ಭಕ್ತರಿಗೆ ಸಂಗೀತ ರಸದೌತಣ

ಯಲಗೂರ ಕಾರ್ತಿಕೋತ್ಸವ ಸಂಭ್ರಮ ಅದ್ಧೂರಿಯಾಗಿ ಜರುಗಿದ ರಥೋತ್ಸವ

Team Udayavani, Feb 17, 2020, 12:20 PM IST

17-February-6

ಆಲಮಟ್ಟಿ: ಈ ಭಾಗದ ಶ್ರೀಕ್ಷೇತ್ರಗಳಲ್ಲೊಂದಾಗಿರುವ ಯಲಗೂರ ಗ್ರಾಮದ ಯಲಗೂರೇಶ್ವರ ಕಾರ್ತಿಕೋತ್ಸವ ಅಂಗವಾಗಿ ಸತತ ಎರಡು ದಿನ ರಾಜ್ಯದ ಪ್ರಸಿದ್ಧ ಸಂಗೀತ ಕಲಾವಿದರಿಂದ ನಡೆದ ದಾಸವಾಣಿ ಹಾಗೂ ಗಾಯನ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.

ರವಿವಾರ ಬೆಳಗ್ಗೆ ಪಲ್ಲಕ್ಕಿ ಮೆರವಣಿಗೆ ಹಾಗೂ ಕಾಕಡಾರತಿ, ಕಾರ್ತಿಕ ಇಳಿಸುವುದು ಸೇರಿದಂತೆ ವಿವಿಧ ರ್ಮಿಕ ಕಾರ್ಯಕ್ರಮಗಳು ಜರುಗಿದವು. ನಂತರ ಹರಶಾವಿಗೆ (ದಾಸೋಹ), ಅನ್ನದಾಸೋಹ ಜರುಗಿತು. ವಿಶ್ವೇಶತೀರ್ಥ ಶ್ರೀಪಾದಂಗಳವರ ಸಭಾಮಂಟಪದಲ್ಲಿ ಹರಿದಾಸ ಸಾಹಿತ್ಯಸಂಗೀತ ವೇದಿಕೆಯಲ್ಲಿ ತೆಂಗಿನ ತೋಟದ ಮೈದಾನದಲ್ಲಿ ನಿರಂತರ ದಾಸವಾಣಿ, ತಬಲಾ ಸೋಲೋ, ಜುಗಲಬಂಧಿ ಸೇರಿದಂತೆ ವಿವಿಧ ಸಂಗೀತ ರಸದೌತಣವನ್ನು ವೀಣಾ ಬಡಿಗೇರ ಮತ್ತು ವಾಣಿಶ್ರೀ ಧನ್ವಂತರಿಯವರ ಜುಗಲ್‌ ಬಂಧಿ, ವೀಣಾ ಥಿಟೆ, ಮೈಸೂರು ರಾಮಚಂದ್ರಾರಾವ್‌ ದಾಸವಾಣಿ, ಅರುಣಕುಮಾರ ಅವರ ತಾನಸೇನ್‌ ವಾದನ,
ವಿದೂಷಿ ಸಂಗೀತಾ ಕಟ್ಟಿ ಕುಲಕರ್ಣಿಯವರು ಹಾಡಿದ ಸೂಳ್ಳು ನಮ್ಮಲ್ಲಿ ಇಲ್ಲವಯ್ನಾ ಸುಳ್ಳೇ ನಮ್ಮನೆ ದೇವರು, ಬನ್ನಿಸಲವಳಲ್ಲ ನಿಮ್ಮ ಪ್ರಸನ್ನಮೂರ್ತಿ ಯಲಗೂರವಾಸ ಎನ್ನುವ ಗಾಯನಕ್ಕೆ ನೆರೆದಜನ ತಲೆದೂಗುವಂತಾಗಿತ್ತು. ನಾಡಿನ ಖ್ಯಾತ ಗಾಯಕರು ಹಾಡಿದ ಹಿಂದೂಸ್ಥಾನಿ ಸಂಗೀತ, ದಾಸ ವಾಣಿ, ಭಕ್ತಿ ಗೀತೆಗಳ ಮೂಲಕ ನೆರೆದ ಜನತೆಯ ಮನಸೂರೆಗೊಂಡವು.

ಕಾರ್ಯಕ್ರಮದಲ್ಲಿ ಅನಂತ ಓಂಕಾರ, ನಾರಾಯಣ ಒಡೆಯರ, ಗೋಪಾಲ ಗದ್ದನಕೇರಿ, ಮುರಳಿ ಚಿಮ್ಮಲಗಿ, ಪ್ರಸನ್ನ ಕಟ್ಟಿ, ಸಂತೋಷ ಪೂಜಾರ, ಪ್ರಮೋದ ಕುಲಕರ್ಣಿ, ಆಲೂರ ಮೊದಲಾದವರಿದ್ದರು.

ಸ್ವಚ್ಛತೆಗೆ ಆದ್ಯತೆ: ಗ್ರಾಪಂ ಯಲಗೂರ, ದೇವಸ್ಥಾನ ಸಮಿತಿಯವರ ವಿಶೇಷ ಕಾಳಜಿಯಿಂದ ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದ್ದರಿಂದ ದೂರದಿಂದ ಆಗಮಿಸಿರುವ ಭಕ್ತರು ತಾವು ಇಳಿದುಕೊಂಡಿರುವ ಸ್ಥಳದಲ್ಲಿ ನೈವೇದ್ಯ ತಯಾರಿಸಿಕೊಂಡು ಬಂದು ಗೋವಿಂದಾ. . . ಗೋವಿಂದಾ. . . ಎನ್ನುತ್ತ ದೇವಸ್ಥಾನಕ್ಕೆ ತೆರಳಿ ತಮ್ಮ ಭಕ್ತಿಯ ಸೇವೆಯನ್ನು ಸಮರ್ಪಿಸಿದರು.

ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ನಾಡಿನ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಭಕ್ತರಿಗೆ ತೊಂದರೆಯಾಗದಂತೆ ಗ್ರಾಪಂ, ದೇವಸ್ಥಾನ ಸಮಿತಿಯವರು ಕುಡಿಯುವ ನೀರು, ವಾಹನಗಳ ನಿಲುಗಡೆಗಾಗಿ ಎರಡು ಕಡೆಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಪೊಲೀಸರು ಜನದಟ್ಟಣೆ ನಿಯಂತ್ರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದರು.

ದೂರದ ಊರುಗಳಿಂದ ಆಗಮಿಸಿದ್ದ ಭಕ್ತರು ತಮ್ಮ ಹರಕೆಗಳು ಈಡೇರಿದ್ದರಿಂದ ಶನಿವಾರದಿಂದ ರವಿವಾರ ಸಂಜೆಯವರೆಗೂ ಕೃಷ್ಣಾನದಿಯಲ್ಲಿ ಮಿಂದು ದೇವಸ್ಥಾನದವರೆಗೂ ದೀಡ ನಮಸ್ಕಾರಗಳನ್ನು ಹಾಕುತ್ತಿರುವವರು ಸಂಖ್ಯೆ ಕಳೆದ ಬಾರಿಗಿಂತಲೂ ಹೆಚ್ಚಾಗಿತ್ತು.

„ಶಂಕರ ಜಲ್ಲಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.