ಆಕಾಂಕ್ಷಿಗಳ ಕನಸಿಗೆ ಮೂಡಿದ ರೆಕ್ಕೆ ಪುಕ್ಕ

ಜಿಪಂ ಕ್ಷೇತ್ರ ವಿಂಗಡಣೆ ಪಟ್ಟಿ ಪ್ರಕಟ! ­8 ಹೊಸ ಜಿಪಂ ಕ್ಷೇತ್ರ ಉದಯ­! 7 ಕ್ಷೇತ್ರಗಳ ಬದಲಾವಣೆ

Team Udayavani, Apr 2, 2021, 8:43 PM IST

fgjft

ಶಶಿಕಾಂತ ಬಂಬುಳಗೆ

ಬೀದರ: ಬಹುನಿರೀಕ್ಷಿತ ಬೀದರ ಜಿಪಂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವಿಂಗಡಣೆ ಪಟ್ಟಿ ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಇದರೊಂದಿಗೆ ಚುನಾವಣೆ ಸ್ಪರ್ಧೆ ತಯಾರಿಯಲ್ಲಿರುವ ಆಕಾಂಕ್ಷಿಗಳ ಕನಸು ಚಿಗುರೊಡೆದಿದೆ. ಕ್ಷೇತ್ರಗಳ ಪುನರ್‌ ವಿಂಗಡಣೆಯಿಂದ ಹೊಸ ಕ್ಷೇತ್ರಗಳು ಸೃಷ್ಟಿಯಾಗಿದ್ದರೆ, ಕೆಲ ಕ್ಷೇತ್ರಗಳು ಬದಲಾವಣೆಗೊಂಡಿವೆ.

ರಾಜ್ಯದ ವಿಧಾನಸಭೆ ಮತ್ತು ಲೋಕಸಭೆ ಉಪ ಚುನಾವಣೆ ಮುಗಿದ ಬೆನ್ನಲ್ಲೇ ಜಿಪಂ ತಾಪಂಗೆ ಚುನಾವಣೆ ಮುಹೂರ್ತ ಫಿಕ್ಸ್‌ ಆಗುವ ಸಾಧ್ಯತೆ ಇದ್ದು, ಈಗಾಗಲೇ ಚುನಾವಣೆ ಆಯೋಗ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೊದಲ ಹಂತವಾಗಿ ಕ್ಷೇತ್ರ ಮರು ವಿಂಗಡಣೆ ಪ್ರಕ್ರಿಯೆ ಮಾ.29ಕ್ಕೆ ಪೂರ್ಣಗೊಳಿಸಿದೆ. ಇದರಿಂದ ಬೀದರ ಜಿಲ್ಲೆಯ ಕ್ಷೇತ್ರಗಳ ಸಂಖ್ಯೆ 34ರಿಂದ 41ಕ್ಕೆ ಹೆಚ್ಚಳವಾಗಿದೆ. ಜಿಪಂ ಕ್ಷೇತ್ರಗಳ ಸ್ಥಾನ ಹೆಚ್ಚುವುದರಿಂದ ಆಡಳಿತ ಇನ್ನಷ್ಟು ವಿಕೇಂದ್ರೀಕರಣಗೊಂಡು, ಅಭಿವೃದ್ಧಿಗೆ ಒತ್ತು ಸಿಗಲು ಸಾಧ್ಯವಾಗಲಿದೆ.

