ರಕ್ತರಹಿತ ಬಕ್ರೀದ್, ಪಟಾಕಿ ಇಲ್ಲದ ಹೊಸವರ್ಷವೂ ಬರಲಿ: ಪಟಾಕಿ ನಿಷೇಧಕ್ಕೆ ಯತ್ನಾಳ ಆಕ್ರೋಶ
Team Udayavani, Nov 9, 2020, 8:50 AM IST
ವಿಜಯಪುರ: ರಾಜ್ಯದಲ್ಲಿ ಕೋವಿಡ್ ನಿಗ್ರಹಕ್ಕಾಗಿ ರಾಜ್ಯ ಸರ್ಕಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಲು ಮುಂದಾಗಿದೆ. ಇದಕ್ಕೆ ಆಡಳಿತ ಪಕ್ಷ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿರುವ ಯತ್ನಾಳ, ಹಿಂದೂಗಳಿಗೆ ದೀಪಾವಳಿ, ದಸರಾ, ಗಣೇಶ ಹಬ್ಬಗಳಂದು ಸಾಮೂಹಿಕವಾಗಿ ಸೇರುತ್ತಾರೆ. ಆಗೆಲ್ಲ ಶಬ್ಧ ರಹಿತ ದೀಪಾವಳಿ, ಪರಿಸರ ಸ್ನೇಹಿ ಗಣೇಶೋತ್ಸವ ಎಂದೆಲ್ಲ ಬೋಧನೆ ಮಾಡಲಾಗುತ್ತದೆ. ಇದೇ ರೀತಿ ರಕ್ತರಹಿತ ಬಕ್ರೀದ್, ನಿಶಬ್ಧ ಶುಕ್ರವಾರ, ಪಟಾಕಿ ಇಲ್ಲದ ಡಿಸೆಂಬರ್ 31 ರಾತ್ರಿ ಜಾರಿಗೆ ಬರಲಿ. ಧ್ವನಿವರ್ಧಕ ಬಳಸಿ ಕೂಗುವ, ರಸ್ತೆಯಲ್ಲಿ ನಮಾಜು ಮಾಡುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:5 ಲಕ್ಷಕ್ಕಾಗಿ ಯುವಕನಿಂದಲೇ ಅಪಹರಣ ಹೈಡ್ರಾಮ: ಹೋಂ ವರ್ಕ್ ಇಷ್ಟವಿಲ್ಲದೆ ಸಿನಿಮಾ ಕಥೆ ಕಟ್ಟಿದ
ನಾವು ಮನೆಯಲ್ಲೇ ದೀಪ ಹಚ್ಚುತ್ತೇವೆ. ಅವರು ಸ್ಪೀಕರ್ ಇಲ್ಲದೆ ನಮಾಜು ಮಾಡಲಿ, ರಸ್ತೆ ಮೇಲೆ ಬೇಡ ಎಂದೆಲ್ಲಾ ಸಲಹೆ ನೀಡುವ ಮೂಲಕ ದೀಪಾವಳಿ ಪಟಾಕಿ ನಿಷೇಧಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.