ಅನಾಥ ಅಸ್ಥಿಗಳಿಗೆ ಯತ್ನಾಳ ಕೃಷ್ಣಾರ್ಪಣ


Team Udayavani, Jun 12, 2021, 10:19 AM IST

ಅನಾಥ ಅಸ್ಥಿಗಳಿಗೆ ಯತ್ನಾಳ ಕೃಷ್ಣಾರ್ಪಣ

ವಿಜಯಪುರ: ಕೋವಿಡ್‌ ಎಂಬ ಸಾಂಕ್ರಾಮಿಕ ಮಹಾರೋಗ ರಕ್ತ ಸಂಬಂಧಗಳಿದ್ದರೂ ಅಂತ್ಯ ಸಂಸ್ಕಾರಕ್ಕೂ ಬಾರದಂತೆ ಮಾಡಿದ್ದು ಹಲವು ಪ್ರಕರಣದಲ್ಲಿ ಸಂಬಂಧಗಳಿಗೆ ಕೊಳ್ಳಿ ಇಟ್ಟಿದೆ. ಇದಕ್ಕೆ ಇಂಬು ನೀಡುವಂತೆ ವಾರಸುದಾರರಿದ್ದರೂ ಜಿಲ್ಲೆಯಲ್ಲಿ ಮೃತಪಟ್ಟವರಲ್ಲಿ ನೂರಕ್ಕೂ ಹೆಚ್ಚು ಜನರ ಅಸ್ಥಿಗಳನ್ನು ಪಡೆಯಲು ವಾರಸುದಾರರು ಮುಂದೆ ಬಂದಿಲ್ಲ. ಪರಿಣಾಮ ಇದೀಗ ಶಾಸಕ ಯತ್ನಾಳ ಅವರೇ ಸಾಮೂಹಿಕ ಅಸ್ಥಿ ವಿಸರ್ಜನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಕಳೆದ ಎರಡು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಕೋವಿಡ್‌ ಹಾಗೂ ಇತರೆ ಕಾಯಿಲೆಗಳಿಂದ ಮೃತಪಟ್ಟವರ ಸಂಖ್ಯೆ ಸುಮಾರು 500 ಮೀರುತ್ತದೆ. ಇದರಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನರ ಸಂಬಂಧಿ ಗಳಿದ್ದರೂ ಸ್ಮಶಾನಗಳ ಚಿತಾಗಾರದಲ್ಲಿರುವ ಅಸ್ಥಿ ಪಡೆಯಲು ಮುಂದೆ ಬಂದಿಲ್ಲ. ಹೀಗಾಗಿ ವಿವಿಧ ಸ್ಮಶಾನಗಳಲ್ಲಿ ಅನಾಥವಾಗಿದ್ದ ಮೃತರ ಅಸ್ಥಿ ಕುಂಡಗಳನ್ನು ಶಾಸ್ತ್ರೋಕ್ತವಾಗಿ ಕೃಷ್ಣಾ ನದಿಯಲ್ಲಿ ವಿಸರ್ಜಿಸಲು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವ ವಹಿಸಿದ್ದಾರೆ.

