ಕೇಂದ್ರ ಬಸ್‌ ನಿಲ್ದಾಣದಲ್ಲಿ ಚಿತ್ರಾಲೋಕ


Team Udayavani, Jun 13, 2021, 7:31 PM IST

fಗಹಜಹಗ್ದಸಅಸದ್

ವಿಜಯಪುರ: ಸಹಾಯಕ ಸಂಚಾರಿ ಅಧಿಧೀಕ್ಷಕರಾಗಿರುವ ದೇವೇಂದ್ರಪ್ಪ ಡಂಬಳ ಅವರು ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬಿಡಿಸಿರುವ ವಿಭಿನ್ನ ದೃಷ್ಟಿಕೋನದ ಸಾಮಾಜಿಕ ಜಾಗೃತಿ ಸಂದೇಶ ಬೀರುವ ಚಿತ್ರಗಳು ಇದೀಗ ಗಮನ ಸೆಳೆಯುವ ಜತೆಗೆ ಮೆಚ್ಚುಗೆ ಗಳಿಸಿವೆ. ಬೆನ್ನಿಗೆ ಸಿಲಿಂಡರ್‌ ಹೊತ್ತ ಮಗು ಸಸಿ ನೆಡುವ ಚಿತ್ರಣ, ಕೈಗಾರಿಕೆ ಕಾರಣದಿಂದ ಪರಿಸರ ನಾಶವಾಗಿ ಜೀವ ಸಂಕುಲ ಸಂಚಕಾರಕ್ಕೆ ಸಿಲುಕಿರುವ ದುಸ್ಥಿತಿ, ಮದ್ಯಪಾನದಿಂದಾಗುವ ಅಪಘಾತಗಳು, ವೇಗ ನಿಯಂತ್ರಣ ತಪ್ಪಿದಲ್ಲಿ ಸಂಭವಿಸುವ ದುರಂತಗಳು, ಚಾಲಕರು ಮೊಬೈಲ್‌ನಲ್ಲಿ ಮಾತನಾಡುವುದರಿಂದ ಆಗಲಿರುವ ಅಪಘಾತಗಳು ಹೀಗೆ ವಿವಿಧ ವಿಷಯಗಳ ಚಿತ್ರಗಳನ್ನು ದೇವೇಂದ್ರ ಡಂಬಳ ತಮ್ಮ ಕುಂಚದಲ್ಲಿ ಅರಳಿಸಿದ್ದಾರೆ.

ವಿಜಯಪುರ 1ನೇ ಡಿಪೋದ ಕಾಂಪೌಂಡ್‌ ಗೋಡೆಗೆ ಬೆಳೆದ ಗಿಡ-ಬಳ್ಳಿಗೆ ಯುವತಿಯ ಚಿತ್ರ ಇಲಾಖೆ ಅಧಿ ಕಾರಿಗಳಿಂದ ಮನ್ನಣೆಗೆ ಪಾತ್ರವಾಗಿದೆ. ಇವರಲ್ಲಿರುವ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿದ್ದರಿಂದಲೇ ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಇಂತಹ ವೈವಿಧ್ಯಮಯ ಚಿತ್ರಗಳು ಅರಳಿವೆ. ದೇವೇಂದ್ರ ಅವರ ಕುಂಚದಲ್ಲಿ ಅರಳಿರುವ ವರ್ಣಮಯ ಚಿತ್ತಾರಗಳನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೂರ್ಮಾರಾವ್‌ ಅವರಲ್ಲೂ ಕುತೂಹಲ ಮೂಡಿಸಿದ್ದು, ಈ ಚಿತ್ರಗಳ ವೀಕ್ಷಣೆಗೆಂದೇ ವಿಜಯಪುರಕ್ಕೆ ಬರುವುದಾಗಿ ಹೇಳಿರುವುದು ಬಹು ದೊಡ್ಡ ಬಹುಮಾನ-ಉಡುಗೊರೆಗೆ ಸಮಾನ ಎನ್ನುತ್ತಾರೆ ಕಲಾವಿದ ದೇವೇಂದ್ರ ಹಾಗೂ ಹಿರಿಯ ಅ ಧಿಕಾರಿಗಳು.

ಚಿತ್ರಕಲೆಯಲ್ಲಿ ಶಾಸ್ತ್ರೀಯ ಅಧ್ಯಯನ, ಶಿಕ್ಷಣ ಪಡೆಯದಿದ್ದರೂ ದೇವೇಂದ್ರಪ್ಪ ಅವರಲ್ಲಿ ಜನ್ಮದತ್ತವಾಗಿ ಚಿತ್ರಕಲೆ ಬಂದಿದೆ. ಬಾಲ್ಯದಲ್ಲಿ ಸ್ಕೆಚ್‌ ಪೆನ್‌, ಪೆನ್ಸಿಲ್‌ನಲ್ಲಿ ಬಿಡಿಸುತ್ತಿದ್ದ ಚಿತ್ರಕಲೆ ಸಹಜತೆ ಹೊಂದಿದ್ದವು. ಶಿಕ್ಷಕರಾಗಬೇಕೆಂಬ ಮಹದಾಸೆಯೊಂದಿಗೆ ಬಿಎ, ಬಿಇಡಿ ಮಾಡಿದ್ದ ಅವರು ಎಂಎ ಓದುವಾಗಲೇ 2008ರಲ್ಲಿ ಸಾರಿಗೆ ಸಂಸ್ಥೆಯ ಸಾರಿಗೆ ನಿರೀಕ್ಷಕ ಹುದ್ದೆಗೆ ಆಯ್ಕೆಯಾಗಿ ಬೆಂಗಳೂರು, ಮೈಸೂರು, ಕಲಬುರಗಿ ಅಂತೆಲ್ಲ ಸೇವಾ ಸಂಚಾರ ಮಾಡಿದ್ದಾರೆ.

ತಮ್ಮ ಎರಡು ಮೂತ್ರಕೋಶಗಳು ವಿಫಲವಾಗಿ ಅನಾರೋಗ್ಯ ಕಾರಣದಿಂದ ಎರಡು ವರ್ಷಗಳ ಹಿಂದೆ ವಿಜಯಪುರಕ್ಕೆ ವರ್ಗವಾಗಿ ಬಂದ ದೇವೇಂದ್ರ ತಾಯಿ ನಿಂಗಮ್ಮ ನೀಡಿದ ಒಂದು ಮೂತ್ರಕೋಶ ದಾನದಿಂದ ಇದೀಗ ಮರುಜೀವ ಪಡೆದಿದ್ದಾರೆ.

ಟಾಪ್ ನ್ಯೂಸ್

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

ಸಿ.ಟಿ.ರವಿ

Vijayapura; ವಿಕಸಿತ ಭಾರತಕ್ಕೆ ವಿಶ್ವನಾಯಕ ಮೋದಿ ನಾಯಕತ್ವ ಅನಿವಾರ್ಯ: ಸಿ.ಟಿ.ರವಿ

ಯತ್ನಾಳ್

Loksabha Election; ಈಶ್ವರಪ್ಪ ಬಂಡಾಯವನ್ನು ರಾಜಾಹುಲಿ ಶಮನ ಮಾಡಲಿ: ಯತ್ನಾಳ್

Suspended

Vijaypur: ಕರ್ತವ್ಯ ಲೋಪ ಡಿಡಿಪಿಐ ನಾಗೂರ ಮತ್ತೆ ಸಸ್ಪೆಂಡ್

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Loksabha

Udupi Chikmagalur Lok Sabha Election: ಮಹಿಳಾ ಮತದಾರರೇ ಅಧಿಕ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.