ಭಾರತಕ್ಕೆ ಬಂಡವಾಳಶಾಹಿ ವ್ಯವಸ್ಥೆ ಮರಣಾಸ್ತ್ರ
Team Udayavani, Aug 13, 2018, 2:00 PM IST
ವಿಜಯಪುರ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂಡವಾಳಶಾಹಿ ವ್ಯವಸ್ಥೆ ಪ್ರತಿಗಾಮಿಯಾಗಿ ಸಾಮ್ರಾಜ್ಯಸಾಹಿ ಹಂತಕ್ಕೆ ತಲುಪಿದಾಗ ಭಾರತ ಸ್ವತಂತ್ರಗೊಂಡಿತು. ಆಗ ಉದಯೋನ್ಮುಖವಾಗಿ ಬೆಳೆದ ಬಂಡವಾಳಶಾಹಿ ವ್ಯವಸ್ಥೆ ಇದೀಗ ಭಾರತದ ಪಾಲಿಗೆ ಬಂಡವಾಳವಾದ ಮರಣಾಸ್ತ್ರ ಹಂತಕ್ಕೆ ತಲುಪಿದೆ ಎಂದು ಎಸ್ಯುಸಿಐ ಮುಖಂಡ ಕೆ.ಸೋಮಶೇಖರ ಆತಂಕ ವ್ಯಕ್ತಪಡಿಸಿದರು.
ನಗರದಲ್ಲಿ ಜರುಗಿದ ಎಸ್ಯುಸಿಐ ಕಮ್ಯೂನಿಷ್ಟ ಪಕ್ಷದ ವಿಜಯಪುರ ಜಿಲ್ಲಾ ಎರಡನೇ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ವ್ಯವಸ್ಥೆ ಬದಲಾವಣೆಗಳು ಪ್ರಾರಂಭದಲ್ಲಿ ಪ್ರಗತಿಪರವಾಗಿ ವರ್ತಿಸುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆ ವ್ಯಕ್ತಿ ಸ್ವಾತಂತ್ರ್ಯಾ ಸಮಾನತೆ, ಬ್ರಾತೃತ್ವ ಎನ್ನುವ ಪ್ರಗತಿಪರ ಘೋಷಣೆಯೊಂದಿಗೆ ಬಂದಿದ್ದು, ಆ ಸಂದರ್ಭದಲ್ಲಿ ಮಾನವ ಕುಲದ ಉತ್ತಮ ಬೆಳವಣಿಗೆಯಾಗಿತ್ತು. ಭಾರತದಲ್ಲಿ ಪ್ರಜಾಪ್ರಭುತ್ವ ಪೂರ್ಣಾಧಿಕಾರ ಬಂಡವಾಳಶಾಹಿಗಳ ಕೈಗೆ ಸಿಕ್ಕು ನಲುಗುತ್ತಿದೆ ಎಂದು ಕಿಡಿ ಕಾರಿದರು.
ಪ್ರಜೆಗಳಿಂದ ಆಯ್ಕೆಯಾದ ಇಂದಿನ ನಮ್ಮ ಸರಕಾರಗಳು ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಹಾಗೂ ಇನ್ನಿತರ ಹಲವಾರು ಜನ ವಿರೋಧಿ ನೀತಿಗಳು ಜಾರಿಗೊಳಿಸಿ ಬಂಡವಾಳ ಶಾಹಿ ಹಿತಾಸಕ್ತಿ ಕಾಪಾಡುತ್ತಿವೆ. ಇದರಿಂದ
ನಿರುದ್ಯೋಗ, ಬೆಲೆ ಏರಿಕೆ, ಬಡತನ, ಭ್ರಷ್ಟಾಚಾರ, ಅಭದ್ರತೆ, ಅಸಹಿಷ್ಣುತೆ, ಕೋಮುವಾದ, ಮೂಢನಂಬಿಕೆ, ಅವೈಜ್ಞಾನಿಕತೆ, ಅತ್ಯಾಚಾರ, ರೈತರ ಆತ್ಮಹತ್ಯೆಯಂತಹ ಸಮಸ್ಯೆಗಳು ರೈತರು, ಕಾರ್ಮಿಕರು ವಿದ್ಯಾರ್ಥಿ-ಯುವಕರನ್ನು, ಮಹಿಳೆಯರನ್ನು ಒಟ್ಟಾರೆ ಜನಸಾಮಾನ್ಯರನ್ನು ಪೆಡಂಭೂತವಾಗಿ ಕಾಡುತ್ತಿವೆ. ಹಾಗಾಗಿ ಇಂದು ಜನತೆ ಇದೆಲ್ಲದರ ವಿರುದ್ದ ಒಗ್ಗಟ್ಟಾಗಿ ಹೋರಾಟ ಕಟ್ಟಬೇಕಾಗಿದೆ. ಈ ಹೋರಾಟ ಅಂತಿಮವಾಗಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ಹೋಗಬೇಕಾಗಿದೆ ಎಂದರು.
