4 ಎಕರೆ ಕಬ್ಬು ಬೆಂಕಿಗಾಹುತಿ
Team Udayavani, Jan 25, 2022, 5:23 PM IST
ಇಂಡಿ: ವಿದ್ಯುತ್ ಅವಘಡದಿಂದಾಗಿ 4 ಎಕರೆ ಕಬ್ಬು ಬೆಂಕಿಗೆ ಅಹುತಿಯಾದ ಘಟನೆ ತಾಲೂಕಿನ ಶಿರಗೂರ ಇನಾಂ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತರಾದ ಶಿವಾನಂದ ನಾವದಗಿ ಹಾಗೂ ಶುಭಾ ಪೂಜಾರಿ ಅವರಿಗೆ ಸೇರಿದ ನಾಲ್ಕು ಎಕರೆ ಕಬ್ಬು ವಿದ್ಯುತ್ ಶಾರ್ಟ್ ಸರ್ಕ್ನೂಟ್ಗೆ ಒಳಗಾಗಿ ಬೆಂಕಿಗೆ ಈಡಾಗಿದೆ.
ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆ ಮತ್ತು ವಿದ್ಯುತ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಬೆಂಕಿಗೆಆಹುತಿಯಾದ ಕಬ್ಬನ್ನು ಮರು ದಿನವೇ ಕಾರ್ಖಾನೆಗೆ ಕಳುಹಿಸಬೇಕು. ತಹಶೀಲ್ದಾರ್ರು ಇಂತಹ ಸಂಕಷ್ಟದಲ್ಲಿ ರೈತರ ಕಬ್ಬನ್ನು ಕೂಡಲೇ ಕಾರ್ಖಾನೆಗೆ ಸಾಗಿಸಲು ಕ್ರಮ ಕೈಗೊಂಡು ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಆಗ್ರಹಿಸಿದ್ದಾರೆ.