿತ್ಯ. ಇಂದು ರಚನೆಯಾಗುತ್ತಿರುವ ಸಾಹಿತ್ಯ ಸಮಾಜಕ್ಕೆ ಮತ್ತು ಓದುಗರಿಗೆ ತಲುಪಬೇಕು. ವಿಷಾದವೆಂದರೆ ಸಾಹಿತ್ಯ ಪ್ರಕಟಿಸುವಲ್ಲಿನ ಉತ್ಸಾಹ ಸಾಹಿತ್ಯ ತಲುಪಿಸುವ ಹೊತ್ತಲ್ಲಿ ಇರುವುದಿಲ್ಲ ಎಂದು ಬಬಲಾದ ಪ್ರಾಥಮಿಕ ಸರ್ಕಾರಿ ಶಾಲೆ ಶಿಕ್ಷಕ ವಿದ್ಯಾಧರ ಗುರವ ಹೇಳಿದರು.

ಅಕ್ಕಲಕೋಟ ತಾಲೂಕಿನ ಮೈಂದರ್ಗಿಯಲ್ಲಿ ಮಹಾರಾಷ್ಟ್ರ ಆದರ್ಶ ಕನ್ನಡ ಬಳಗ ಹಮ್ಮಿಕೊಂಡಿದ್ದ ಪುಸ್ತಕ ಸಂವಾದ ಮಾಲಿಕೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂವಾದಕ್ಕೆ ತೆಗೆದುಕೊಂಡಿರುವ ರಾಗಂ ಅವರ ಜಗದ್ವಂದ್ಯ ಭಾರತ, ಗಿರೀಶ ಜಕಾಪುರೆ ಹಾಗೂ ಶ್ರೀದೇವಿ ಕೆರೆಮನೆಯವರ ಗಜಲ್‌ ಜುಗಲ್‌ ಬಂದಿ ಕೃತಿಗಳು ಬಹಳಷ್ಟು ಪ್ರಸಿದ್ಧಿ ಪಡೆದಿವೆ. ಈ ರೀತಿಯ ಪುಸ್ತಕ ಪರಿಚಯದಿಂದ ಕೃತಿಗಳ ಓದುಗ ಬಳಗ ಇನ್ನಷ್ಟು ಬೆಳೆಯುತ್ತದೆ ಎಂದರು.

ಅಕ್ಕಲಕೋಟನ ಖೇಡಗಿ ಮಹಾ ವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ| ಗುರುಸಿದ್ಧಯ್ಯ ಸ್ವಾಮಿ ಮಾತನಾಡಿ, ನನ್ನ
ದನಿಗೆ ನಿನ್ನ ದನಿಯು ಗಜಲ್‌-ಜುಗಲ್‌ ಬಂದಿಯನ್ನು ಪರಿಚಯಿಸುತ್ತ ಈ ಕೃತಿಯಲ್ಲಿ ಅಲ್ಲಮ ಮತ್ತು ಸಿರಿ ರೂಪದಲ್ಲಿ ಪುರುಷ, ಪ್ರಕೃತಿಯೇ ಸಂವಾದಕ್ಕೆ ಇಳಿದಂತಿದೆ ಎಂದು ಹೇಳಿದರು.

ಆಳಂದ ಸರಕಾರಿ ಪದವಿ ವಿದ್ಯಾಲಯದ ಅತಿಥಿ ಉಪನ್ಯಾಸಕ ಡಾ| ರಾಜಕುಮಾರ ಹಿರೇಮಠ ಜಗದ್ವಂದ್ಯ ಭಾರತ ಕೃತಿಯನ್ನು ಪರಿಚಯಿಸುತ್ತ, ಇಂದು ದೇಶದಲ್ಲಿ ಕೋಮುದಳ್ಳುರಿ ಹಬ್ಬಿದೆ. ದೇಶದ ರಾಜಧಾನಿ ದಿಲ್ಲಿ ಹೊತ್ತಿ ಉರಿಯುತ್ತಿದೆ. ಘಾತುಕ ಶಕ್ತಿಗಳು ಜನರನ್ನು ಧರ್ಮದ ಹೆಸರಿನಲ್ಲಿ ಒಡೆಯುತ್ತಿವೆ. ಜನರು ಸುಳ್ಳು ಸುದ್ದಿಗಳಿಗೆ ಕಿವಿಗೊಡದೇ ಒಂದಾಗಿರಬೇಕಾದ ಕಾಲವಿದು ಎಂದರು.

