ಎತ್ತಿನ ಬಂಡಿ ಸ್ಪರ್ಧೆಗೆ ಸಾಕ್ಷಿಯಾದ ಜನಸಮೂಹ


Team Udayavani, Jun 11, 2018, 11:13 AM IST

vij-2.jpg

ವಿಜಯಪುರ: ನಗರದ ದರ್ಗಾ ಪ್ರದೇಶದಲ್ಲಿನ ಹಜರತ್‌ ಖ್ವಾಜಾ ಅಮೀನ್‌ ದರ್ಗಾದ ಉರುಸಿನ ಅಂಗವಾಗಿ ಜಾನಪದ ಗ್ರಾಮೀಣ ಕ್ರೀಡಾಕೂಟಕ್ಕಾಗಿ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ಎತ್ತಿನಗಾಡಿ ಸ್ಪರ್ಧೆ ರೋಮಾಂಚನ ಮೂಡಿಸಿತು.

ರವಿವಾರ ನಗರದ ಸರ್ವಧರ್ಮ ಸಮನ್ವಯತೆ ಕೇಂದ್ರವಾಗಿರುವ ಹಜರತ್‌ ಖ್ವಾಜಾ ಅಮೀನ್‌ ದರ್ಗಾದ ಉತ್ಸವ ನಿಮಿತ್ತ ರಾಷ್ಟ್ರ ಮಟ್ಟದ ಎತ್ತಿನ ಗಾಡಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಹಜರತ್‌ ಖ್ವಾಜಾ ಅಮೀನ್‌ ದರ್ಗಾದ ಉರುಸಿನ ಅಂಗವಾಗಿ ಹಲವು ವರ್ಷಗಳಿಂದ ಗ್ರಾಮೀಣ ಸೊಗಡಿನ ಸಾಹಸ ಕ್ರೀಡೆಗಳನ್ನು ಆಯೋಜಿಸುತ್ತ ಬರಲಾಗುತ್ತದೆ. ಇದರ ಅಂಗವಾಗಿ ಪ್ರಸಕ್ತ ವರ್ಷ ರಾಷ್ಟ್ರ ಮಟ್ಟದ ಎತ್ತಿನಗಾಡಿ ಸ್ಪರ್ಧೆ ಆಯೋಜಿಸಲಾಗಿತ್ತು.

ಮಾಲೀಕನ ಮನೋಭಾವಕ್ಕೆ ತಕ್ಕಂತೆ ಎತ್ತುಗಳು ಬಂಡಿಗಳನ್ನು ಹೊತ್ತು ಓಡುತ್ತಿದ್ದ ದೃಶ್ಯ ನೆರೆದ ಜನರಲ್ಲಿ ರೋಮಾಂಚನ ಮೂಡಿಸುವಂತೆ ಮಾಡಿತ್ತು. ದರ್ಗಾ ಪ್ರದೇಶದ ರಿಂಗ್‌ ರಸ್ತೆಯಿಂದ ರೇಡಿಯೋ ಮೈದಾನದವರೆಗೆ ಬಂಡಿಯ ನೊಗೆ ಹೊತ್ತ ಜೋಡೆತ್ತುಗಳು ಓಡುತ್ತಲೇ ಇದ್ದವು.
 
ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಗ್ರಾಮೀಣ ಸಾಹಸ ಕ್ರೀಡಾಸಕ್ತರು ಚಪ್ಪಾಳೆ ಮೂಲಕ ಎತ್ತುಗಳನ್ನು ಹಾಗೂ ಚಕ್ಕಡಿಯಲ್ಲಿ ಕುಳಿತ ಸವಾರನ್ನು ಉತ್ತೇಜಿಸುವ ಕೆಲಸ ಮಾಡುತ್ತಿದ್ದರು. ಸದರಿ ಸ್ಪರ್ಧೆಯಲ್ಲಿ ಕರ್ನಾಟಕ ಮಾತ್ರವಲ್ಲದೇ ನೆರೆಯ ಮಹಾರಾಷ್ಟ್ರ, ತೆಲಂಗಾಣ, ಸೀಮಾಂಧ್ರ, ಗೋವಾ ರಾಜ್ಯಗಳ ಸುಮಾರು 60ಕ್ಕೂ ಹೆಚ್ಚು ಎತ್ತಿನ ಗಾಡಿ ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧೆಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿತ್ತು. ಪ್ರತಿ ವಿಭಾಗದ ಸ್ಪರ್ಧೆಯನ್ನೂ ಪ್ರತ್ಯೇಕವಾಗಿಯೇ ನಡೆಸಲಾಯಿತು.

ಒಂದು ಕುದುರೆ ಮತ್ತು ಎತ್ತುಗಳ ಜೊತೆಯಾಗಿ ಸ್ಪರ್ಧೆ, ಮಧ್ಯ ವಯಸ್ಸಿನ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ ಹಾಗೂ ಎರಡು ಮತ್ತು ನಾಲ್ಕು ಹಲ್ಲು ಹಚ್ಚಿದ ಎತ್ತುಗಳ ಓಟದ ಸ್ಪರ್ಧೆ ನಡೆಯಿತು. ಯುವ ಮುಖಂಡ ಜಾವೇದ್‌ ಜಮಾದಾರ ಸ್ಪರ್ಧೆಗೆ ಚಾಲನೆ ನೀಡಿದರು. ಗ್ರಾಮೀಣ ಕ್ರೀಡಾ ಸಾಹಸ ಸ್ಪರ್ಧೆ ಸಂಘಟಕ ಹಾಸಿಂಪೀರ್‌ ವಾಲೀಕಾರ ಮಾತನಾಡಿದರು. ನಬಿಲಾಲ್‌ ಕರ್ಜಗಿ, ಮುಖಂಡರಾದ ಜಹಾಂಗಿರ ಮಮದಾಪುರ, ಮೆಹಬೂಬ ಮಮದಾಪುರ,
ಅಪ್ಪುಗೌಡ ಪಾಟೀಲ, ಕಾಂತು ಹದನೂರ, ಬಸಪ್ಪ ಶೆಟಗಾರ, ಮಸ್ತಾನ್‌ ಯಾದಗಿರ, ಬಾಳು ಹದನೂರ ಇದ್ದರು.

