ಕೋವಿಡ್ ಭಯಕ್ಕೆ ಹೆದರಿ ಬಸ್ ಹತ್ತದ ಜನತೆ
Team Udayavani, May 20, 2020, 4:05 PM IST
ಚಡಚಣ: ಬಸ್ ನಿಲ್ದಾಣದಲ್ಲಿ ಜನರಿಗಾಗಿ ಕಾಯುತ್ತಿರುವ ಬಸ್ ಹಾಗೂ ಬಿಕೋ ಎನ್ನುತ್ತಿರುವ ಬಸ್ ನಿಲ್ದಾಣ
ಚಡಚಣ: ದೇಶದಲ್ಲಿ ಕೋವಿಡ್ ನಿಯಂತ್ರಣಕ್ಕೆ ಲಾಕ್ಡೌನ್ ಆದೇಶಿಸಿದ ದಿನದಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ಬಸ್ ಸಂಚಾರಕ್ಕೆ ಸರ್ಕಾರ ಮಂಗಳವಾರದಿಂದ ಸುರಕ್ಷತಾ ಕ್ರಮದೊಂದಿಗೆ ಮತ್ತೆ ಸಂಚರಿಸಲು ಅವಕಾಶ ನೀಡಿದ್ದರೂ ಪ್ರಯಾಣಿಕರು ಮಾತ್ರ ಬರಲೇ ಇಲ್ಲ.
ಚಡಚಣ ಬಸ್ ನಿಲ್ದಾಣಕ್ಕೆ ಬಂದು ನಿಂತ ಬಸ್ ಸಂಜೆವರೆಗೂ ಪ್ರಯಾಣಿಕರಿಗಾಗಿ ಕಾಯುತ್ತಿರುವ ದೃಶ್ಯ ಕಂಡು ಬಂದಿತು. ಬಿಕೋ ಎನ್ನುತ್ತಿದ್ದ ಚಡಚಣ ಬಸ್ ನಿಲ್ದಾಣಕ್ಕೆ ಮಂಗಳವಾರ ಬೆಳಗ್ಗೆ ಸುಮಾರು 15 ಜನರನ್ನು ಹೊತ್ತು ವಿಜಯಪುರದಿಂದ ಆಗಮಿಸಿತು. ಆದರೆ, ಮರಳಿ ವಿಜಯಪುರಕ್ಕೆ ಹೋಗಲು ಯಾವೊಬ್ಬ ಪ್ರಯಾಣಿಕರೂ ಬರಲಿಲ್ಲ. ನಂತರ ಮತ್ತೂಂದು ಬಸ್ 17 ಜನರು ಹೊತ್ತ ಆಗಮಿಸಿತು.
ಮರಳಿ ಹೋಗಲು ಪ್ರಯಾಣಿಕರಿಗಾಗಿ ಕಾಯ್ದು ನಂತರ ಕೇವಲ 7 ಜನರನ್ನು ಹೊತ್ತು ಮರಳಿ ವಿಜಯಪುರಕ್ಕೆ ಸಂಚರಿಸಿತು. ಇಂಡಿ ಪಟ್ಟಣದಿಂದ ನಿತ್ಯ ಹತ್ತಾರು ಬಸ್ ಗಳು ಹಾಗೂ ಖಾಸಗಿ ಮ್ಯಾಕ್ಸಿಕ್ಯಾಬ್ ಗಳು ಸಾವಿರಾರು ಜನರನ್ನು ಹೊತ್ತು ಸಾಗುತ್ತಿದ್ದವು. ಆದರೆ, ಕೋವಿಡ್ ಸೋಂಕಿನ ಭಯದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟಸಾಧ್ಯ ಎಂದು ಖಾಸಗಿ ಮ್ಯಾಕ್ಸಿಕ್ಯಾಬ್ಗಳು ಸಹ ರಸ್ತೆಗಿಳಿಯಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ
Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್
BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ
SSLC ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಎದೆನೋವು… ಆಸ್ಪತ್ರೆಗೆ ದಾಖಲು
MUST WATCH
ಹೊಸ ಸೇರ್ಪಡೆ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು