ಬಿಜೆಪಿ ಶಾಸಕ ಯತ್ನಾಳ ಉತ್ತರ ಕರ್ನಾಟಕದ ರಾಜಕೀಯ ಹುಲಿ: ಜೆಡಿಎಸ್ ಶಾಸಕ ಬಣ್ಣನೆ
Team Udayavani, Nov 2, 2020, 9:20 PM IST
ವಿಜಯಪುರ : ಆಡಳಿತ ಪಕ್ಷದವರಾದರೂ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಮ್ಮ ಭಾಗಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮೂಲಕ ನಮ್ಮ ಭಾಗದ ನಿಜವಾದ ರಾಜಕೀಯ ಹುಲಿ ಎಂದು ಜೆಡಿಎಸ್ ಶಾಸಕರೊಬ್ಬರು ಬಣ್ಣಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಎದುರು ಬಿಜೆಪಿ ಶಾಸಕ ಯತ್ನಾಳ ಅವರನ್ನು ಬಣ್ಣಿಸಿ ಅಚ್ಚರಿ ಮೂಡಿಸಿದ ನಾಗಠಾಣಾ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ, ಉತ್ತರ ಕರ್ನಾಟಕಕ್ಕೆ ಅನ್ಯಾಯ ಆದಾಗಲೆಲ್ಲ ಆಡಳಿತ ಪಕ್ಷದಲ್ಲಿದ್ದರೂ ವರಿಷ್ಠರ ವಿರುದ್ಧ ಶಾಸಕ ಯತ್ನಾಳ ಗಟ್ಟಿ ಧ್ವನಿಯಲ್ಲೇ ಪ್ರಶ್ನಿಸುತ್ತಾರೆ ಎಂದು ಹೊಗಳಿದರು.
ಇದೀಗ ಅತಿವೃಷ್ಟಿ, ಪ್ರವಾಹ ಬಾಧಿತ ಸಂತ್ರಸ್ತರಿಗೆ ಪರಿಹಾರ ನೀಡಿಕೆಯಲ್ಲಿ ರಾಜ್ಯ ಸರ್ಕಾಋ ತಾರತ್ಮ ಮಾಡುತ್ತಿದೆ. ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ 10 ಸಾವಿರ ರೂ., ಬೆಂಗಳೂರು ಪ್ರದೇಶದ ಬಾಧಿತರಿಗೆ 25 ಸಾವಿರ ರೂ. ಪರಿಹಾರ ನೀಡಿ ಅನ್ಯಾಯ ಮಾಡುತ್ತಿದೆ. ಸರ್ಕಾರದ ಈ ತಾರತಮ್ಯ ನಿಲುವುಗಳನ್ನು ಖಂಡಿಸುವ ಮೂಲಕ ನಮ್ಮ ಭಾಗದ ಜನರ ಪರವಾಗಿ ಧ್ವನಿ ಎತ್ತಿದ್ದಾರೆ. ಹೀಗಾಗಿ ಯತ್ನಾಳ ಉತ್ತರ ಕರ್ನಾಟಕ ನಿಜವಾದ ರಾಜಕೀಯ ಹುಲಿ ಎಂದು ಬಣ್ಣಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