ಆಟೋಗೆ ಬಂತು ಡಿಜಿಟಲ್‌ ಮೀಟರ್‌


Team Udayavani, Aug 4, 2018, 12:09 PM IST

vij-2.jpg

ವಿಜಯಪುರ: ಐತಿಹಾಸಿಕ ವಿಜಯಪುರ ನಗರ ಮಹಾನಗರ ಪಾಲಿಕೆಯಾಗಿ ಮೇಲೆರ್ಜೆಗೆ ಏರಿದ ನಾಲ್ಕು ವರ್ಷಗಳ ಬಳಿಕ ನಗರದಲ್ಲಿ ಓಡಾಡುವ ಮೀಟರ್‌ ಅಳವಡಿಕೆ ಆಟೋಗಳು ಓಡಾಟ ಆರಂಭಿಸಿವೆ. ಅಚ್ಚರಿಯ ವಿಷಯ ಎಂದರೆ ಕಳೆದ ಎರಡು ತಿಂಗಳಿಂದ ನಗರದಲ್ಲಿ ಸಾವಿರಕ್ಕೂ ಮಿಕ್ಕ ಹೊಸ ಆಟೋಗಳಿಗೆ ಮೀಟರ್‌ ಅಳವಡಿಸಿದ್ದು, ಒಂದೇ ಒಂದು ಆಟೋ ಮೀಟರ್‌ ಬಳಸಿ ಪ್ರಯಾಣಿಕರು ಸಂಚಾರ ಮಾಡಿಲ್ಲ, ಬಾಡಿಗೆ ನೀಡಿಲ್ಲ. ಹಳೆಯ ಪದ್ಧತಿಯಲ್ಲೇ ಓಡಾಟ ಆರಂಭಿಸಿವೆ.

ವಿಜಯಪುರ ಮಹಾನಗರದಲ್ಲಿ ಈಗಾಗಲೇ ಹಳೆಯ ಆಟೋ ಹಾಗೂ ಟಂಟಂ ಸೇರಿ 4,468 ಆಟೋಗಳಿದ್ದು ಯಾವ ಆಟೋಕ್ಕೂ ಮೀಟರ್‌ ಅಳವಡಿಕೆ ಇಲ್ಲ. ಬದಲಾಗಿ ನಗರದ ಮಹಾತ್ಮ ಗಾಂಧೀಜಿ ವೃತ್ತವನ್ನು ಕೇಂದ್ರೀಕರಿಸಿಕೊಂಡು
ನಗರದ ಪ್ರಮುಖ ರಸ್ತೆಯಲ್ಲಿ ನಿಗದಿತ ಯಾವುದೇ ಸ್ಥಳಕ್ಕೆ ಪ್ರಯಾಣಿಸಿದರೂ ಕೇವಲ 10 ರೂ. ನಿಗದಿತ ನಿಖರ ಬಾಡಿಗೆ
ಇದೆ. ಪ್ರಮುಖ ರಸ್ತೆಯ ಸಂಚಾರಕ್ಕೆ 10 ರೂ. ನೀಡಿದರೂ, ಬಡಾವಣೆಯಲ್ಲಿ ಹೋಗಲು ಆಟೋ ಚಾಲಕರು ಕೇಳಿದಷ್ಟು
ಹೆಚ್ಚಿನ ಹಣ ನೀಡುವ ವ್ಯವಸ್ಥೆ ಇದೆ.

ಇದೀಗ ಮೇ ತಿಂಗಳಿಂದ ಮಹಾನಗರದಲ್ಲಿ ಹೊಸದಾಗಿ ಆಟೋ ನೋಂದಣಿಗೆ ಸರ್ಕಾರ ಡಿಜಿಟಲ್‌ ಮೀಟರ್‌ ಅಳವಡಿಕೆ ಕಡ್ಡಾಯ ಮಾಡಿದೆ. ಹೀಗಾಗಿ ಕಳೆದ ಎರಡು ತಿಂಗಳಿಂದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ 1050 ಹೊಸ ಆಟೋಗಳು ನೋಂದಣಿ ಮಾಡಿ, ಡಿಜಿಟಲ್‌ ಮೀಟರ್‌ ಅಳವಡಿಸಿಕೊಂಡಿವೆ. ಜೂನ್‌ ಆರಂಭದಿಂದಲೇ ಡಿಜಿಟಲ್‌ ಮೀಟರ್‌ ಆಟೋ ಓಡಾಡುತ್ತಿದ್ದರೂ ಒಬ್ಬನೇ ಪ್ರಯಾಣಿಕ ಮೀಟರ್‌ ಶುಲ್ಕ ಭರಿಸಿ ಓಡಾಡಿಲ್ಲ.
 
