ಎರಡನೇ ದಿನವೂ “ಮೋದಿ ಮೋದಿ’ ಘೋಷಣೆ!
Team Udayavani, Feb 26, 2018, 3:05 PM IST
ವಿಜಯಪುರ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜಿಲ್ಲೆಯ ಪ್ರವಾಸದ ಮೊದಲ ದಿನದ ಕಾರ್ಯಕ್ರಮಗಳಲ್ಲಿ “ಮೋದಿ ಮೋದಿ’ ಎಂದು ಘೋಷಣೆ ಕೂಗಿ ಮುಜುಗುರ ಉಂಟು ಮಾಡಿದ್ದ ಮೋದಿ ಅಭಿಮಾನಿಗಳು ಎರಡನೇ ದಿನವೂ ಅದನ್ನೇ ಮುಂದುವರಿಸಿದರು. ಆದರೆ ಸಚಿವ ಎಂ.ಬಿ. ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಬಲಿಗರು “ರಾಹುಲ್ ಗಾಂಧಿಗೆ ಜೈ’ ಎಂದು ಘೋಷಣೆ ಕೂಗಿ ತಿರುಗೇಟು ನೀಡಿದರು.
ಬರಮುಕ್ತ ವಿಜಯಪುರ ಯೋಜನೆ ಜಾಗೃತಿಗಾಗಿ ಎರಡನೇ ಹಂತದ ವೃಕ್ಷಥಾನ್ ಸ್ಪರ್ಧೆಗೆ ರವಿವಾರ ಗೋಲಗುಮ್ಮಟ
ಆವರಣದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. 5ಕಿ.ಮೀ. ಸ್ಪರ್ಧೆಗೆ ಚಾಲನೆ ನೀಡಲು ಆಗಮಿಸಿದ್ದ ರಾಹುಲ್ ಗಾಂಧಿ ಸ್ಪರ್ಧಿಗಳ ಕೈ ಕುಲುಕಲು ಅವರತ್ತ ತೆರಳಿದಾಗ ಸ್ಪರ್ಧಿಗಳು “ಮೋದಿ ಮೋದಿ’ ಎಂದು ಕೂಗಿ ಮುಜುಗುರ ಉಂಟು ಮಾಡಿದರು.
ಈ ಹಂತದಲ್ಲಿ ರಾಹುಲ್ ಗಾಂಧಿ ಜೊತೆಗಿದ್ದ ಕಾರ್ಯಕ್ರಮದ ರೂವಾರಿ ಸಚಿವ ಡಾ| ಎಂ.ಬಿ. ಪಾಟೀಲ “ರಾಹುಲ್ ಗಾಂಧಿ ಅವರಿಗೆ ಜಯವಾಗಲಿ’ ಎಂದು ಕೂಗಿ ತಿರುಗೇಟು ನೀಡಿದರು. ನಿರೂಪಕರು ಮೈಕ್ ಮೂಲಕ ಈ ಘೋಷಣೆ ಕೂಗಿದಾಗ ರಾಹುಲ್ ಬೆಂಬಲಿಗರಿಂದ ಜೈ ಜೈ ಎಂಬ ಪ್ರತಿಕ್ರಿಯೆ ಬರುತ್ತಿತ್ತು. ನಂತರ ಸ್ವತಃ ಸಚಿವ ಎಂ.ಬಿ. ಪಾಟೀಲ ಅವರೇ ಮೈಕ್ ಹಿಡಿದು ರಾಹುಲ್ ಗಾಂಧಿ ಅವರಿಗೆ ಜೈ ಎಂದು ಘೋಷಣೆ ಕೂಗಿ “ಮೋದಿ ಮೋದಿ’ ಘೋಷಣೆ ಕೂಗುತ್ತಿದ್ದವರ ಧ್ವನಿ ಕೊಂಚ ಮಟ್ಟಿಗೆ ತಗ್ಗಿಸಿದರು.
ಬಳಿಕ ವೇದಿಕೆ ಏರಿದ ರಾಹುಲ್ ಗಾಂಧಿ ಗೋಲಗುಂಬಜ್ ಮ್ಯಾರಥಾನ್ ಓಟಕ್ಕೆ ಹಸಿರು ನಿಶಾನೆ ತೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್ 500 ಕೋಟಿ ರೂ. ಖರ್ಚು’