ಮಂಗನ ಹಾವಳಿಗೆ ತತ್ತರಿಸಿದ ಜನತೆ


Team Udayavani, Mar 8, 2019, 10:44 AM IST

bid-2.jpg

ಹುಮನಾಬಾದ: ನಗರದಲ್ಲಿ ಕೆಲವು ತಿಂಗಳಿಂದ ಸಮಸ್ಯೆಯಾಗಿ ಪರಿಣಮಿಸಿರುವ ಮಂಗಗಳ ದಾಳಿಯಿಂದ ಬೇಸತ್ತಿರುವ ಸಾರ್ವಜನಿಕರು ಮನೆಯಿಂದ ಹೊರಗೆ ಬರಲು ಭಯ ಪಡುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸದಿರುವುದರಿಂದ
ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಿನ ಬೆಳಗಾದರೆ ಪಟ್ಟಣದ ಕಟ್ಟಡಗಳ ಛಾವಣಿಗಳ ಮೇಲೆ ಮಂಗಗಳದ್ದೇ ದರ್ಬಾರು. ಕಟ್ಟಡದ ಮೇಲಿನ ನೀರಿನ ಟ್ಯಾಂಕ್‌ ಮುಚ್ಚಳಿಕೆ ಕಿತ್ತೆಸೆಯುವುದು. ಪೈಪ್‌ ಮುರಿಯುವುದು, ಕೆಲವೊಮ್ಮೆ ನೇರ ಮನೆಯೊಳಗೆ ನುಗ್ಗಿ ಬ್ರೆಡ್‌, ಹಣ್ಣು, ರೊಟ್ಟಿ ಮತ್ತಿತರ ಆಹಾರ ಪದಾರ್ಥಗಳನ್ನು ಹೊತ್ತೂಯ್ಯುತ್ತಿವೆ. ಮನೆ ಬಾಗಿಲು ತೆರೆದಿಡದಿದ್ದರೆ ಕಿಟಕಿ ಬಳಿ ಕುಳಿತು ತಿನ್ನಲು ಏನಾದರೂ ಕೊಡುವವರೆಗೆ ಅಲ್ಲಿಂದ ಕದಲುವುದಿಲದಲ.
ಕಿಟಕಿಯಿಂದಲೇ ಮಹಿಳೆಯರು, ಮಕ್ಕಳನ್ನು ಹೆದರಿಸುತ್ತವೆ.

ಸಮಸ್ಯೆ ಇಷ್ಟೇ ಅಲ್ಲ ಮನೆ ಅಂಗಳದಲ್ಲಿ ಸುಮ್ಮನೆ ಕುಳಿತ ಮಹಿಳೆಯರು, ಬೀದಿಯಲ್ಲಿ ಆಡುವ ಮಕ್ಕಳಿಗೆ ಮಂಗಗಳು ಕಚ್ಚಿ ಗಂಭೀರ ಗಾಯಗೊಳಿಸುತ್ತಿವೆ. ಮೂರು ತಿಂಗಳ ಹಿಂದಷ್ಟೆ ಮೋಳಕೇರಾ ಗ್ರಾಮದಲ್ಲಿ ಮೋಳಿಗೆ ಮಾರಯ್ಯ ಗುಹೆಯ ಅರ್ಚಕ ವಿರೂಪಾಕ್ಷಯ್ಯ ಸ್ವಾಮಿ ಅವರಿಗೆ ಜೋರಾಗಿ ಒದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಹಳ್ಳಿಖೇಡ(ಬಿ) ಪಟ್ಟಣದ ಕರಣಕುಮಾರ ಸೇರಿ ಸುಮಾರು 13 ಜನರ ಕಾಲಿಗೆ ಮಂಗಗಳು ಕಚ್ಚಿವೆ.

