ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ
Team Udayavani, Jun 12, 2018, 11:07 AM IST
ಸಿಂದಗಿ: ಮತ ಹಾಕಿ ನೀವು ನನ್ನ ಗೆಲ್ಲಿಸಿದ್ದಿರಿ ನಿಮ್ಮ ಋಣ ತೀರಿಸಲು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತೇನೆ ಎಂದು ನೂತನ ತೋಟಗಾರಿಕೆ ಸಚಿವರಾಗಿ ಎಂ.ಸಿ. ಮನಗೂಳಿ ಹೇಳಿದರು. ಸೋಮವಾರ ಪಟ್ಟಣದ ಅನಂದ ಚಿತ್ರಮಂದಿರದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಎಂ.ಸಿ. ಮನಗೂಳಿ ಅವರ ಅಭಿಮಾನಿಗಳು ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಾನು ಕೃಷಿಯಲ್ಲಿ ಡಿಪ್ಲೋಮಾ ಪಾಸಾಗಿ 15 ವರ್ಷ ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ರೈತರ ಒಡನಾಡಿಯಾಗಿ ಬದುಕು ಸಾಗಿಸಿದ್ದೇನೆ. ಆಗ ರೈತರ ಮತ್ತು ಜನ ಸಾಮಾನ್ಯರ ಕಷ್ಟಗಳನ್ನು ಅರಿತೇನು. ಅವರ ಕಷ್ಟಗಳಿಗೆ ಸ್ಪಂದಿಸಿಲು ರಾಜಕೀಯ ಪ್ರವೇಶಿಸಿದ ನಂತರ ರಾಜಕೀಯ ಜೀವನ ನಿಮಗೆಲ್ಲರಿಗೂ ಗೊತ್ತು. ರೈತರ ಮೇಲಿನ ನನ್ನ ಕಾಳಜಿ ಗುರುತಿಸಿ ನಮ್ಮ ನಾಯಕರಾದ ಎಚ್.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತೋಟಗಾರಿಕೆ ಇಲಾಖೆ ಕ್ಯಾಬಿನೇಟ್ ಸಚಿವ ಸ್ಥಾನ ನೀಡುವ ಮೂಲಕ ರೈತರ ಸೇವೆಗೆ ಹೆಚ್ಚಿನ ಅವಕಾಶ ನೀಡಿದ್ದಾರೆ ಎಂದರು.
ಜಿಲ್ಲೆ ಬರಗಾಲ ಪ್ರದೇಶವಾಗಿದೆ. ಈ ಭಾಗದಲ್ಲಿ ಬೆಳೆಯುವ ದ್ರಾಕ್ಷಿ, ದಾಳಿಂಬೆ, ನಿಂಬೆ ಮುಂತಾದ ತೋಟಗಾರಿಕೆ ಬೆಳೆಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ. ತೋಟಗಾರಿಕೆ ಬೆಳೆ ಬೆಳೆಯುವ ರೈತರ ಸಂಕಷ್ಟಗಳು ಅರಿತಿದ್ದೇನೆ. ವಿಜಯಪುರ ಜಿಲ್ಲೆಯಲ್ಲದೇ ರಾಜ್ಯದ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ನನಗೆ ಸೇವೆ ಸಲ್ಲಿಸಲು ನೀಡಿದ ಅವಕಾಶವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.
ಕ್ಷೇತ್ರದಲ್ಲಿ ಇನ್ನು ಹೆಚ್ಚು ತೋಟಗಾರಿಕೆ ಬೆಳೆ ಬೆಳೆಯಲು ಪ್ರೋತ್ಸಾಹ ನೀಡುತ್ತೇನೆ. ಹೆಚ್ಚಿನ ಅಧ್ಯಯನಕ್ಕಾಗಿ ಇಸ್ರೇಲ್ ದೇಶಕ್ಕೆ ಕಳುಹಿಸುತ್ತೇನೆ. ಅಲ್ಲಿ ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ಇಳುವರಿಗೆ ತೆಗೆಯುವ ಪದ್ಧತಿ ಅಧ್ಯಯನ ಮಾಡಲು ಕಳುಹಿಸಲಾಗುವುದು. ತೋಟಗಾರಿಕೆ ಇಲಾಖೆ ಜವಾಬ್ದಾರಿ ಹೆಚ್ಚಿದೆ. ಇಲಾಖೆಯಲ್ಲಿ ರೈತರಿಗೆ ಸಿಗುವ ಸೌಲಭ್ಯ, ಸಬ್ಸಿಡಿ ಮುಂತಾದ ಮಾಹಿತಿ ಅಧ್ಯಯನ ಮಾಡಿ ಎಲ್ಲವನ್ನು ರೈತರಿಗೆ ತಲುಪಿಸುತ್ತೇನೆ ಎಂದರು.
ನನ್ನ ದೇಹಕ್ಕೆ ವಯಸ್ಸಾಗಿರಬಹುದು ಕೆಲಸ ಮಾಡುವ ಮನಸ್ಸಿಗೆ ವಯಸ್ಸಾಗಿಲ್ಲ. ಅಧಿಕಾರದ ಅವಧಿಯಲ್ಲಿ ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ. ಕ್ಯಾಬಿನೇಟ್ ಸಚಿವ ಸ್ಥಾನ ಸಿಕ್ಕಿರುವುದರಿಂದ ಹೆಚ್ಚು ಸಂಚಾರ, ಸಭೆಗಳಿಗೆ ಹಾಜರಾತಿ ಇರುವುದು ಹೆಚ್ಚಿರುತ್ತದೆ. ಇದರ ಮಧ್ಯದಲ್ಲಿ ಕ್ಷೇತ್ರದ ಪ್ರತಿ ಹೋಬಳಿಯಲ್ಲಿ ಒಂದೊಂದು ದಿನ ಇದ್ದು ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದರು.