ಮೀಟರ್‌ ಅಳವಡಿಕೆ ಮಾಡಿಕೊಂಡಿರುವ ಆಟೋ ಹತ್ತಿದ ಪ್ರಯಾಣಿಕರು ಮೊದಲ 1.5 ಕಿ.ಮೀ. 15 ರೂ. ಹಾಗೂ ಮೊದಲ 3 ಕಿ.ಮೀ. 25 ರೂ. ಬಾಡಿಗೆ ಭರಿಸುವ ಎರಡು ಹಂತದಲ್ಲಿ ನಂತರದ ಪ್ರತಿ ಕಿ.ಮೀ. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಈ ದರ ಒಂದೂವರೆ ಪಟ್ಟಾಗುತ್ತದೆ. ಅಂದರೆ ಕ್ರಮವಾಗಿ 22.50 ರೂ. ಹಾಗೂ 37.50 ರೂ. ಭರಿಸಬೇಕು ಎಂದು ನಿಗದಿ ಮಾಡಿವೆ.

ಹೊಸ ಆಟೋ ಕೊಂಡು ನೋಂದಣಿ ಮಾಡಿಸುವಾಗ ಡಿಜಿಟಲ್‌ ಮೀಟರ್‌ ಅಳವಡಿಕೆ ಕಡ್ಡಾಯವಾಗಿದೆ. ಈ ಕಾರಣಕ್ಕೆ ಮೀಟರ್‌ ಅಳವಡಿಕೆ ಅನಿವಾರ್ಯವಾಗಿದೆ. ಪ್ರಯಾಣಿಕರು ಈಗಿರುವ 10 ರೂ. ಚಾರ್ಜ್‌ ನೀಡುವುದೇಕ್ಕೇ ಜಗಳ ತೆಗೆಯುತ್ತಿದ್ದು, ಮೀಟರ್‌ ಚಾರ್ಜ್‌ ನೀಡಲು ಒಪ್ಪುತ್ತಿಲ್ಲ. ಹೀಗಾಗಿ ಮೀಟರ್‌ ಅಳವಡಿಕೆ ಸಾಂಕೇತಿಕವಾಗಿದ್ದು, ಪ್ರಯಾಣಿಕರಿಗೂ ಇದರಿಂದ ಒಳಿತಾಗಿಲ್ಲ, ನಮಗೂ ಇದರಿಂದ ಲಾಭವಾಗಿಲ್ಲ ಎಂಬುದು ಆಟೋ ಚಾಲಕರ ಗೊಣಗಾಟ. 

ವಿಜಯಪುರ ಒಟ್ಟು ನಗರದ ಒಳ ಓಡಾಟವೇ 7 ಕಿ.ಮೀ. ಇತಿಮಿತಿಯಲ್ಲಿದೆ. ಹೆಸರಿಗೆ ನಗರದಂತಿರುವ ವಿಜಯಪುರದ
ಬಡವರಿಗೆ ಅದರಲ್ಲೂ ನಿತ್ಯವೂ ಕೂಲಿಗೆ ಓಡಾಡುವ ಬಡ ಪ್ರಯಾಣಿಕರಿಗೆ ಕನಿಷ್ಠ 25 ರೂ. ಮೀಟರ್‌ ಚಾರ್ಜ್‌ ನೀಡುವಷ್ಟು ಶಕ್ತಿ ಖಂಡಿತಾ ಇಲ್ಲ. ಮಹಾನಗರ ಪಾಲಿಕೆ ಆಗಿದ್ದರೂ ವಿಜಯಪುರ ಮಹಾನಗರ ಮಾತ್ರವಲ್ಲ ಇಡಿ
ಜಿಲ್ಲೆಯೇ ಬಡವರಿಂದ ಕೂಡಿದೆ. ಈಗಿರುವ 10 ರೂ. ಬಾಡಿಗೆ ನೀಡುವುದಕ್ಕೆ ಗೊಣಗುತ್ತಿದ್ದು ಮೀಟರ್‌ ಅಳವಡಿಕೆ ಬಾಡಿಕೆ ನೀಡಲು ಸಾಧ್ಯವಿಲ್ಲ ಎಂಬುದು ಪ್ರಯಾಣಿಕರ ದೂರು.

ಟಾಪ್ ನ್ಯೂಸ್

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್‌ 500 ಕೋಟಿ ರೂ. ಖರ್ಚು’

Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್‌ 500 ಕೋಟಿ ರೂ. ಖರ್ಚು’

Congress ಗೆ ದೇಶದಲ್ಲಿ 40 ಸ್ಥಾನ ಸಿಗೋದು ಕಷ್ಟ, ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಸ್ಪಷ್ಟ

Congress ಗೆ ದೇಶದಲ್ಲಿ 40 ಸ್ಥಾನ ಸಿಗೋದು ಕಷ್ಟ, ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಸ್ಪಷ್ಟ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.