ಕಾಮಗಾರಿಗೆ ತಕರಾರು: ರೈತನ ಮನೆಗೆ ಶಾಸಕ ಭೇಟಿ
Team Udayavani, Nov 30, 2018, 12:41 PM IST
ದೇವರ ಹಿಪ್ಪರಗಿ: ನನ್ನ ಅಧಿಕಾರ ಅವಧಿಯಲ್ಲಿ ಜನರಿಗೋಸ್ಕರ ಹಗಲಿರಳು ಶ್ರಮಿಸುತ್ತೇನೆ. ರೈತರು ದಿನದ 24 ಗಂಟೆಯಲ್ಲಿ ಯಾವಾಗ ಬೇಕಾದರೂ ನನ್ನನ್ನು ಭೇಟಿಯಾಗಬಹುದು ಎಂದು ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕರು ಕುಡಿಯುವ ನೀರಿಗಾಗಿ ಅಧಿಕಾರಿಗಳು ಸಭೆ ನಡೆಸುತ್ತಿದ್ದ ಸಂದರ್ಭದಲ್ಲಿ ಬಮ್ಮನಜೋಗಿ, ಕನ್ನೋಳ್ಳಿ, ಕೊಟನೂರ ನೂರಾರು ರೈತರು ಏಕಾಏಕಿ ಜಮಾಯಿಸಿ ಕುಡಿಯಲು ನೀರು ಕೊಡಿ ಎಂದು ಘೋಷಣೆ ಕೂಗಿದರು. ತಕ್ಷಣ ಶಾಸಕರು ರೈತರ ಬಳಿ ಆಗಮಿಸಿ ಸಮಸ್ಯೆ ಆಲಿಸಿದರು. ಬಮ್ಮನಜೋಗಿ ಕೆರೆಗೆ ನೀರು ಬರಬೇಕಾದರೆ ಬೈರವಾಡಗಿಯ ಗ್ರಾಮದ ಮೆಲೆ ಹಾದು ಹೋದ ಮುಳವಾಡ ಏತ ನೀರಾವರಿ ಕಾಲುವೆಯಿಂದ ಮಾತ್ರ ಸಾಧ್ಯ. ಬೈರವಾಡಗಿಯ ರೈತ ರಾಮು ಮರಾಠೆ ಇನ್ನಿತರು ತಮ್ಮ ಜಮೀನಿನಲ್ಲಿ ಹಾದು ಹೋದ ಕಾಲುವೆಗೆ ತಕರಾರು ಇಟ್ಟಿದ್ದಾರೆ. ಇವರ ಹೊಲದಲ್ಲಿ 500 ಅಡಿ ಕಾಲುವೆ ಕಾಮಗಾರಿ ಪೂರ್ಣಗೊಂಡರೆ ಬಮ್ಮನಜೋಗಿ ಕೆರೆಗೆ ನೀರು ಬರುತ್ತದೆ. ಆ ರೈತ ಯಾರು ಹೇಳಿದರು ಕಾಲುವೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ರೈತ ರಾಜಶೇಖರ ಇಜೇರಿ ಶಾಸಕರ ಮುಂದೆ ಅಳಲು ತೋಡಿಕೊಂಡರು. ತಕ್ಷಣ ಸ್ಪಂದಿಸಿದ ಶಾಸಕರು, ಸಭೆ ಮುಕ್ತಾಯ ಬಳಿಕ ರೈತರೊಂದಿಗೆ ಬೈರವಾಡಗಿ ಗ್ರಾಮಕ್ಕೆ ತೆರಳಿದರು. ತಕರಾರು ಇಟ್ಟ ರೈತ ರಾಮು ಮರಾಠೆ ಮನೆಗೆ ದಿಢೀರ್ ಭೇಟಿ ನೀಡಿದರು.
ಕಾಮಗಾರಿಗೆ ಅವಕಾಶ ಕೊಡಿ. ನಿಮಗೆ ಬರಬೇಕಾದ ಪರಿಹಾರ ಧನ ನಾನೇ ಕೊಡಿಸುತ್ತೇನೆ ಎಂದು ಅವರ ತಾಯಿಗೆ ಹೇಳಿದರು.
ರೈತರನ್ನು ಸಮಧಾನಪಡಿಸಿದ ಶಾಸಕರು 2 ದಿನಗಳಲ್ಲಿ ಸಮಸ್ಯೆ ಬಗೆಹರಿಸುತ್ತೇನೆಂದು ಮನವೊಲಿಸಿದರು. ಶಾಸಕರ
ಭರವಸೆ ನಂತರ ರೈತರು ತಮ್ಮ ತಮ್ಮ ಗ್ರಾಮಕ್ಕೆ ತೆರಳಿದರು. ಗುರುಲಿಂಗ ದೇವರು ಹಿರೇಮಠ, ಕೊಕಟನೂರ ಗದ್ದುಗೆ ಮಠದ ಶ್ರೀಗಳು ರೈತರೊಂದಿಗೆ ಪಾಲ್ಗೊಂಡಿದ್ದರು.
ಅಣ್ಣುಗೌಡ ಪಾಟೀಲ, ರಮೇಶ ಮಸಬಿನಾಳ, ಮಹಾಂತೇಶ ವಂದಾಲ, ಎಂ.ಎಸ್. ಬಿರಾದಾರ, ರಾಮನಗೌಡ ಪಾಟೀಲ,
ಆರ್.ಎನ್. ಪಾಟೀಲ, ಮಡು ಯಂಕಂಚಿ, ಸಂಗಣ್ಣ ಹಂದರಾಳ, ಎಂ.ಡಿ ಕೊಣಶಿರಸಿಗಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
SSLC ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಎದೆನೋವು… ಆಸ್ಪತ್ರೆಗೆ ದಾಖಲು
Muddebihal: ಆಕಸ್ಮಿಕ ಬೆಂಕಿ: 2 ಲಕ್ಷ ಮೌಲ್ಯದ ಗುಜರಿ ಸಾಮಗ್ರಿ ಬೆಂಕಿಗಾಹುತಿ
BJP; ಜಿಗಜಿಣಗಿ ಹಠಾವೋ, ಬಿಜೆಪಿ ಬಚಾವೋ ಘೋಷಣೆ, ಪ್ರತಿಭಟನೆ
Vijayapura; ಪರೀಕ್ಷೆ ಬರೆಯುವ ಸಹಾಯಕ ಇಲ್ಲದೇ ವಿಕಲಾಂಗ ಪರೀಕ್ಷಾರ್ಥಿ ಪರದಾಟ
Vijayapura; ಚುನಾವಣೆ ಕರ್ತವ್ಯ ಚ್ಯುತಿ: ಶಿಕ್ಷಕ ಮುಲ್ಲಾ ಸಸ್ಪೆಂಡ್
MUST WATCH
ಹೊಸ ಸೇರ್ಪಡೆ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