ನನಗೆ ಸಲ್ಲಿಸಿದ ಸನ್ಮಾನ ಮತದಾರರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಸಲ್ಲುತ್ತದೆ. ಅವರ ಶ್ರಮದ ಫಲವಾಗಿ ನಾನು ಇಂದು ನಿಮ್ಮ ಮುಂದೆ ಸಚಿವನಾಗಿ ನಿಂತಿದ್ದೇನೆ. ಚುನಾವಣೆ ಫಲಿತಾಂಶದ ನಂತರ ನಿರಂತರ ತಿರುಗಾಟದಲ್ಲಿನ ದಣಿವಿನ ಮಧ್ಯದಲ್ಲಿ ನಾನು ಸಿಂದಗಿ ಪಟ್ಟಣಕ್ಕೆ ಬಂದಿದ್ದೇನೆ. ಕಾರ್ಯಕ್ರಮದಲ್ಲಿ ಸೇರಿದ ಜನಸ್ತೋಮ ನೋಡಿ ನನ್ನ ದಣಿವು ಮಾಯವಾಗಿ ಉತ್ಸಾಹ ತುಂಬಿದೆ ಎಂದರು.
ಮನಗೂಳಿ ಮನೆತನದ ಮೇಲೆ ಇಟ್ಟಿರುವ ವಿಶ್ವಾಸ ನಾವು ಎಂದು ಕಳೆದುಕೊಳ್ಳುವುದಿಲ್ಲ. ನಿಮ್ಮ ಆಶೀರ್ವಾದ ಸದಾ ಮನಗೂಳಿ ಮನೆತನದ ಮೇಲೆ ಇರಲಿ. ನನ್ನ ಮಗ ಅಶೋಕ ಮನಗೂಳಿ ಮೇಲೆ ನಿಮ್ಮ ಆಶೀರ್ವಾದವಿರಲಿ ಎಂದು ಕೋರಿದರು.
ನನ್ನ ಅಧಿಕಾರದ ಅವಧಿಯಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡುವುದಿಲ್ಲ. ನಿಮ್ಮ ಸಮಸ್ಯೆಗಳಿಗೆ ನಾನು ನೇರವಾಗಿ ಸ್ಪಂದಿ ಸುತ್ತೇನೆ. ನಿಮ್ಮ 2 ಭಾವಚಿತ್ರಗಳು, ಆಧಾರ್ ಕಾರ್ಡ್ ಝರಾಕ್ಸ್ ಪ್ರತಿಯೊಂದಿಗೆ ಮೊಬೈಲ್ ನಂ. ನೀಡಿ. ನಿಮಗೆ ಗುರುತಿನ ಚೀಟಿ ನೀಡಲಾಗುವುದು. ಯಾವುದೇ ಇಲಾಖೆ ಕೆಲಸವಿರಲಿ ಅಧಿಕಾರಿಗಳನ್ನು ಕರೆಸಿ ನಿಮ್ಮ ಕೆಲಸ ಮಾಡುತ್ತೇನೆ. ನಿಮ್ಮಿಂದ ಯಾವುದೇ ಫಲಾಪೇಕ್ಷೆ ಪಡೆಯದೇ ಕೆಲಸ ಮಾಡುವ ಮೂಲಕ ನಿಮ್ಮ ಋಣತೀರಿಸಲಾಗುವುದು ಎಂದರು.
ಮಾಜಿ ಸಚಿವ ಬಿ.ಎಸ್. ಪಾಟೀಲ (ಸಾಸನೂರ) ಅವರ ಅಗಲಿಕೆ ನಮಗೆ ದುಖಃ ತಂದಿದೆ. ಅವುರ ನನ್ನ ಒಡನಾಡಿ. ನನಗಿಂತ 3 ವರ್ಷ ದೊಡ್ಡವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದರು. ಶಿವಪ್ಪಗೌಡ ಬಿರಾದಾರ, ಗುರಣ್ಣಗೌಡ ಬಿರದಾರ ನಾಗಾವಿ ಬಿ.ಕೆ., ತಮ್ಮನಗೌಡ ಪಾಟೀಲ, ಧರ್ಮಪತ್ನಿ ಸಿದ್ದಮ್ಮ ಮನಗೂಳಿ, ಅಶೋಕ ಮನಗೂಳಿ, ಡಾ| ಮುತ್ತು ಮನಗೂಳಿ, ಸಿದ್ದರಾಮ ಪಾಟೀಲ, ಉಮೇಶ ಜೋಗುರ, ರಾಜಶೇಖರ ಕೂಚಬಾಳ, ಅರವಿಂದ ಹಂಗರಗಿ, ಸಿದ್ದಣ್ಣ ಚೌಧರಿ ಕನ್ನೊಳ್ಳಿ, ಶೈಲಾ ಸ್ಥಾವರಮಠ, ಯಾಕೂಬ ನಾಟೀಕಾರ, ಮುತ್ತು ಮುಂಡೇವಾಡಗಿ, ಮುತ್ತು ಸೊನ್ನದ, ಸಲಿಂ ಜುಮನಾಳ, ರಮೇಶ ಹೂಗಾರ, ಅರವಿಂದ ಹೂಗಾರ, ಶಂಕರ ಹೂಗಾರ
ಸೇರಿದಂತೆ ಕ್ಷೇತ್ರದ ಮತದಾರರು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