ಗ್ರಾಮೀಣ ಪ್ರದೇಶದ ಜನಸಂಖ್ಯೆ ಆಧಾರದ ಮೇಲೆ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅ ಧಿನಿಯಮ 1993ರ ಪ್ರಕರಣ 121 ಮತ್ತು 16ಗಳಿಗೆ ಉಲ್ಲೇಖ (2) ಮತ್ತು (3) ಗಳಂತೆ ಮಾಡಲಾಗಿರುವ ತಿದ್ದುಪಡಿಯನ್ವಯ ಜಿಪಂ ಸದಸ್ಯ ಸ್ಥಾನ ನಿಗದಿಪಡಿಸಲಾಗಿದೆ. ನೂತನ ಕ್ಷೇತ್ರಗಳ ರಚನೆ ವೇಳೆ ಗ್ರಾಮೀಣ ಪ್ರದೇಶ ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ತಾಲೂಕಿನ ಗ್ರಾಪಂಗಳನ್ನು ಒಡೆಯದೇ, ಪೂರ್ಣ ಗ್ರಾಪಂಗಳನ್ನು ಒಟ್ಟುಗೂಡಿಸಿ ಜಿಪಂ ಕ್ಷೇತ್ರ ರಚನೆ ಮಾಡಲಾಗಿದೆ.

7 ಜಿಪಂ ಕ್ಷೇತ್ರಗಳ ಬದಲಾವಣೆ: ಜಿಲ್ಲೆಯ 5 ತಾಲೂಕುಗಳ 34 ಜಿಪಂ ಕ್ಷೇತ್ರಗಳು ಇದ್ದವು. ಈಗ ತಾಲೂಕುಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದ್ದು, ಜಿಪಂ ಸ್ಥಾನಗಳೂ 41ಕ್ಕೆ ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ ಹಳ್ಳಿಖೇಡ(ಬಿ) ಒಂದು ಕ್ಷೇತ್ರ ಕೈಬಿಡಲಾಗಿದ್ದು, ಹೊಸದಾಗಿ 8 ಕ್ಷೇತ್ರಗಳು ಸೇರ್ಪಡೆಯಾಗಿವೆ. ಇನ್ನೂ 7 ಜಿಪಂ ಕ್ಷೇತ್ರಗಳು ಬದಲಾವಣೆ ಕಂಡಿದ್ದು, ಅದರಲ್ಲಿ ಬೀದರ ತಾಲೂಕಿನ ಗಾದಗಿ (ಮಾಳೇಗಾಂವ್‌), ಕಮಲನಗರ ತಾಲೂಕಿನ ಮುಧೋಳ-ಬಿ (ಠಾಣಾಕುಶನೂರ), ಮುರ್ಕಿ (ದಾಬಕಾ-ಸಿ) ಔರಾದ ತಾಲೂಕಿನ ಚಿಕ್ಲಿ-ಜೆ (ವಡಗಾಂವ್‌), ಭಾಲ್ಕಿ ತಾಲೂಕಿನ ಧನ್ನೂರ-ಎಸ್‌ (ಹಲಬರ್ಗಾ), ಸಿದ್ಧೇಶ್ವರ (ಮದಕಟ್ಟಿ) ಮತ್ತು ಬಸವಕಲ್ಯಾಣ ತಾಲೂಕಿನ ಮೋರ್ಖಂಡಿ (ಪರ್ತಾಪುರ) ಸೇರಿವೆ. ತಾಪಂ ಆಡಳಿತ ವ್ಯವಸ್ಥೆ ರದ್ದುಪಡಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ಹಾಗೂ ಕ್ಷೇತ್ರಗಳ ಸಂಖ್ಯೆ ಕುಸಿತದಿಂದ ರಾಜಕೀಯವಾಗಿ ನೆಲೆ ಕಂಡುಕೊಳ್ಳಲು ಕನಸು ಹೊತ್ತಿದ್ದ ಗ್ರಾಮೀಣ ಯುವ ರಾಜಕಾರಣಿಗಳು ತೀವ್ರ ಬೇಸರಗೊಂಡಿದ್ದರು. ಆದರೆ, ಈಗ ಹೊಸ ಜಿಪಂ ಕ್ಷೇತ್ರಗಳು ಉದಯವಾಗುವುದರಿಂದ ಆಕಾಂಕ್ಷಿಗಳ ಖುಷಿಗೆ ಕಾರಣವಾಗಿದೆ.

ಟಾಪ್ ನ್ಯೂಸ್

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.