ಕಂದಾಯ ಸಚಿವ ಆರ್‌.ಅಶೋಕ ನೇತೃತ್ವದಲ್ಲಿ ಈಚೆಗೆ ಅನಾಥವಾದ ಅಸ್ಥಿ ಕುಂಡಗಳಿಗೆ ರಾಜ್ಯ ಸರ್ಕಾರದಿಂದಲೇ ಸಾಮೂಹಿಕ ಅಸ್ಥಿ ವಿಸರ್ಜನೆ ಮಾಡಲಾಗಿತ್ತು. ಸರ್ಕಾರದ ಮಾರ್ಗಸೂಚಿಯಂತೆ ವಿಜಯಪುರ ಜಿಲ್ಲೆಯಲ್ಲೂ  ಅನಾಥವಾಗಿರುವ ಅಸ್ಥಿಗೆ ಮುಕ್ತಿ ಕಾಣಿಸಲು ಜಿಲ್ಲಾಡಳಿತ ಆಯಾ ಸ್ಥಳೀಯ ಸಂಸ್ಥೆಗಳ ಮೂಲಕ ಸಿದ್ಧತೆ ಮಾಡಿಕೊಂಡಿತ್ತು. ವಿಜಯಪುರ ನಗರ ಪಾಲಿಕೆ ವ್ಯಾಪ್ತಿಯಲ್ಲೂ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ವಿವಿಧ ಸ್ಮಶಾನಗಳಲ್ಲಿ ಅನಾಥವಾಗಿರುವ ಅಸ್ಥಿಗಳ ವಿವರ ಸಂಗ್ರಹಿಸಿದೆ.

ಆದರೆ ಶಾಸಕ ಯತ್ನಾಳ ಅವರು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಅವರೊಂದಿಗೆ ಸೇರಿ ಅನಾಥವಾಗಿರುವ ಅಸ್ಥಿ ಕುಂಡಗಳಿಗೆ ಶಾಸ್ತ್ರೋಕ್ತ ವಿಸರ್ಜನೆಗೆ ಮುಂದಾಗಿದ್ದಾರೆ. ಇದಕ್ಕಾಗಿ ಲಕ್ಷಾಂತರ ರೂ. ವೆಚ್ಚವಾಗುತ್ತಿದ್ದರೂ, ಎಲ್ಲ ಅಸ್ಥಿಗಳಿಗೂ ಹಿಂದೂ ಧಾರ್ಮಿಕ ವಿ ಧಿ ವಿಧಾನಗಳಂತೆ ಜೀವನದಿ ಕೃಷ್ಣೆಯಲ್ಲಿ ಅರ್ಪಣ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಆಲಮಟ್ಟಿ ಬಳಿಯ ಕೃಷ್ಣಾ ನದಿಗೆ ಯಲಗೂರು ತೀರದಲ್ಲಿ ಅಸ್ಥಿ ವಿಸರ್ಜನೆಗೆ ಸ್ಥಳ ಗುರುತಿಸಿದ್ದು, ಸ್ಥಳೀಯ ಗ್ರಾಪಂ ಆಡಳಿತ ಸಾಮೂಹಿಕ ಅಸ್ಥಿ ವಿಸರ್ಜನೆ ಕಾರ್ಯಕ್ರಮಕ್ಕೆ ಸ್ಥಳ ಸ್ವತ್ಛ ಮಾಡಿಕೊಡಲು ಮುಂದಾಗಿದೆ. ಮೃತರ ಅನಾಥ ಅಸ್ಥಿಗಳ ವಿಸರ್ಜನೆಗೆ ವಿಜಯಪುರ ನಗರ ಹಾಗೂ ಯಲಗೂರ ಗ್ರಾಮದ ಅರ್ಚಕರು ಆಗಮಿಸುತ್ತಿದ್ದಾರೆ.