ಸಮಾವೇಶದ ಕೊನೆಯಲ್ಲಿ ನೇಮಕವಾದ ನೂತನ ಜಿಲ್ಲಾ ಸಮಿತಿಗೆ ಪ್ರಗತಿಪರ ಹೋರಾಟ ಕಟ್ಟಲು ಪಕ್ಷದ ಸಂಘಟನೆ ವಿಸ್ತರಿಸಲು ಉತ್ಸಾಹಭರಿತರಾಗಿರಬೇಕು. ಜಿಲ್ಲೆಯಲ್ಲಿ ಎಡಪಂಥಿಯ ವಿಚಾರಗಳು ಗಟ್ಟಗೊಳ್ಳುವಲ್ಲಿ ಅನುಮಾನವಿಲ್ಲ. ವ್ಯವಸ್ಥೆಯಲ್ಲಿರುವ ಹಳೆ ವಿಚಾರಗಳು, ವ್ಯಕ್ತಿವಾದ, ಅಹಂ, ಇವುಗಳನ್ನು ಹೊಡೆದೋಡಿಸಲು ಪ್ರತಿಯೊಬ್ಬರೂ ಪಕ್ಷದ ಆಂತರಿಕ ಹೋರಾಟ ಬೆಳೆಸಲು ಯಾವತ್ತೂ ಜಾಗರೂಕತೆ ವಹಿಸಬೇಕು ಎಂದರು.
ಎಸ್ಯುಸಿಐ ನೂತನ ಜಿಲ್ಲಾ ಕಾರ್ಯದರ್ಶಿ ಭಗವಾನರೆಡ್ಡಿ ಮಾತನಾಡಿ, ಜಿಲ್ಲೆಯಾದ್ಯಂತ ಎಲ್ಲ ತಾಲೂಕುಗಳಲ್ಲಿ ಮುಂದಿನ ದಿನಗಳಲ್ಲಿ ಎಲ್ಲ ರಂಗದ ಸಮಸ್ಯೆ ಗುರುತಿಸಿ ವಿದ್ಯಾರ್ಥಿ-ಯುವಕರನ್ನು-ಮಹಿಳೆಯರನ್ನು-ರೈತರನ್ನು-ಕಾರ್ಮಿಕರನ್ನು ಸಂಘಟಿಸುವ ಕೆಲಸ ಮಾಡುತ್ತೇವೆ. ಭವಿಷ್ಯದ ದಿನಗಳಲ್ಲಿ ಜಿಲ್ಲೆಯಲ್ಲಿ ವೈಚಾರಿಕವಾಗಿ ಸಾಂಸ್ಕೃತಿಕವಾಗಿ ಸಂಘಟನಾತ್ಮಕವಾದ ಬಲಿಷ್ಠ ಹೋರಾಟ ಕಟ್ಟಲು ಪಣ ತೊಡಲಾಗುವುದು ಎಂದರು.
ಜಿಲ್ಲಾ ಸಮಿತಿ ಸದಸ್ಯ ಮಲ್ಲಿಕಾರ್ಜುನ, ಭರತಕುಮಾರ, ಸಿದ್ದಲಿಂಗ ಬಾಗೇವಾಡಿ, ಬಾಳು ಜೇವೂರ, ಎಚ್.ಗೀತಾ, ಸುನೀಲ ಸಿದ್ರಾಮಶೆಟ್ಟಿ, ಶೋಭಾ ಯರಗುದ್ರಿ, ಶಿವಬಾಳಮ್ಮ ಕೊಂಡಗೂಳಿ, ಕಾಶೀಬಾಯಿ ತಳವಾರ, ಸುಮಾ ಜೇವೋರ, ಸುರೇಖಾ, ಆಕಾಶ್, ಕಾವೇರಿ ರಜಪೂತ, ಸಂಗೀತಾ, ದ್ಯಾಮಣ್ಣ ಬಿರಾದರ, ಪ್ರೇಮಾ ಸಿದ್ರಾಮಶೆಟ್ಟಿ, ಅಂಜನಾ ಕುಂಬಾರ, ಮಾಹಾದೇವಿ ಧರ್ಮಶೆಟ್ಟಿ, ಮಹಾದೇವಿ ತೇಲಿ, ಶ್ರೀಕಾಂತ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