ಯಾರೋ ಮಾಡಿದ ಯೋಜನೆಗಳಿಗೆ ಕಾಯಿ ಒಡೆದು ಪೂಜೆ ಸಲ್ಲಿಸಿದ್ದೇ ಎಂ.ಬಿ.ಪಾಟೀಲ ಸಾಧನೆ: ಕಟೀಲ್
Team Udayavani, Oct 9, 2020, 2:38 PM IST
ವಿಜಯಪುರ: ಮಾಜಿ ಸಚಿವ ಎಂ.ಬಿ.ಪಾಟೀಲ ಅಧಿಕಾರ ಇದ್ದಾಗ ಗೂಂಡಾಗಿರಿ ರಾಜಕಾರಣ ಮಾಡಿದ್ದೇ ಸಾಧನೆ. ಯಾರೋ ಮಾಡಿದ ಯೋಜನೆಗಳಿಗೆ ಕಾಯಿ ಒಡೆದು ಪೂಜೆ ಸಲ್ಲಿಸಿದ್ದೇ ಇವರು ಮಾಡಿದ ವಿಜಯಪುರ ಜಿಲ್ಲಾ ಪ್ರಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಜಿಲ್ಲೆಯ ಆಲಮಟ್ಟಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಲ ಸಂಪನ್ಮೂಲ ಖಾತೆ, ಗೃಹ ಸಚಿರಾಗಿದ್ದಾಗ ಎಂ.ಬಿ.ಪಾಟೀಲ ಅವರು ಆಡಳಿತದ ಪಾರುಪತ್ಯ, ದಬ್ಬಾಳಿಕೆ ರಾಜಕಾರಣ ಮಾಡಿಯೇ ಹೆಸರಾದವರು. ಗೃಹ ಸಚಿವರಿದ್ದಾಗ ಏನು ಮಾಡಿದ್ದಾರೆ ಗೊತ್ತಲ್ಲ, ಅವರ ಕಥೆ ಏನು ನಮಗೆ ಗೊತ್ತಿದೆ ಎಂದು ಕುಟುಕಿದರು.
ವಿಜಯಪುರ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿ, ಅನುಷ್ಠಾನಕ್ಕೆ ತಂದದ್ದು ಹಿಂದೆ ಅಧಿಕಾರ ನಡೆಸಿದ ನಮ್ಮ ಬಿಜೆಪಿ ಸರ್ಕಾರ ಎಂದರು.
ವಿಜಯಪುರ ಜಿಲ್ಲೆಯ ನೀರಾವರಿ ಯೋಜನೆಗಳಿಗಾಗಿ ಹೋರಾಟ ಮಾಡಿದ್ದು ಮುದ್ದೇಬಿಹಾಳ ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಎಂದು ಪಕ್ಕದಲ್ಲಿ ಕುಳಿತಿದ್ದ ನಡಹಳ್ಳಿ ಅವರನ್ನು ತೋರಿಸಿದರು.
ಇದನ್ನೂ ಓದಿ:ವಠಾರ ಶಾಲೆಯ ನಾಲ್ವರು ಮಕ್ಕಳಿಗೆ ಕೋವಿಡ್ ಪಾಸಿಟಿವ್: ಪೋಷಕರಲ್ಲಿ ಹೆಚ್ಚಿದ ಆತಂಕ
ಅಧಿಕಾರ ಕಳೆದುಕೊಂಡ ಬಳಿಕ ಎಂ.ಬಿ.ಪಾಟೀಲ ಅವರು ಇದೀಗ ವಿಜಯಪುರ ಜಿಲ್ಲೆಯ ನೀರಾವರಿ ನನ್ನ ಕನಸು, ಜಿಲ್ಲೆಯನ್ನು ನೀರಾವರಿ ಮಾಡಿದ್ದೇ ನಾನು, ನನ್ನಿಂದಲೇ ವಿಜಯಪುರ ಜಿಲ್ಲೆ ನೀರು ಕಂಡಿದೆ ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ ಎಂದರು.
ನೀವು ಅಧಿಕಾರದಲ್ಲಿ ಇದ್ದಾಗ ಯಾಕೆ ನೀರಾವರಿ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಿಲ್ಲ. ನೀವು ಸಚಿವರಾಗಿದ್ದಾಗ ಗೂಂಡಾಗಿರಿ ರಾಜಕಾರಣ ಮಾಡಿದ್ದೇ ಸಾಧನೆ. ಇದಕ್ಕಾಗಿಯೇ ಜನರು ನಿಮ್ಮನ್ನು ತಿರಸ್ಕಾರ ಮಾಡಿದ್ದಾರೆ ಎಂದು ಹರಿಹಾಯ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