ರವಿವಾರ ಸಾಮೂಹಿಕವಾಗಿ ಅಸ್ಥಿ ವಿಸರ್ಜನೆಗೆ ನಗರದ ದೇವಗಿರಿ ಸ್ಮಶಾನದಲ್ಲಿನ 56, ಮನಗೂಳಿ ರಸ್ತೆಯ ಸ್ಮಶಾನದಲ್ಲಿ 3, ಬಬಲೇಶ್ವರ ರಸ್ತೆಯ ಸ್ಮಶಾನದಲ್ಲಿ 2 ಅನಾಥ ಅಸ್ಥಿ ಕುಂಡಗಳನ್ನು ಸಂಗ್ರಹಿಸಲಾಗಿದೆ. ಅನಾಥ ಅಸ್ತಿಗಳ ಸಾಮೂಹಿಕ ವಿಸರ್ಜನೆ ವಿಷಯ ತಿಳಿದ ಇಂಡಿ ಭಾಗದ ಜನರು ತಮ್ಮ ಬಳಿಯೂ ಅನಾಥವಾಗಿರುವ 35 ಅಸ್ಥಿ ಕುಂಡಗಳಿದ್ದು, ಶಾಸಕ ಯತ್ನಾಳ ನೇತƒತ್ವದ ಕಾರ್ಯಕ್ರಮದಲ್ಲಿ ವಿಸರ್ಜನೆಗೆ ಮನವಿ ಮಾಡಿದೆ. ಸಾಮೂಹಿಕ ವಿಸರ್ಜನೆಗೆ ಸಿದ್ಧವಾಗಿರುವ ಅಸ್ಥಿ ಕುಂಡಗಳಲ್ಲಿ ಬಹುತೇಕ ಕುಂಡಗಳಲ್ಲಿ ಮೃತರ ವಾರಸುದಾರರು ಇಲ್ಲದವುಗಳೇನಲ್ಲ. ಕೆಲವನ್ನು ಹೊರತು ಪಡಿಸಿದರೆ ಎಲ್ಲ ಅಸ್ಥಿಗಳಿಗೂ ವಾರಸುದಾರಿದ್ದರೂ, ಕೋವಿಡ್‌ ಸೋಂಕಿನ ಭೀತಿಯ ಕಾರಣಕ್ಕೆ ಅಸ್ಥಿಗಳನ್ನು ಪಡೆಯಲು ಮುಂದಾಗಿಲ್ಲ. ಮತ್ತೆ ಕೆಲವು ಅಸ್ಥಿ ಪಡೆಯುವಲ್ಲಿ ಲಾಕ್‌ಡೌನ್‌ ಕೂಡ ಕಾರಣವಾಗಿದೆ ಎನ್ನುವ ಮಾತಿದೆ. ಕೆಲವರು ಆರ್ಥಿಕ ಸಂಕಷ್ಟದಿಂದ ಅಸ್ಥಿ ಸಂಗ್ರಹದ ಸಹವಾಸಕ್ಕೆ ಮುಂದೆ ಬಂದಿಲ್ಲ ಎನ್ನಲಾಗುತ್ತಿದೆ. ಹೀಗೆ ವಿವಿಧ ಕಾರಣಗಳಿಗೆ ವಾರಸುದಾರರಿದ್ದರೂ ತಮ್ಮ ಕುಟುಂಬದವರ ಅಸ್ಥಿಗೆ ಮುಕ್ತಿ ಕಾಣಿಸಲು ವಿಸರ್ಜನೆ ಮುಂದೆ ಬಂದಿಲ್ಲ.

ಸರ್ಕಾರದ ಮಾರ್ಗಸೂಚಿಯಂತೆ ವಾರಸುದಾರರಿಲ್ಲದ ಅಸ್ಥಿಗಳ ವಿಸರ್ಜನೆಗೆ ಪಾಲಿಕೆಯಿಂದ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಶಾಸಕರು,ವೂಡಾ ಅಧ್ಯಕ್ಷರು ಸ್ವಂತ ಹಣದಲ್ಲಿ ಅಸ್ಥಿಗಳನ್ನು ಸಾಮೂಹಿಕ ವಿಸರ್ಜನೆ ಮಾಡಲು ಮುಂದಾಗಿರುವ ಕಾರಣ, ಅವರಿಗೆ ಬಿಡಲಾಗಿದೆ. ನಗರದ ವಿವಿಧ ಸ್ಮಶಾನಗಳಲ್ಲಿರುವ ಅನಾಥ ಅಸ್ಥಿ ಕುಂಡಗಳ ಪರಿಶೀಲನೆ ನಡೆಸಿದ್ದೇವೆ. –ಹರ್ಷಾ ಶೆಟ್ಟಿ, ಪೌರಾಯುಕ್ತ,  ಮಹಾನಗರ ಪಾಲಿಕೆ ವಿಜಯಪುರ