ರಾಗಂ ಅವರ ಕೃತಿ ಜಗದ್ವಂದ್ಯ ಭಾರತಂ ಓದಿದರೆ ಇಂತಹ ಕೋಮುದಳ್ಳುರಿಗಳೇ ನಡೆಯುವುದಿಲ್ಲ. ದೇಶಭಕ್ತಿ ನರನಾಡಿಗಳಲ್ಲಿ ಸಂಚರಿಸುತ್ತದೆ. ನಾವೆಲ್ಲ ಒಂದು ಎನ್ನುವ ಭಾವನೆ ತಾನಾಗಿಯೇ ಹೊಮ್ಮುತ್ತದೆ ಮತ್ತು ಸಹೋದರತೆ ಬಲಪಡೆಯುತ್ತದೆ ಎಂದರು.

ಲೇಖಕ ಗಿರೀಶ ಜಕಾಪುರೆ ಮಾತನಾಡಿ, ಹೊರನಾಡಿನಲ್ಲಿಯೂ ಹಲವಾರು ಜನ ಲೇಖಕರು, ಕವಿಗಳು ಇದ್ದಾರೆ. ಆದರೆ ಅವರ ಕೃತಿಗಳ ಪರಿಚಯ ಕನ್ನಡದ ಓದುಗರಿಗೆ ಆಗಬೇಕಿದೆ ಎಂದು ಹೇಳಿದರು. ಹಿರಿಯ ರಂಗಕರ್ಮಿ ಮಲ್ಲಿಕಾರ್ಜುನ ಮಡ್ಡೆ, ಹಿರಿಯ ಶಿಕ್ಷಕ ಶ್ರೀಶೈಲ ಹಲಡಗಿ ಹಾಜರಿದ್ದರು. ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ್‌ ಶೇಖ, ಕಾರ್ಯದರ್ಶಿ ಸೋಮಶೇಖರ ಜಮಶೆಟ್ಟಿ, ಖಜಾಂಚಿ ಶರಣಪ್ಪ ಫುಲಾರಿ ಹಾಜರಿದ್ದರು. ಚಲನಚಿತ್ರ ಗಾಯಕ ಮಹೇಶ ಮೇತ್ರಿ ಕನ್ನಡದ ಸುಮಧುರ ಗೀತೆಗಳನ್ನು ಪ್ರಸ್ತುತ ಪಡಿಸಿದರು.

ಚಿದಾನಂದ ಮಠಪತಿ ನಿರೂಪಿಸಿದರು. ಬಸವರಾಜ ಧಾನಶೆಟ್ಟಿ ವಂದಿಸಿದರು. ದಿನೇಶ ಥಂಬದ, ಶರಣು ಕೋಳಿ, ಪ್ರಕಾಶ ಶಿವಣಗಿ, ಮಲ್ಲಿನಾಥ ರೂಪನೂರ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದರು.

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

Bidar; ಪ್ರೇಯಸಿ ಮದುವೆ ದಿನವೇ ಪ್ರಿಯಕರನ ಶವ ಪತ್ತೆ

Bidar; ಪ್ರೇಯಸಿ ಮದುವೆ ದಿನವೇ ಪ್ರಿಯಕರನ ಶವ ಪತ್ತೆ

rape

Bidar; ಯುವಕನಿಂದ ಅಪ್ರಾಪ್ತ ವಯಸ್ಕಳ ರೇಪ್

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.