ಹುಮನಾಬಾದ ಪಟ್ಟಣದ ಜೆಸ್ಕಾಂ ಕಾರ್ಯ ನಿರ್ವಾಹಕ ಎಂಜಿನಿಯರ್‌ ಗುರುಶಾಂತ ವಾರದ ಅವರ ತಾಯಿ ಕಾಲಿಗೂ ಮಂಗ ಕಚ್ಚಿ ಗಂಭೀರ ಗಾಯಗೊಳಿಸಿದೆ. ಅದು ಮರೆಯುವ ಮುನ್ನವೇ ಮಂಗಳವಾರ ಸಂಜೆ 7ರ ಸುಮಾರು ನಗರದ ತೋಪಗಲ್ಲಿಯಲ್ಲಿ ತಮ್ಮ ಪುತ್ರ ಅಶೋಕ ಹಿರೇಮಠ ಅವರ ಮನೆ ಅಂಗಳದಲ್ಲಿ ಕುಳಿತಿದ್ದ ಗುರುಶಾಂತಯ್ಯ ಹಿರೇಮಠ ಅವರ ಮೇಲೆ ದಾಳಿ ಮಾಡಿರುವ ಮಂಗ ತೊಡೆಗೆ ಗಂಭೀರ ಗಾಯಗೊಳಿಸಿದ್ದು, ಸದ್ಯ ಬೀದರ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಗಿಲು ಮುಚ್ಚಿ ಕುಳಿತ ಮಹಿಳೆಯರು: ಮಂಗನ ಕಾಟ ಹೆಚ್ಚಿದ್ದರಿಂದ ಮಹಿಳೆಯರು, ಮಕ್ಕಳು ಮನೆ ಹೊರಗೆ ಬರದೇ ಬಾಗಿಲ ಚಿಲಕ ಹಾಕಿಕೊಂಡೇ ಕುಳಿತುಕೊಳ್ಳವುವಂತಾಗಿದೆ. ಅದೆಷ್ಟೋ ಪಾಲಕರು ತಮ್ಮ ಮಕ್ಕಳನ್ನು ಶಾಲೆ ಮತ್ತು ಮನೆ ಪಾಠಕ್ಕೂ ಕಳಿಸುತ್ತಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ಮನೆಯಲ್ಲಿನ ಮಕ್ಕಳು, ಹಿರಿಯರ ಗತಿ ಏನು? ಎನ್ನುತ್ತಾರೆ ಸಂಜೀವಕುಮಾರ ಶೀಲವಂತ, ಕಲ್ಪನಾ ಕಠಾರಮಠ…, ಪವನ ಘವಾಳ್ಕರ, ಬಸವರಾಜ ಅಕ್ಕಪ್‌ ಅವರು.

ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ: ಇಷ್ಟೆಲ್ಲ ಘಟನೆಗಳು ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಮಸ್ಯೆ ಶೀಘ್ರ ಬಗೆಹರಿಸದಿದ್ದರೆ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಪಟ್ಟಣದ ನಿವಾಸಿಗಳು ಎಚ್ಚರಿಸಿದ್ದಾರೆ.

ಪ್ರಾಣಿಗಳು ವಿನಾಕಾರಣ ಯಾರ ಮೇಲೂ ದಾಳಿ ಮಾಡುವುದಿಲ್ಲ. ಮನೆ ಅಂಗಳ, ಕಿಟಕಿ ಹತ್ತಿರ ಬರುವ ಮಂಗಗಳಿಗೆ ಬಿಸ್ಕತ್ತು, ರೊಟ್ಟಿ ಕೊಡುತ್ತಾರೆ. ಹಾಗೆ ಕೊಡುವವರು ಒಂದೊಮ್ಮೆ ನೀಡದಿದ್ದಾಗ ಹೀಗೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಕಚ್ಚಿದ ಮಂಗನನ್ನು ಹಿಡಿಯಲು ಬೀದರ್‌ ಸಮೀಪದ ಕೊಳಾರ ಗ್ರಾಮದ ವಿಶೇಷ ತಂಡವನ್ನು ಶುಕ್ರವಾರವೇ ಆಹ್ವಾನಿಸಿ, ಸಿಕ್ಕ ತಕ್ಷಣ ಸ್ಥಳಾಂತರಿಸುತ್ತೇವೆ. 
 ರಮೇಶ ಕನಕಟಕರ್‌, ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ

ಶಶಿಕಾಂತ ಕೆ.ಭಗೋಜಿ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.