ವಾರಸುದಾರರಿದ್ದರೂ ಕಾರಣಾಂತರಗಳಿಂದ ಹಲವರು ಅಸ್ಥಿಗಳನ್ನು ಸಂಗ್ರಹಿಸಲು ಹಾಗೂ ಅಸ್ಥಿ ಕುಂಡ ಪಡೆಯಲು ಮುಂದೆ ಬಂದಿಲ್ಲ. ಹೀಗಾಗಿ ಶಾಸಕ ಯತ್ನಾಳ ಅವರ ನೇತೃತ್ವದಲ್ಲಿ ಹಿಂದೂ ಧಾರ್ಮಿಕ ವಿಧಿ ವಿಧಾನದಂತೆ ಕೃಷ್ಣೆಯಲ್ಲಿ ನಾವೇ ಸಾಮೂಹಿಕ ಅಸ್ಥಿ ವಿಸರ್ಜನೆ ಮಾಡಲು ಮುಂದಾಗಿದ್ದೇವೆ. ರವಿವಾರ ಬೆಳಗ್ಗೆ ಯಲಗೂರ ಬಳಿ ಅನಾಥ ಅಸ್ಥಿಗಳ ವಿಸರ್ಜನೆಗೆ ನಡೆಯಲಿದೆ.ಶ್ರೀಹರಿ ಗೊಳಸಂಗಿ ಅಧ್ಯಕ್ಷರು, ವೂಡಾ, ವಿಜಯಪುರ

ಶವಗಳನ್ನು ಚಿತಾಗಾರದಲ್ಲಿ ಚಿತೆ ಮಾಡಲು ಹಾಗೂ ಚಿತಾಭಸ್ಮಗಳನ್ನು ಪಡೆಯಲು ವಾರಸುದಾರರ ಮೃತರ ಹಾಗೂ ವಾರಸುದಾರರ ಆಧಾರ್‌ ಕಾರ್ಡ್‌ ಸಂಖ್ಯೆ ಪಡೆಯಲಾಗುತ್ತದೆ. ಕಳೆದ ಎರಡು ತಿಂಗಳಲ್ಲಿ ಕೋವಿಡ್‌, ಕೋವಿಡ್‌ ರಹಿತ ಸಾವಿನ ಸಂಖ್ಯೆ ಹೆಚ್ಚಿದ್ದರಿಂದ ಹಲವು ಶವಗಳನ್ನು ಆಂಬ್ಯುಲೆನ್ಸ್‌ ಮೂಲಕ ಕಳುಹಿಸಿದಾಗ ಅನಿವಾರ್ಯವಾಗಿ ನಾನೇ ಚಿತೆ ಮಾಡಿದ್ದೇನೆ. ಅಸ್ಥಿ ಸಂಗ್ರಹಿಸಿ ಮೃತರ ಹೆಸರು ಬರೆದು ಕುಂಡದಲ್ಲಿ ಇರಿಸಿದ್ದೇನೆ. ಆದರೆ ಈವರೆಗೆ 50 ಮೃತರ ಅಸ್ಥಿಗಳನ್ನು ಪಡೆಯಲು ಕುಟುಂಬದವರು ಬರದಿದ್ದರಿಂದ ಚಿತಾಗಾರದಲ್ಲೇ ದಾಸ್ತಾನು ಮಾಡಿಟ್ಟಿದ್ದೇನೆ.ಶಂಕರ ಕಾಳೆ ದೇವಗಿರಿ ಚಿತಾಗಾರದ ನೌಕರ, ವಿಜಯಪುರ

 

ಜಿ.ಎಸ್‌. ಕಮತರ

ಟಾಪ್ ನ್ಯೂಸ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.