ಶಿಕ್ಷಕರ ವೇತನ ಪಾವತಿ ಕ್ರಮಕ್ಕೆ ಸಂಘದಿಂದ ಸಚಿವರಿಗೆ ಮನವಿ
Team Udayavani, Oct 22, 2019, 3:15 PM IST
ಹುಮನಾಬಾದ: ಎರಡು ತಿಂಗಳಿಂದ ವೇತನ ಪಾವತಿಯಾಗದ ಕಾರಣ ತಾಲೂಕಿನ ಶಿಕ್ಷಕರು ತೀವ್ರ ಸಂಕಷ್ಟದಲ್ಲಿದ್ದು, ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕೆಂದು ಒತ್ತಾಯಿಸಿ ಸೋಮವಾರ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕಿನ ಸಮಸ್ತ ಶಿಕ್ಷಕರು ಈಗಾಗಲೇ ದಸರಾ ಹಬ್ಬವನ್ನು ಸಂಕಷ್ಟದಲ್ಲೇ ಕಳಿದಿದ್ದಾರೆ. ವಾರದೊಳಗೆ ಬರುವ ದೀಪಾವಳಿಯನ್ನಾದರೂ ಸಂತಸದಿಂದ ಆಚರಿಸಲು ಸರ್ಕಾರ ಶೀಘ್ರ ವೇತನ ಬಿಡುಗಡೆ ಮಾಡಬೇಕು. ಶಿಕ್ಷಕರ ವೇತನ ಬಿಡುಗಡೆಗೆ ಈಗಿರುವ ತ್ತೈಮಾಸಿಕ ಬಜೆಟ್ ಬಿಡುಗಡೆ ಪದ್ಧತಿ
ಕೈಬಿಟ್ಟು ವಾರ್ಷಿಕ ವೇತನ ಅನುದಾನ ಬಿಡುಗಡೆ ಪದ್ಧತಿ ಅನುಸರಿಸುವ ಮೂಲಕ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಬೇಕೆಂದು ಮನವಿಪತ್ರದಲ್ಲಿ ತಿಳಿಸಲಾಗಿದೆ. ಸಮಸ್ಯೆ ಆಲಿಸಿದ ಸಚಿವ ಚವ್ಹಾಣ ಅವರು, ವಿಳಂಬಕ್ಕೆ ಇರುವ ಕಾರಣ ಪರಿಶೀಲಿಸಿ, ದೀಪಾವಳಿ ಹಬ್ಬದೊಳಗೆ ವೇತನ ಪಾವತಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶೇಕ್ ಮೆಹೆಬೂಬ್ ಪಟೇಲ, ಪ್ರಧಾನ ಕಾರ್ಯದರ್ಶಿ ಸುರೇಂದ್ರನಾಥ ಹುಡಗೀಕರ್ ಮತ್ತಿತರ ಪದಾಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ನಿಂದ ಬದುಕು; ಬಿಜೆಪಿಯದ್ದು ಭಾವನೆಗಳ ಚೆಲ್ಲಾಟ: ಡಾ| ಭಂಡಾರಿ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