13.25 ಲಕ್ಷ ರೂ. ಬಹುಮಾನ: ಒಂದು ಕುದುರೆ ಮತ್ತು ಎತ್ತುಗಳ ಜೊತೆಯಾಗಿ ಸ್ಪರ್ಧೆಯಲ್ಲಿ ಪಾಪಟ ಸಿಂಧೆ ಚಿಕ್ಕೋಡಿ ಪ್ರಥಮ ಬಹುಮಾನ ಒಂದು ಲಕ್ಷ ರೂ. ಗಿಟ್ಟಿಸಿಕೊಂಡರು. ನಿಪ್ಪಾಣಿಯ ಹೇಮಂತ ಹರಿರಾ 50 ಸಾವಿರ ರೂ. ಬಂದಾ ಕಿಲಾರಿ ಕೊಲ್ಹಾರ ತೃತೀಯ 25 ಸಾವಿರ ರೂ. ಬಹುಮಾನ ಪಡೆದುಕೊಂಡರು. 

ಎರಡನೇಯದಾಗಿ ಮಧ್ಯವಯಸ್ಸಿನ ಜೋಡಿ ಎತ್ತಿನ ಸ್ಪರ್ಧೆಯಲ್ಲಿ ಶಂಕರ ಜೊಗನಿ ಪ್ರಥಮ ಸ್ಥಾನ ಪಡೆದು 2 ಲಕ್ಷ ರೂ. ನಗದು ಬಹುಮಾನ, ರಾಮದುರ್ಗದ ತಿಪ್ಪಣ್ಣ ಹುದ್ದಾರ ದ್ವಿತೀಯ ಬಹುಮಾನ ಪಡೆದು 1 ಲಕ್ಷ ರೂ. ಹಾಗೂ ಮುಸಾ ಮುಜಾವರ ಕೊಲ್ಹಾರ 50 ಸಾವಿರ ರೂ. ತೃತೀಯ ಬಹುಮಾನ ಗಿಟ್ಟಿಸಿದರು. ಮೂರನೆಯದಾಗಿ ಎರಡು ಮತ್ತು ನಾಲ್ಕು ಹಲ್ಲು ಹಚ್ಚಿದ ಎತ್ತುಗಳ ಓಟದಲ್ಲಿ ಪ್ರಥಮ ಬಹುಮಾನ ಬಂಡಾ ಸಿದ್ದೇವಾಡಿ ಮಿರಜ 5 ಲಕ್ಷ ರೂ. ಪಡೆದರು. ದ್ವಿತೀಯ ಬಹುಮಾನ ಸಾದಿಕ ಅಜರಾ ಕೊಲ್ಹಾಪುರ 2.50 ಲಕ್ಷ ರೂ. ಪಡೆದರು. ತೃತೀಯ ಬಹುಮಾನ ಅಪ್ಪುಗೌಡ ಪಾಟೀಲ, ಗೋವಿಂದಪುರ ಸಾಂಗ್ಲಿ 1.50 ಲಕ್ಷ ರೂ. ಪಡೆದರು.

ಟಾಪ್ ನ್ಯೂಸ್

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suspended

Vijaypur: ಕರ್ತವ್ಯ ಲೋಪ ಡಿಡಿಪಿಐ ನಾಗೂರ ಮತ್ತೆ ಸಸ್ಪೆಂಡ್

1-qweqeweqw

Congress ಅಭ್ಯರ್ಥಿ ಮೆರವಣಿಗೆಯಲ್ಲಿ ಹಣ ಹಂಚಿದ ವಿಡಿಯೋ ವೈರಲ್

shivananda

Vijayapura; ಯತ್ನಾಳಗೆ ತಾಕತ್ತಿದ್ದರೆ ಈಗಲೇ ಸ್ಪರ್ಧೆಗೆ ಬರಲಿ: ಸಚಿವ ಶಿವಾನಂದ ಪಾಟೀಲ

MB Patil 2

Electoral bonds; ಮೋದಿ ಭ್ರಷ್ಟಾಚಾರದ ಮತ್ತೊಂದು ಮುಖ ಬಯಲು:ಎಂ.ಬಿ.ಪಾಟೀಲ್

Vijayapura; ನಾಮಪತ್ರ ಸಲ್ಲಿಕೆಗೆ ಮುನ್ನ ಬಿ.ಎಂ.ಪಾಟೀಲ ಸಮಾಧಿಗೆ ನಮಿಸಿದ ಆಲಗೂರ

Vijayapura; ನಾಮಪತ್ರ ಸಲ್ಲಿಕೆಗೆ ಮುನ್ನ ಬಿ.ಎಂ.ಪಾಟೀಲ ಸಮಾಧಿಗೆ ನಮಿಸಿದ ಆಲಗೂರ

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Bengaluru: ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ; ನಾಲ್ಕು ವರ್ಷದ ಮಗು ಆಹುತಿ

Bengaluru: ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ; ನಾಲ್ಕು ವರ್ಷದ ಮಗು ಆಹುತಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.