ಹನುಮ ಜಯಂತಿ ಸರಳವಾಗಿ ಆಚರಣೆ
Team Udayavani, Apr 9, 2020, 5:43 PM IST
ಆಲಮೇಲ: ದೇವಸ್ಥಾನದ ಬಾಗಿಲು ಮುಚ್ಚಿದ್ದರಿಂದ ಹೊರಗಿನಿಂದಲೆ ದರ್ಶನ ಪಡೆದ ಭಕ್ತರು.
ಆಲಮೇಲ: ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಸಂಕ್ಷಿಪ್ತವಾಗಿ ಹನುಮ ಜಯಂತಿ ಆಚರಿಸಲಾಯಿತು. ಪಟ್ಟಣದ ಧಕ್ಷೀಣಾಭಿಮುಖ ಆಂಜನೇಯ ದೇವಸ್ಥಾನದಲ್ಲಿ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಹೋಮ ಹವನ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸರ್ಕಾರ ಲಾಕ್ಡೌನ್ ವಿಧಿಸಿದ್ದರಿಂದ ಎಲ್ಲ ಕಾರ್ಯಕ್ರಮವು ರದ್ದು ಮಾಡಿ ಸಕ್ಷಿಪ್ತ ಪೂಜೆ ಮಾಡಿ ಹನುಮ ಜಯಂತಿ ಆಚರಿಸಿದರು.
ಈ ವರ್ಷ ನೂತನ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಯುಗಾದಿ ನಂತರ 15 ದಿನಗಳ ವರೆಗೆ ಪ್ರತಿನಿತ್ಯ ವಿಶೇಷ ಪೂಜೆ ಹೋಮ ಹವನದಂತ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹನುಮ ಜಯಂತಿ ಇದ್ದರಿಂದ ಭಕ್ತರು ಆಂಜನೇಯ ದೇವಸ್ಥಾನಕ್ಕೆ ತೆರಳಿದರೆ ಬಾಗಿಲು ಮುಚ್ಚಿದ್ದರಿಂದ ಗೇಟ್ ಹೊರಗಿನಿಂದಲೆ ದರ್ಶನ ಪಡೆದು ಹೋಗುವಂತಾಯಿತು.